Skip to main content

Posts

Showing posts from August, 2021

ನಾಳೆ ರಾಜ್ಯಾದ್ಯಂತ ' ವಿಶೇಷ ಕೊರೋನಾ ಲಸಿಕಾ ಉತ್ಸವ' : ಎಲ್ಲರಿಗೂ ಸಿಗಲಿದೆ ಲಸಿಕೆ.!

  ಬೆಂಗಳೂರು : ರಾಜ್ಯದಲ್ಲಿ ಪ್ರತಿ ಬುಧವಾರ ವಿಶೇಷ ಲಸಿಕಾ ಉತ್ಸವ ( Special Corona Vaccine Utsav ) ನಡೆಸಲಾಗುತ್ತದೆ. ಈ ಮೂಲಕ 10 ಲಕ್ಷ ಕೊರೋನಾ ಲಸಿಕೆಯನ್ನು ( Corona Vaccine ) ನೀಡುವ ಗುರಿಯನ್ನು ಹೊಂದಲಾಗಿದೆ ಎಂಬುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದರು.   ಇದರಂತೆಯೇ ನಾಳೆ ರಾಜ್ಯಾದ್ಯಂತ ವಿಶೇಷ ಲಸಿಕಾ ಉತ್ಸವ ನಡೆಯಲಿದೆ. ಇಂತಹ ಲಸಿಕಾ ಉತ್ಸವದಲ್ಲಿ 2 ನೇ ಡೋಸ್ ಪಡೆದವರಿಗೆ , 18 ವರ್ಷ ಮೇಲ್ಪಟ್ಟವರಿಗೂ ಮೊದಲ ಡೋಸ್ ಕೋವಿಶೀಲ್ಡ್ , ಕೋವ್ಯಾಕ್ಸಿನ್ ಲಸಿಕೆ ( Covishield and Covaxin ) ಲಭ್ಯವಾಗಲಿದೆ. ಹೌದು.. ಇನ್ನು ಮುಂದೆ ಪ್ರತಿ ಬುಧವಾರ ವಿಶೇಷ ಲಸಿಕಾ ಉತ್ಸವ ನಡೆಸಿ ಸುಮಾರು 10 ಲಕ್ಷ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದರು. ಆಗಸ್ಟ್ ತಿಂಗಳಲ್ಲೇ 1.10 ಕೋಟಿ ಲಸಿಕೆ ಕೇಂದ್ರ ಸರ್ಕಾರದಿಂದ ಬಂದಿದೆ. ನಾನು ಮತ್ತು ಮುಖ್ಯಮಂತ್ರಿಗಳು ಕೇಂದ್ರದ ಮಟ್ಟದಲ್ಲಿ ಚರ್ಚಿಸಿದ ಬಳಿಕ ಸಮರ್ಪಕವಾಗಿ ಪೂರೈಕೆಯಾಗುತ್ತಿದೆ. ಇನ್ನು ಮುಂದೆ ಪ್ರತಿ ದಿನ 5 ಲಕ್ಷ ಲಸಿಕೆ ನೀಡಲಾಗುವುದು. ವಾರದಲ್ಲಿ ಒಂದು ದಿನ ಬುಧವಾರ ಲಸಿಕಾ ಉತ್ಸವ ನಡೆಸಿ ಈ ಪ್ರಮಾಣವನ್ನು 5 ದಿಂದ 10 ಲಕ್ಷಕ್ಕೆ ಹೆಚ್ಚಿಸಲಾಗುವುದು. ಇದರಿಂದ ಒಂದೂವರೆಯಿಂದ ಎರಡು ಕೋಟಿ ಲಸಿಕೆಯನ್ನು ಒಂದು ತಿಂಗಳಲ್ಲಿ ನೀಡಬಹುದು. ಇಡೀ ದೇಶದಲ್ಲಿ ಲಸಿಕೆ ಕಾರ್ಯ ಪೂ...

ಕತ್ತು ಕಂಕುಳಿನ ಕಪ್ಪು ಕಲೆಯನ್ನು ತೆಗೆಯುವ ಸುಲಭ ವಿಧಾನ ಇದು.

ಪ್ರತಿದಿನ ಸ್ವಚ್ಛಗೊಳಿಸಿದರೂ ದೇಹದ ಕೆಲ ಭಾಗಗಳಲ್ಲಿ ಕೊಳೆ ಉಳಿದುಕೊಂಡು ಬಿಡುತ್ತದೆ. ಹೀಗಾಗಿ ಈ ಭಾಗದಲ್ಲಿ ಕಪ್ಪು ಬಣ್ಣ ಕಾಣಿಸಲು ಆರಂಭವಾಗುತ್ತದೆ.   ·           ದೇಹದ ಕೆಲ ಭಾಗಗಳಲ್ಲಿ ಕೊಳೆ ಉಳಿದುಕೊಂಡು ಬಿಡುತ್ತದೆ ·          ಕುತ್ತಿಗೆ ಮತ್ತು ಕಂಕುಳ ಭಾಗದಲ್ಲೇ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ·          ಈ ಸಮಸ್ಯೆಗೆ ಸುಲಭ ಪರಿಹಾರ ಏನು ತಿಳಿಯಿರಿ ಪ್ರತಿದಿನ ಸ್ವಚ್ಛಗೊಳಿಸಿದರೂ ದೇಹದ ಕೆಲ ಭಾಗಗಳಲ್ಲಿ ಕೊಳೆ ಉಳಿದುಕೊಂಡು ಬಿಡುತ್ತದೆ. ಹೀಗಾಗಿ ಈ ಭಾಗದಲ್ಲಿ ಕಪ್ಪು ಬಣ್ಣ ಕಾಣಿಸಲು ಆರಂಭವಾಗುತ್ತದೆ. ನೋಡುವುದಕ್ಕೂ ಇದು ಅಸಹ್ಯವಾಗಿ ಕಾಣುತ್ತದೆ. ಮುಖ್ಯವಾಗಿ ಕುತ್ತಿಗೆ ಮತ್ತು ಕಂಕುಳ ಭಾಗದಲ್ಲೇ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.. ಸಾಬೂನು , ಶವರ್ ಜೆಲ್ ಗಳನ್ನು ಎಷ್ಟು ಹಾಕಿ ತಿಕ್ಕಿದರೂ ಈ ಕಪ್ಪು ಕೊಳೆ ಹೋಗುವುದೇ ಇಲ್ಲ.   ಈ ಕೊಳೆಯನ್ನು ಸುಲಭವಾಗಿ ಸ್ವಚ್ಛಗೊಳಿಸುವ ವಿಧಾನವನ್ನು ನಾವು ಹೇಳುತ್ತೇವೆ. ಈ ವಿಧಾನವನ್ನು ಬಹಳ ಹಿಂದಿನಿಂದಲೂ ಅನುಸರಿಸಲಾಗುತ್ತಿದೆ.   - ಹಸಿ ಹಾಲಿನಲ್ಲಿ ಬಹಳಷ್ಟು ಪೋಷಕಾಂಶಗಳಿರುತ್ತವೆ. ಹಸಿ ಹಾಲಿಗೆ ಅರಶಿನ ಬೆರೆಸಿ   , ಕುತ್ತಿಗೆ , ಕಂಕುಳ ಭಾಗಕ್ಕೆ ಹಚ್ಚಿದರೆ  ಕಪ್...

ರಾಜ್ಯದಲ್ಲಿ ಸೆ.6ರಿಂದ 6 ರಿಂದ 8ನೇ ತರಗತಿ ಆರಂಭಿಸೋದಕ್ಕೆ ಸರ್ಕಾರ ಅನುಮತಿ - ಸಚಿವ ಆರ್ ಅಶೋಕ್ ಘೋಷಣೆ

  ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಶೇ. 2 ಕ್ಕಿಂತ ಕಡಿಮೆ ಇರುವಂತ ಪಾಸಿಟಿವಿಟಿ ದರ ಆಧರಿಸಿ , ಜಿಲ್ಲೆಗಳಲ್ಲಿ ಕೊರೋನಾ ನಿಯಂತ್ರಣ ಕ್ರಮಗಳನ್ನು ಅನುಸರಿ 6 ರಿಂದ 8 ನೇ ತರಗತಿಗಳನ್ನು ಸೆಪ್ಟೆಂಬರ್ 6 ರಿಂದ ಆರಂಭಿಸಲಾಗುತ್ತದೆ ಎಂಬುದಾಗಿ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ಈ ಕುರಿತಂತೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ನಡೆದಂತ ತಾಂತ್ರಿಕ ತಜ್ಞರ ಸಭೆಯ ಬಳಿಕ ಸಭೆಯ ನಿರ್ಧಾರಗಳನ್ನು ಸುದ್ದಿಗಾರರೊಂದಿಗೆ ಮಾತನಾಡಿ ಮಾಹಿತಿ ನೀಡಿದ ಕಂದಾಯ ಸಚಿವ ಆರ್.ಅಶೋಕ್ ಅವರು , ಶನಿವಾರ ಮತ್ತು ಭಾನುವಾರ ಹೊರತುಪಡಿಸಿ , ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 2 ಕ್ಕಿಂತ ಕಡಿಮೆ ಇರುವಂತ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 6 ರಿಂದ 6 ರಿಂದ 8 ನೇ ತರಗತಿಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ ಎಂದರು. ಸೋಮವಾರದಿಂದ ಶುಕ್ರವಾರದವರೆಗೆ ಶಾಲೆಗಳನ್ನು ನಡೆಸಲಾಗುತ್ತದೆ. ಶನಿವಾರ ಮತ್ತು ಭಾನುವಾರ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ. ಕೇರಳದಿಂದ ಬರೋರಿಗೆ ಕೊರೋನಾ ನೆಗೆಟಿವ್ ವರದಿ ಕಡ್ಡಾಯಗೊಳಿಸಲಾಗಿದೆ. ಶೇ. 50 ರಷ್ಟು ಮಕ್ಕಳು ಮಾತ್ರ ಶಾಲೆಗ ಹಾಜರಾಗಬೇಕು. ಪಾಸಿಟಿವಿಟಿ ದರ ಶೇ. 2 ಕ್ಕಿಂತ ಹೆಚ್ಚಿರುವಂತ ಜಿಲ್ಲೆಗಳಲ್ಲಿ ಶಾಲೆಗಳನ್ನು ಆರಂಭಿಸೋದಕ್ಕೆ ಅನುಮತಿ ಇಲ್ಲ ಎಂದರು.

ಸುನಿಲ್ ಗವಾಸ್ಕರ್, ದಿಲೀಪ್ ವೆಂಗ್ ಸರ್ಕಾರ್, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ರೋಹಿತ್ತರಬೇತುದಾರ, ಮಾಜಿ ಕ್ರಿಕೆಟಿಗ 'ವಸೂ ಪರಾಂಜಪೆ' ನಿಧನ

ಮುಂಬೈ : ಮಾಜಿ ಕ್ರಿಕೆಟಿಗ ವಸೂ ಪರಾಂಜಪೆ ( 82 ) ಸೋಮವಾರ ಮುಂಬೈನಲ್ಲಿ ನಿಧನರಾಗಿದ್ದಾರೆ. ಈ ಮೂಲಕ ಭಾರತೀಯ ಕ್ರಿಕೆಟ್ ನ ಹಲವಾರು ಸೂಪರ್ ಸ್ಟಾರ್ ಗಳ ವೃತ್ತಿ ಜೀವನ ರೂಪಿಸಿದ್ದಂತ ತರಬೇತುದಾರ ವಸೂ ಪರಾಂಜಪೆ ಇನ್ನಿಲ್ಲವಾಗಿದ್ದಾರೆ. ಪರಂಜಪೆ 29 ಪ್ರಥಮ ದರ್ಜೆ ಪಂದ್ಯಗಳಲ್ಲಿ ಮುಂಬೈಯನ್ನು ಪ್ರತಿನಿಧಿಸಿದ್ದಾರೆ. ಎರಡು ಶತಕಗಳು ಮತ್ತು ಅಷ್ಟೇ ಅರ್ಧಶತಕಗಳೊಂದಿಗೆ 785 ರನ್ ಗಳಿಸಿದ್ದಾರೆ. ಅವರು ಒಂಬತ್ತು ವಿಕೆಟ್ ಗಳನ್ನು ಸಹ ಪಡೆದರು. ಅವರು ಕೋಚ್ ಪಾತ್ರದಲ್ಲಿ ನಿವೃತ್ತಿಯ ನಂತರ ಖ್ಯಾತಿಯನ್ನು ಪಡೆದಿದ್ದರು. ಸುನಿಲ್ ಗವಾಸ್ಕರ್ , ದಿಲೀಪ್ ವೆಂಗ್ ಸರ್ಕಾರ್ , ರಾಹುಲ್ ದ್ರಾವಿಡ್ , ಸಚಿನ್ ತೆಂಡೂಲ್ಕರ್ , ರೋಹಿತ್ ) ಸೇರಿದಂತೆ ಭಾರತೀಯ ಕ್ರಿಕೆಟ್ ನ ಹಲವಾರು ಸೂಪರ್ ಸ್ಟಾರ್ ಗಳ ವೃತ್ತಿಜೀವನವನ್ನು ರೂಪಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಈ ಕುರಿತಂತೆ ಭಾರತದ ಮಾಜಿ ಆಲ್ರೌಂಡರ್ ಮತ್ತು ರಾಷ್ಟ್ರೀಯ ಕ್ರಿಕೆಟ್ ತಂಡದ ಪ್ರಸ್ತುತ ಮುಖ್ಯ ತರಬೇತುದಾರ ರವಿಶಾಸ್ತ್ರಿ ಸಾಮಾಜಿಕ ಮಾಧ್ಯಮಗಳಲ್ಲಿ ಗೌರವ ಸಲ್ಲಿಸಿದ್ದು , ವಸೂ ಪರಾಂಜಪೆಅವರ ನಿಧನದಿಂದ ನಿಜವಾಗಿಯೂ ದುಃಖಿತನಾಗಿದ್ದೇನೆ. ಅವರು ಆಟದಲ್ಲಿ ಒಂದು ಸಂಸ್ಥೆಯಾಗಿದ್ದರು , ಅವರು ಏನು ಮಾಡಿದರೂ ನಿಜವಾದ ಸಕಾರಾತ್ಮಕ ಕಂಪನವನ್ನು ಹೊಂದಿತ್ತು. ಅವರ ಕುಟುಂಬಕ್ಕೆ ಸಂತಾಪಗಳು. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ತಿಳಿಸಿದ್ದಾರೆ.

ಕರ್ನಾಟಕ: 2 ಲಸಿಕೆ ಪಡೆದ ಆರೋಗ್ಯ ಕಾರ್ಯಕರ್ತರಿಗೆ ಪ್ರತಿಕಾಯ ಪರೀಕ್ಷೆ

  ಬೆಂಗಳೂರು , ಆಗಸ್ಟ್ 30: ಎರಡು ಕೊರೊನಾ ಲಸಿಕೆ ಪಡೆದ ಕಾರ್ಯಕರ್ತರಿಗೆ ಪ್ರತಿಕಾಯಗಳ ಪರೀಕ್ಷೆ ನಡೆಸಲಾಗುತ್ತಿದೆ. ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಕೋವಿಡ್- 19 ಪ್ರತಿಕಾಯಗಳ ಪರೀಕ್ಷೆ ನಡೆಸುತ್ತಿದೆ. ಆರೋಗ್ಯ ಕಾರ್ಯಕರ್ತರು ಎರಡೂ ಡೋಸ್ ಗಳ ಲಸಿಕೆಯನ್ನು ಪಡೆದು 6 ತಿಂಗಳು ಪೂರ್ಣಗೊಳಿಸಿದ್ದು , ಈ ಅವಧಿಯಲ್ಲಿ ಪ್ರತಿಕಾಯಗಳ ಕುಸಿತ ಉಂಟಾಗಿದೆಯೇ ?  ಉಂಟಾಗಿದ್ದರೆ ಮತ್ತೊಂದು ಡೋಸ್ ಲಸಿಕೆ ಅಗತ್ಯವಿದೆಯೇ ಎಂಬುದನ್ನು ಅರಿಯಲು ಈ ಪರೀಕ್ಷೆ ನಡೆಸಲಾಗುತ್ತಿದೆ. ಕೊರೊನಾ ಲಸಿಕೆಯ ನಡುವಿನ ಅಂತರವನ್ನು 12-16 ರಿಂದ 6-8 ವಾರಗಳಿಗೆ ಇಳಿಕೆ ಮಾಡಬೇಕೆಂದು , ಇಲ್ಲದೇ ಇದ್ದಲ್ಲಿ ಮೊದಲ ಡೋಸ್ ಗಳ ಲಸಿಕೆ ಪಡೆದ ನಂತರ ಸೋಂಕು ಎದುರಾದಲ್ಲಿ ಅದರ ವಿರುದ್ಧ ಹೋರಾಡಲು ಕಷ್ಟವಾಗುತ್ತದೆ. ಎರಡನೇ ಡೋಸ್ ಲಸಿಕೆಯಿಂದ ಉತ್ತಮ ಪ್ರತಿಕಾಯಗಳು ಉತ್ಪಾದನೆಯಾಗುತ್ತದೆ ಎಂದು ಡಾ. ಮಂಜುನಾಥ್ ಅಭಿಪ್ರಾಯಪಟ್ಟಿದ್ದಾರೆ. ಪ್ರತಿಕಾಯಗಳ ಪರೀಕ್ಷೆ ನಡೆಸುವ ಬಗ್ಗೆ ಹಾಗೂ ಹೆಚ್ಚುವರಿ ಡೋಸ್ ನೀಡುವ ಬಗ್ಗೆ ವೈದ್ಯಕೀಯ ಸಮೂಹದಲ್ಲೇ ಭಿನ್ನಾಭಿಪ್ರಾಯಗಳಿವೆ ಎಂದು ಲಸಿಕೆ ನೀಡುವುದಕ್ಕಾಗಿ ಇರುವ ಎನ್ ಟಿಎಜಿ ಡಾ.ಜಯಪ್ರಕಾಶ್ ಮುಳಿಯಿಲ್ ಹೇಳಿದ್ದಾರೆ. ಫೆಬ್ರವರಿ ತಿಂಗಳ ವೇಳೆಗೆ ಈ ಆರೋಗ್ಯ ಕಾರ್ಯಕರ್ತರಿಗೆ ಎರಡೂ ಡೋಸ್ ಲಸಿಕೆಯನ್ನು ಪೂರ್ಣಗೊಳಿಸಲಾಗಿತ್ತು. ಏಪ್ರಿಲ್ ತಿಂಗಳಲ್ಲಿ ಪ್ರತಿಕಾಯಗಳಿಗಾಗಿ ಪರೀಕ್ಷೆ ನಡೆಸಿದ್ದಾಗ ಉತ್ತಮ ಫಲಿತಾಂಶ...

ಕ್ರೈಂ ಸೀರಿಯಲ್ ನಿಂದ ಪ್ರೇರೇಪಿತರಾದ ಯುವಕರಿಂದ ಬೆಚ್ಚಿಬೀಳಿಸುವ ಕೃತ್ಯ

  ಲಕ್ನೋ:   ಇಂದಿನ ಯುವಜನರು ಹೆಚ್ಚಾಗಿ ವೆಬ್ ಸಿರೀಸ್ ನೋಡುತ್ತಾರೆ. ಉತ್ತಮ ಸಂದೇಶ ನೀಡುವಂತ ಕಥೆಗಳಾದರೆ ಪರವಾಗಿಲ್ಲ. ಆದರೆ ಅಪರಾಧ ಪ್ರಕರಣದಂತಹ ಕಥೆಗಳಿದ್ದು , ಆ ರೀತಿ ಮಾಡಿದರೆ ಏನಾಗಬಹುದು.. ? ಹೌದು , ಕ್ರೈಮ್ ವೆಬ್ ಸಿರೀಸ್ ನೋಡಿ ಅದರಿಂದ ಸ್ಪೂರ್ತಿ ಪಡೆದ ಮೂವರು ಯುವಕರು ಜ್ಯುವೆಲ್ಲರಿ ಅಂಗಡಿಯಲ್ಲಿ ದರೋಡೆ ಮಾಡಿರುವ ಆಘಾತಕಾರಿ ಘಟನೆ ಲಕ್ನೋದ ಗೋಮತಿ ನಗರದಲ್ಲಿ ನಡೆದಿದೆ.   ಒಟಿಟಿ ಯಲ್ಲಿ ಪ್ರಸಾರವಾಗುವ ಅಪರಾಧ ವೆಬ್ ಸರಣಿ ಮನಿಹೀಸ್ಟ್ ನಿಂದ ಪ್ರೇರಣೆ ಪಡೆದ ಮೂವರು ಯುವಕರು ದರೋಡೆಗಿಳಿದಿದ್ದಾರೆ. 24 ಗಂಟೆಗಳಲ್ಲಿ ಪ್ರಕರಣವನ್ನು ಭೇದಿಸಿದ ಪೊಲೀಸರು ಕಿಂಗ್ ಪಿನ್ ನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು. ಕೌಂಟರ್ ನಲ್ಲಿ ಸೇಲ್ಸ್ ಮ್ಯಾನ್ ಆಗಿದ್ದ ಪ್ರದೀಪ್ ಹಾಗೂ ಆತನ ಇಬ್ಬರು ಗೆಳೆಯರ ಕೈಗೆ ಪೊಲೀಸರು ಕೋಳ ಹಾಕಿ ಜೈಲಿಗಟ್ಟಿದ್ದಾರೆ. ಆರೋಪಿ ಇಮ್ರಾನ್ ನಿಂದ 15 ಲಕ್ಷ ರೂ. ಮೌಲ್ಯದ ಆಭರಣಗಳು , ಕಾರು ಹಾಗೂ ಬುರ್ಖಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅರ್ಧದಲ್ಲೇ ಶಾಲೆ ಬಿಟ್ಟ ಮೂವರು ಯುವಕರು ಐಷಾರಾಮಿ ಜೀವನಕ್ಕಾಗಿ ಕಳ್ಳತನಕ್ಕೆ ಇಳಿದಿದ್ದಾರೆ ಎಂದು ಪೊಲೀಸರು ತಿಳಿಸಿದರು

'SSLC ಪೂರಕ ಪರೀಕ್ಷೆ'ಗೆ ನೋಂದಾಯಿಸಿಕೊಳ್ಳಲು, ಶುಲ್ಕ ಪಾವತಿಗೆ ದಿನಾಂಕ ವಿಸ್ತರಣೆ

  ಬೆಂಗಳೂರು : ಇಂದು ಕೊನೆಗೊಳ್ಳುತ್ತಿದ್ದಂತ ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಗೆ ( SSLC Supplementary Examination ) ನೋಂದಾಯಿಸಿ ಕೊಳ್ಳೋ ದಿನಾಂಕವನ್ನು , ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ವಿಸ್ತರಣೆ ಮಾಡಿದೆ. ಈ ಕುರಿತಂತೆ ಸುತ್ತೋಲೆ ಹೊರಡಿಸಿರುವಂತ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು , 2021-22 ನೇ ಸಾಲಿನ ಸೆಪ್ಟೆಂಬರ್ ನಲ್ಲಿ ನಡೆಯಲಿರುವ ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಗೆ ( SSLC Exam ) ಅರ್ಹ ಅಭ್ಯರ್ಥಿಗಳ ಮಾಹಿತಿಯನ್ನು ಆನ್ ಲೈನ್ ಮುಖಾಂತರ ನೋಂದಾಯಿಸಲು ಹಾಗೂ ಶುಲ್ಕ ಪಾವತಿಸಲು ದಿನಾಂಕ 18-08-2021 ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಆದ್ರೇ.. ರಾಜ್ಯದ ಕೆಲವು ಶಾಲೆಗಳಿಂದ ಹಾಗೂ ಪೋಷಕರಿಂದ ಮಂಡಳಿಗೆ ದೂರವಾಣಿಯ ಮುಖಾಂತರ ವಿದ್ಯಾರ್ಥಿಗಳ ನೋಂದಣಿ ಮತ್ತು ಪರೀಕ್ಷಾ ಶುಲ್ಕ ಪಾವತಿಸುವ ದಿನಾಂಕವನ್ನು ವಿಸ್ತರಿಸಲು ಕೋರಿಕೆಗಳು ಬಂದ ಹಿನ್ನಲೆಯಲ್ಲಿ , ವಿದ್ಯಾರ್ಥಿಗಳ ನೋಂದಣಿ , ಪರೀಕ್ಷಾ ಶುಲ್ಕ ಪಾವತಿ ಹಾಗೂ ಪ್ರಸ್ತಾವನೆ ಸಲ್ಲಿಕೆ ದಿನಾಂಕಗಳನ್ನು ಈ ಕೆಳಕಂಡಂತೆ ಅಂತಿಮವಾಗಿ ವಿಸ್ತರಿಸಲಾಗಿದೆ. ಹೀಗಿದೆ ಎಸ್ ಎಸ್ ಎಲ್ ಸಿ ಪರೀಕ್ಷಾ ನೋಂದಣಿ , ಶುಲ್ಕ ಭರ್ತಿ ವಿಸ್ತರಣೆ ದಿನಾಂಕಗಳು ·          CCERF, CCEPF, CCERR, CCEPR, NSR ಮತ್ತು NSPR ವಿದ್ಯಾರ್ಥಿಗಳ ಮಾಹಿತಿಯನ್ನು ಅಪ್ ಲೋಡ್ ಮಾಡಲು ಈ ಮೊದಲು ದಿನಾಂಕ 30-08-202...

16 ತಿಂಗಳ ಅವಧಿಯಲ್ಲಿ 10 ಮಿಲಿಯನ್ ಬಳಕೆದಾರರನ್ನು ಸಂಪಾದಿಸಿದ 'ಕೂ' ಆಪ್...!

  ಟ್ವಿಟರ್​ಗೆ ಪರ್ಯಾಯವಾಗಿ ನಿರ್ಮಾಣವಾದ ಸ್ವದೇಶಿ ನಿರ್ಮಿತ ʼ ಕೂ ʼ ಅಪ್ಲಿಕೇಶನ್​ 10 ಮಿಲಿಯನ್​ ಚಂದಾದಾರರನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಕೂ ಅಪ್ಲಿಕೇಶನ್​ ಬಳಕೆಗೆ 16 ತಿಂಗಳ ಅವಧಿ ಕಳೆದಿದೆ. ಇದು ಕೂಡ ಟ್ವಿಟರ್​ನಂತೆ ಕೆಲಸ ಮಾಡುವ ಸಾಮಾಜಿಕ ಮಾಧ್ಯಮದ ವೇದಿಕೆಯಾಗಿದ್ದು ಇದರಲ್ಲಿ ಇಂಗ್ಲೀಷ್​ , ಹಿಂದಿ , ಕನ್ನಡ ಸೇರಿಂತೆ 7 ಭಾರತೀಯ ಭಾಷೆಯಲ್ಲಿ ಸಂವಹನ ನಡೆಸಬಹುದಾಗಿದೆ.   ಮೋದಿ ಸರ್ಕಾರದ ಜೊತೆ ಟ್ವಿಟರ್​ ಇಂಡಿಯಾ ಜಟಾಪಟಿ ಮುಂದುವರಿದ ಬೆನ್ನಲ್ಲೇ ಫೆಬ್ರವರಿ ತಿಂಗಳಿನಂದ 85 ಪ್ರತಿಶತಕ್ಕೂ ಅಧಿಕ ಮಂದಿ ಕೂ ಅಪ್ಲಿಕೇಶನ್​ನತ್ತ ವಾಲುತ್ತಿದ್ದಾರೆ. ಸರ್ಕಾರಿ ಸಚಿವರು , ವಿರೋಧ ಪಕ್ಷದ ನಾಯಕರು , ಕ್ರಿಕೆಟ್​ ಆಟಗಾರರು ಹಾಗೂ ಬಾಲಿವುಡ್​ ಸೆಲೆಬ್ರಿಟಿಗಳು ಸೇರಿದಂತೆ ಘಟಾನುಘಟಿಗಳೇ ಭಾರತೀಯ ಭಾಷೆಗಳಲ್ಲಿ ಕೂ ಅಪ್ಲಿಕೇಶನ್​ ಬಳಕೆ ಮಾಡುತ್ತಿದ್ದಾರೆ. ಟ್ವಿಟರ್​ ಹಾಗೂ ಸರ್ಕಾರದ ನಡುವೆ ಕಿತ್ತಾಟ ನಡೆಯುತ್ತಿದ್ದ ನಡುವೆಯೇ ನಮ್ಮ ಅಪ್ಲಿಕೇಶನ್​ ಬೆಳಕಿಗೆ ಬಂದಿದೆ. ಜನರಿಗೂ ತಾಯ್ನಾಡು ಭಾಷೆಯಲ್ಲಿಯೇ ಸಂವಹನ ನಡೆಸಲು ಈ ಸಾಮಾಜಿಕ ಮಾಧ್ಯಮ ವೇದಿಕೆ ಸೂಕ್ತ ಎಂದು ಎನಿಸಲು ಆರಂಭಿಸಿದೆ ಎಂದು ಕೂ ಸಹ ಸಂಸ್ಥಾಪಕ ಹಾಗೂ ಸಿಇಓ ಅಪ್ರಮೇಯ ರಾಧಾಕೃಷ್ಣನ್​ ಹೇಳಿದ್ದಾರೆ.

ಪೈಜರ್ ಕೋವಿಡ್ ಲಸಿಕೆ ಪಡೆದವರಲ್ಲಿ ಹೆಚ್ಚಿದ ಆತಂಕ: ಮಹಿಳೆ ಸಾವು..!

  ವೆಲ್ಲಿಂಗ್ಟನ್ , ಆ. 30- ಕೊರೊನಾ ಲಸಿಕೆ ಪಡೆದ ಮಹಿಳೆಯರೊಬ್ಬರು ಸಾವನ್ನಪ್ಪುವ ಮೂಲಕ ನ್ಯೂಜಿಲ್ಯಾಂಡ್‍ನಲ್ಲಿ ನಡೆದಿದೆ. ಪೈಜರ್ ಲಸಿಕೆ ಪಡೆದ ಮಹಿಳೆ ಲಘು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ನ್ಯೂಜಿಲ್ಯಾಂಡ್‍ನಲ್ಲಿ ಸುಮಾರು 20 ವರ್ಷಕ್ಕೂ ಹೆಚ್ಚು ಮಂದಿ ಕೋವಿಡ್ ಲಸಿಕೆ ಪಡೆದಿದ್ದು , ಈಗ ನಾನಾ ರೀತಿಯ ಆತಂಕಗಳು ಉದ್ಭವಿಸಿವೆ. ಮೃತಪಟ್ಟ ಮಹಿಳೆಗೆ ವಿವಿಧ ಆರೋಗ್ಯ ಸಮಸ್ಯೆಗಳು ಇರುವುದಾಗಿ ತಿಳಿದು ಬಂದಿತ್ತು. ಲಸಿಕೆ ಪಡೆದ ಬಳಿಕ ಆಕೆ ಮೃತಪಟ್ಟಿರುವುದು ಖಚಿತವಾಗಿದೆ ಎಂದು ಆರೋಗ್ಯ ಇಲಾಖೆಯ ಮಹಾನಿರ್ದೇಶಕ ಆಯಸ್ಲೆಬ್ಲ್ಯೂಮ್‍ಫೀಲ್ಡ್ ತಿಳಿಸಿದ್ದಾರೆ. ಈ ನಡುವೆ ಕೋವಿಡ್ ಸೋಂಕು ನಿಯಂತ್ರಿಸಲು ಪ್ರಧಾನಮಂತ್ರಿ ಜಾಸಿಂಡಾ ಆಡ್ರೈನ್ ಎರಡು ವಾರಗಳ ಕಾಲ ಲಾಕ್‍ಡೌನ್ ಮುಂದುವರೆಸಿದ್ದಾರೆ.

ಶಾಲೆಗಳ ಆರಂಭದ ಕುರಿತು ಸಿಎಂ ನಿರ್ಧಾರ - ಸಚಿವ ಬಿ.ಸಿ.ನಾಗೇಶ್

  ಬೆಂಗಳೂರು: ರಾಜ್ಯದಲ್ಲಿ ಶಾಲೆಗಳ ಆರಂಭದ ಕುರಿತು ಮುಖ್ಯಮಂತ್ರಿಗಳು ತಾಂತ್ರಿಕ ಶಿಕ್ಷಣ ಸಮಿತಿ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಶಾಲೆಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರಾದ ಬಿ.ಸಿ.   ನಾಗೇಶ್ ಅವರು ಇಂದು ತಿಳಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ' ಜಗನ್ನಾಥ ಭವನ ' ಕ್ಕೆ ಭೇಟಿ ನೀಡಿ ಕಾರ್ಯಕರ್ತರು ಮತ್ತು ಸಾರ್ವಜನಿಕರನ್ನು ಭೇಟಿ ಮಾಡಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಒಂದನೇ ತರಗತಿಯಿಂದ ಶಾಲೆಗಳನ್ನು ಆರಂಭಿಸಬೇಕೇ ಎಂಬ ಬಗ್ಗೆ ತಾಂತ್ರಿಕ ಶಿಕ್ಷಣ ಸಮಿತಿ ನಿರ್ಧಾರದಡಿ ನಿರ್ಣಯಿಸಬೇಕಾಗಿದೆ ಎಂದರು. ತಾಂತ್ರಿಕ ಸಲಹಾ ಸಮಿತಿ ಜೊತೆ ಮುಖ್ಯಮಂತ್ರಿಗಳ ಸಭೆಯ ಬಳಿಕ ಶಾಲಾ ತರಗತಿಗಳ ಕುರಿತು ನಿರ್ಧರಿಸಲಿದ್ದೇವೆ. ಶಾಲೆಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ಸಂಪೂರ್ಣವಾಗಿ ಸಜ್ಜಾಗಿದೆ. ಶಿಕ್ಷಕರೂ ಶಾಲೆಗಳ ಆರಂಭಕ್ಕೆ ಉತ್ಸುಕರಾಗಿ ಕಾಯುತ್ತಿದ್ದಾರೆ ಎಂದರು. ಯಾಕೆ ಶಾಲೆಗಳನ್ನು ಆರಂಭಿಸುತ್ತಿಲ್ಲ ಎಂದು ಪೋಷಕರೂ ಶಾಲೆಗಳಿಗೆ ಬಂದು ಪ್ರಶ್ನಿಸುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ ಎಂದು ತಿಳಿಸಿದರು. ಮುಖ್ಯಮಂತ್ರಿಗಳು ಮತ್ತು ಶಾಸಕರ ಇಚ್ಛಾಶಕ್ತಿಯ ಪರಿಣಾಮವಾಗಿ ರಾಜ್ಯದಲ್ಲಿ ದೊಡ್ಡ ತರಗತಿಗಳು ಆರಂಭಗೊಂಡಿವೆ. ಮಕ್ಕಳ ಸಹಭಾಗಿತ್ವ ಮತ್ತು ಪೋಷಕರ ಸಹಕಾರ ಪೂರ್ಣವಾಗಿ ಲಭ...

ನಿಮ್ಮ ನಗರದಲ್ಲಿ ಪೆಟ್ರೋಲ್-ಡೀಸೆಲ್ ರೇಟ್‌ ಎಷ್ಟಿದೆ ಅಂತಾ ಗೊತ್ತಾ? ತಿಳಿಯಬೇಕಾದಲ್ಲಿ ಈ ಸಂಖ್ಯೆಗೆ SMS ಮಾಡಿ, ಬೆಲೆ ತಿಳಿಯಿರಿ.!!

  ಇಂದಿಗೂ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ  ಯಾವುದೇ ಬದಲಾವಣೆಯಾಗಿಲ್ಲ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಆಗಸ್ಟ್ 30 ರಂದು ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಅಂದ್ಹಾಗೆ , ಮಂಗಳವಾರ ಪೆಟ್ರೋಲ್ ಬೆಲೆಯಲ್ಲಿ ಕಡಿತ ಮಾಡಲಾಗಿತ್ತು.   ಅಂದಿನಿಂದ ಬೆಲೆಗಳು ಸ್ಥಿರವಾಗಿವೆ. ಐಒಸಿಎಲ್ ( IOCL) ಪ್ರಕಾರ , ಭಾನುವಾರ , ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 101.9 ರೂ ಮತ್ತು ಡೀಸೆಲ್ ಬೆಲೆ 88.92 ರೂಪಾಯಿ ಇದೆ. ಮಂಗಳವಾರ , ರಾಜಧಾನಿ ದೆಹಲಿ ಸೇರಿದಂತೆ ದೇಶದ ಹಲವು ನಗರಗಳಲ್ಲಿ ಇಂಧನ ಬೆಲೆಯನ್ನ 15 ಪೈಸೆಗಳಷ್ಟು ಕಡಿತಗೊಳಿಸಲಾಗಿದೆ. ಐಒಸಿಎಲ್ ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ದರವನ್ನು ಪರಿಷ್ಕರಿಸುತ್ತದೆ. ಪೆಟ್ರೋಲ್ ಬೆಲೆ ಹಲವು ನಗರಗಳಲ್ಲಿ ರೂ . 100 ದಾಟಿದೆ ಮತ್ತು ದೇಶಾದ್ಯಂತ ಸುಮಾರು 19 ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ರೂ . 100 ದಾಟಿದೆ. ಕರ್ನಾಟಕ , ಮಧ್ಯಪ್ರದೇಶ , ರಾಜಸ್ಥಾನ , ಮಹಾರಾಷ್ಟ್ರ , ಆಂಧ್ರ ಪ್ರದೇಶ , ತೆಲಂಗಾಣ , ಒಡಿಶಾ , ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಅನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದರ ಹೊರತಾಗಿ , ಮುಂಬೈ , ಹೈದರಾಬಾದ್ ಮತ್ತು ಬೆಂಗಳೂರಿನ ಮಹಾನಗರಗಳಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ ರೂ. 100 ದಾಟಿದೆ. ಪೆಟ್ರೋಲ್ ಡೀಸೆಲ್ ಬೆಲೆ 30 August 2021) >> ದೆಹಲಿ ಪೆಟ್ರೋಲ್ ರೂ 101.49...

ಹೆಚ್ಚು ನೀರು ಕುಡಿಯುವುದರಿಂದಾಗುವ: ಆರೋಗ್ಯಕರ ಲಾಭಗಳು.

  ನೀರಿಲ್ಲದೆ ಜೀವನವನ್ನು ಊಹಿಸಲು ಸಾಧ್ಯವಿಲ್ಲ. ಇದು ನಮಗೆಲ್ಲರಿಗೂ ತಿಳಿದಿದೆ. ಚಿಕ್ಕಂದಿನಿಂದಲೇ ನಿತ್ಯ 8 ಲೋಟ ನೀರು ಕುಡಿಯಬೇಕು ಎಂದು ಹೇಳಲಾಗುತ್ತದೆ. ನೀರು ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು. ಇದರಿಂದಾಗಿ ನಮ್ಮ ದೇಹವು ಚೆನ್ನಾಗಿ ನಿರ್ವಿಷಗೊಳಿಸಲ್ಪಟ್ಟಿದೆ ಮತ್ತು ದೇಹದ ಎಲ್ಲಾ ವಿಷಕಾರಿ ಅಂಶಗಳು ಹೊರಬರುತ್ತವೆ. ಆರೋಗ್ಯ ತಜ್ಞರ ಪ್ರಕಾರ , ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯಿರಿ. ಇದು ನಿಮ್ಮ ದೇಹವನ್ನು ಒಣಗಲು ಬಿಡುವುದಿಲ್ಲ. ಆದರೆ , ಇದು ನಿಮ್ಮ ದೇಹವನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವ ಮೂಲಕ ಗ್ಯಾಸ್ಟ್ರಿಕ್ ಮತ್ತು ಮಲಬದ್ಧತೆ ಸಮಸ್ಯೆಗೂ ಪರಿಹಾರ ಪಡೆಯಬಹುದು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಇದರಿಂದ ದೇಹದಿಂದ ವಿಷವು ಹೊರಬರುತ್ತದೆ. ನೀವು ಎಂದಿಗೂ ಎದ್ದು ನಿಂತು ನೀರು ಕುಡಿಯಬಾರದುಎಂದು ವೃದ್ಧರು ಆಗಾಗ್ಗೆ ಹೇಳುತ್ತಾರೆ. ಇದರ ಹಿಂದಿನ ಕಾರಣ ಏನು ಎಂದು ನೀವು ಎಂದಾದರೂ ಯೋಚಿಸಿದ್ದೀರಾ ? ನಿಂತಿರುವಾಗ ಎಂದಿಗೂ ನೀರು ಕುಡಿಯಬಾರದು ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಏಕೆಂದರೆ ನೀವು ನಿಂತಿರುವಾಗ ನೀರು ಕುಡಿದಾಗ , ನೀರು ನೇರವಾಗಿ ಹೊಟ್ಟೆಯ ಕೆಳಭಾಗಕ್ಕೆ ಹೋಗುತ್ತದೆ ಮತ್ತು ಆಹಾರದಿಂದ ಪೋಷಕಾಂಶಗಳು ಲಭ್ಯವಾಗುವುದಿಲ್ಲ. ಇದು ನಮ್ಮ ಮುಖದ ಮೇಲೆ ಹೊಳಪನ್ನು ತರುವುದು ಮಾತ್ರವಲ್ಲದೆ , ಕೂದಲು ಉದುರುವುದು ಹ...

ಕೇರಳ: ಮುಂದಿನ ವಾರದಿಂದ ರಾತ್ರಿ ಕರ್ಫ್ಯೂ

  ತಿರುವನಂತಪುರ : ' ಕೋವಿಡ್‌- 19 ಹರಡುವುದನ್ನು ತಡೆಗಟ್ಟಲು ರಾಜ್ಯದಲ್ಲಿ ಮುಂದಿನ ವಾರದಿಂದ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗುವುದು ' ಎಂದು ಶನಿವಾರ ಕೇರಳ ಸರ್ಕಾರ ಘೋಷಿಸಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನೇತೃತ್ವದಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಮುಂದಿನ ವಾರದಿಂದ ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಕರ್ಫ್ಯೂ ಜಾರಿಗೊಳಿಸಲು ನಿರ್ಣಯ ಕೈಗೊಳ್ಳಲಾಗಿದೆ. ' ಸೋಂಕಿನ ಅನುಪಾತ ಶೇ 7 ಕ್ಕಿಂತ ಹೆಚ್ಚಿರುವ ಪ್ರದೇಶಗಳಲ್ಲಿ ಸರ್ಕಾರವು ಲಾಕ್‌ಡೌನ್ ಕೈಗೊಳ್ಳಲಿದೆ. ಆ. 29 ರ (ಭಾನುವಾರ) ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗುವುದು ' ಎಂದು ವಿಜಯನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಶೌಚಾಲಯದಲ್ಲಿ ನೇಣಿಗೆ ಶರಣಾದ ಅತ್ಯಾಚಾರ ಆರೋಪಿ

  ವಿಜಯಪುರ:   ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಪೋಕ್ಸೋ ಕಾಯ್ದೆಯಡಿ ಬಂಧನಕ್ಕೀಡಾಗಿದ್ದ ಆರೋಪಿಯೋರ್ವ ಇದೀಗ ಪೊಲೀಸ್ ಕಸ್ಟಡಿಯಲ್ಲಿರುವಾಗಲೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ. ಸಿಂದಗಿ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದ್ದು , ಆರೋಪಿ ಶೌಚಾಲಯದಲ್ಲಿಯೇ ತನ್ನ ಪ್ಯಾಂಟ್ ಬಳಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 13 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ಪೋಷಕರ ದೂರಿನ ಮೇರೆಗೆ ಪೋಕ್ಸೋ ಕಾಯ್ದೆಯಡಿ ಆರೋಪಿಯನ್ನು ಬಂಧಿಸಲಾಗಿತ್ತು. ಇದೀಗ ಆರೋಪಿ ಮನ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ .

ಆಟವಾಡುತ್ತಾ ಕುಕ್ಕರ್‌ ತಲೆಯೊಳಗೆ ಸಿಲುಕಿಸಿಕೊಂಡ ಮಗು- ವೈದ್ಯರ ಹರಸಾಹಸ

  ಆಗ್ರಾ:   ಮನೆಯಲ್ಲಿ ಚಿಕ್ಕ ಮಕ್ಕಳನ್ನು ಜೋಪಾನ ಮಾಡುವುದು ದೊಡ್ಡ ಸವಾಲಿನ ಕೆಲಸವೇ. ಅವರು ಯಾವಾಗ ಏನು ಮಾಡುತ್ತಾರೆ ಎನ್ನುವುದನ್ನು ತಿಳಿಯುವುದೇ ಕಷ್ಟ. ಅಂಥದ್ದೇ ಒಂದು ಭಯಾನಕ ಘಟನೆ ಆಗ್ರಾದಲ್ಲಿ ನಡೆದಿದೆ. ಒಂದೂವರೆ ವರ್ಷದ ಮಗುವೊಂದು ಆಟವಾಡುತ್ತಿದ್ದಾಗ ತನ್ನ ತಲೆಯನ್ನು ಪ್ರೆಷರ್ ಕುಕ್ಕರ್ ಒಳಗೆ ಸಿಲುಕಿಸಿಕೊಂಡಿದೆ. ಲೋಹಮಂಡಿಯಲ್ಲಿರುವ ಖಾಟಿಪುರದ ಬಳಿ ಈ ಘಟನೆ ನಡೆದಿದೆ. ಮನೆಯವರು ಕುಕ್ಕರ್‌ ಅನ್ನು ಕೆಳಗಡೆ ಇಟ್ಟಿದ್ದರು. ಈ ಸಂದರ್ಭದಲ್ಲಿ ಮಗು ಆಟವಾಡುತ್ತಾ ಅದನ್ನು ಎತ್ತಿಕೊಂಡು ತಲೆಯೊಳಕ್ಕೆ ಸಿಕ್ಕಿಸಿಕೊಂಡಿದೆ. ಕುಕ್ಕರ್‌ ಚಿಕ್ಕದು ಇದ್ದುದರಿಂದ ಅದನ್ನು ತೆಗೆಯಲು ಸಾಧ್ಯವೇ ಆಗಲಿಲ್ಲ. ಸ್ವಲ್ಪ ಹೆಚ್ಚೂ ಕಡಿಮೆಯಾಗಿದ್ದರೂ ಮಗುವಿನ ಜೀವಕ್ಕೆ ಅಪಾಯವಿತ್ತು. ಉಸಿರುಕಟ್ಟುವ ಸಾಧ್ಯತೆ ಇತ್ತು. ಕೂಡಲೇ ಮನೆಯವರು ಎಚ್ಚೆತ್ತುಕೊಂಡು ವೈದ್ಯರಿಗೆ ಕರೆ ಮಾಡಿದ್ದಾರೆ. ಆಗ ಗ್ರೈಂಡರ್ ಯಂತ್ರದೊಂದಿಗೆ ಸ್ಥಳಕ್ಕೆ ದೌಡಾಯಿಸಿದ ವೈದ್ಯರ ತಂಡ ಮಗುವಿನ ತಲೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸತತ ಎರಡು ಗಂಟೆಗಳ ಕಾಲ ಶ್ರಮ ವಹಿಸಿ ಯಂತ್ರದಿಂದ ಕುಕ್ಕರ್‌ ಅನ್ನು ಕಟ್ ಮಾಡಿದೆ. ಅದೃಷ್ಟವಶಾತ್‌ ಮಗುವಿನ ಪ್ರಾಣಕ್ಕೆ ಯಾವುದೇ ಅಪಾಯವಾಗಲಿಲ್ಲ. ಮಕ್ಕಳು ಮನೆಯಲ್ಲಿ ಇದ್ದರೆ ಇಂಥ ಚಿಕ್ಕಚಿಕ್ಕ ವಿಷಯಗಳಿಗೂ ಗಮನಕೊಡಿ. ಇಲ್ಲದೇ ಹೋದರೆ ಮಗುವಿನ ಪ್ರಾಣವೇ ಹೋಗಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ .

ಶಾಲೆಗಳ ಪುನರಾರಂಭ, ಗಣೇಶ ಉತ್ಸವ ಆಚರಣೆ ಕುರಿತು ನಾಳೆ ಮಹತ್ವದ ಸಭೆ

  ಬೆಂಗಳೂರು,ಆ.29-ನೆರೆಯ ಕೇರಳದಲ್ಲಿ ಕೋವಿಡ್-19 ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು, ರಾಜ್ಯದಲ್ಲಿ ಒಂದರಿಂದ 8ನೇ ತರಗತಿ ಶಾಲೆಗಳ ಪುನರಾರಂಭ, ಗಣೇಶ ಉತ್ಸವ ಆಚರಣೆ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಳೆ ಮಹತ್ವದ ಸಭೆ ನಡೆಸಲಿದ್ದಾರೆ.ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಮತ್ತು ಸಚಿವರ ಸಭೆ ಕರೆದಿರುವ ಅವರು ನಾಳೆ ಕೆಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ. ಕೇರಳದಲ್ಲಿ ಕಳೆದ ಎರಡು ವಾರಗಳಿಂದ ಪ್ರತಿನಿತ್ಯ 25 ಸಾವಿರದಿಂದ 32 ಸಾವಿರದವರೆಗೂ ಸೋಂಕಿನ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ವೀಕೆಂಡ್ ಲಾಕ್ಡೌ2ನ್ ವಿಸ್ತರಣೆ ಹಾಗೂ ರಾತ್ರಿ ಕಫ್ರ್ಯೂ ವಿಸುವ ಬಗ್ಗೆಯೂ ಚರ್ಚೆ ನಡೆಯಲಿದೆ. ಈಗಾಗಲೇ ಕೇರಳಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಕಳೆದ ಒಂದು ತಿಂಗಳಿನಿಂದ ಹೆಚ್ಚಿನ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ಕೇಂದ್ರದಿಂದ ರಾಜ್ಯಕ್ಕೆ ಆಗಮಿಸುವವರಿಗೆ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮತ್ತು ಕೋವಿಡ್ ಲಸಿಕೆ ಪಡೆದ ಪ್ರಮಾಣ ಪತ್ರವನ್ನು ನೀಡಬೇಕೆಂದು ಸೂಚಿಸಲಾಗಿದೆ. ಆದಾಗ್ಯೂ ಕೇರಳದಲ್ಲಿ ಸೋಂಕು ಪ್ರಕರಣ ಹೆಚ್ಚುತ್ತಿರುವುದರಿಂದ ಆತಂಕಗೊಂಡಿರುವ ರಾಜ್ಯ ಸರ್ಕಾರ ಮತ್ತಷ್ಟು ಬಿಗಿ ಕ್ರಮಗಳನ್ನು ತೆಗೆದುಕೊಳ್ಳುವ ಸಂಬಂಧವಾಗಿ ತಜ್ಞರು ಮತ್ತು ಸಚಿವರ ಸಭೆ ಕರೆದಿದೆ.ಕೆಲವು ಕಡೆ ವೀಕೆಂಡ್ ಕಫ್ರ್ಯೂ ಹಾಕ...

ಸೆಪ್ಟೆಂಬರ್ 4ರಂದು 'ಶುಗರ್ ಲೆಸ್' ಚಿತ್ರದ ಮತ್ತೊಂದು ಹಾಡು ರಿಲೀಸ್

  ಶಶಿಧರ್ ಕೆ ಎಂ ನಿರ್ದೇಶಿಸಿ ನಿರ್ಮಾಣ ಮಾಡಿರುವ ' ಶುಗರ್ ಲೆಸ್ ' ಚಿತ್ರದ ಟೈಟಲ್ ಸಾಂಗ್ ವೊಂದನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಲಾಗಿತ್ತು , ಇದೀಗ ' ನಮ್ ತಾಯಾಣೆ ಲವ್ ಯು ಬಂಗಾರಿ ' ಎಂಬ ಎರಡನೇ ಹಾಡು ಸೆಪ್ಟೆಂಬರ್ 4 ರಂದು ರಿಲೀಸ್ ಆಗಲಿದೆ.   ಈ ಕುರಿತು ಪ್ರಿಯಾಂಕ ತಿಮ್ಮೇಶ್ ತಮ್ಮ ಇನ್ ಸ್ಟಾಗ್ರಾಂ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಚಿತ್ರದಲ್ಲಿ ಪೃಥ್ವಿ ಅಂಬಾರ್ ನಾಯಕನಾಗಿ ನಟಿಸಿದ್ದು ಬಿಗ್ ಬಾಸ್ ಖ್ಯಾತಿಯ ಪ್ರಿಯಾಂಕ ತಿಮ್ಮೇಶ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಇದೀಗ ಮತ್ತೊಂದು ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಸಂಜಿತ್ ಹೆಗ್ಡೆ ಈ ಹಾಡಿಗೆ ಧ್ವನಿಗೂಡಿಸಿದ್ದು ಅನೂಪ್ ಸಂಗೀತ ಸಂಯೋಜನೆ ನೀಡಿದ್ದಾರೆ , ಡಿ ಆರ್ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯವಿದೆ.

ಮತ್ತೆ ಲಾಕ್ ಆಗುತ್ತಾ ಬೆಂಗಳೂರು..?

  ಬೆಂಗಳೂರು , ಆ. 29- ಕೊರೊನಾ ಮೂರನೇ ಅಲೆ ನಿಯಂತ್ರಣದ ಬಗ್ಗೆ ಎಚ್ಚರಿಕೆ ವಹಿಸಿರುವ ಬಿಬಿಎಂಪಿ ವಾರ್ನಿಂಗ್ ಹಂತಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.ನಾವೀಗ ಯಾವ ಹಂತದಲ್ಲಿದ್ದೇವೆ.   ಎಷ್ಟು ಕೇಸ್‍ಗಳು ದಾಖಲಾದರೆ ಅಪಾಯ , ಯಾವ ಹಂತ ದಾಟಿದ್ರೆ ಲಾಕ್‍ಡೌನ್ ಮಾಡಬೇಕು ಎಂಬ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ನಗರದಲ್ಲಾದ ಕೊರೊನಾ ಸಾವು-ನೋವಿನ ಅಂಕಿ ಅಂಶಗಳನ್ನು ವಿಶ್ಲೇಷಿಸಿ ವರದಿ ತಯಾರಿಸಿದ್ದಾರೆ. ಯಾವ ಸಂದರ್ಭದಲ್ಲಿ ಗ್ರೀನ್ ಅಲರ್ಟ್ , ಯೆಲ್ಲೊ ಅಲರ್ಟ್ , ಆರೆಂಜ್ ಅಲರ್ಟ್ ಮತ್ತು ರೆಡ್ ಅಲರ್ಟ್ ಜಾರಿ ಮಾಡಬೇಕು ಎಂಬ ಬಗ್ಗೆಯೂ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.ಕೊರೊನಾ ಮೂರನೇ ಅಲೆ ಸಂದರ್ಭದಲ್ಲಿ ನಗರದ್ಯಾಂತ ಭಾರಿ ಮುನ್ನೆಚ್ಚರಿಕೆ ವಹಿಸಬೇಕು ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದನ್ನು ಸರ್ಕಾರಕ್ಕೆ ಮನವಿ ಮಾಡಿಕೊಡಲಾಗಿದೆ. ಗ್ರೀನ್ , ಯೆಲ್ಲೊ , ಆರೆಂಜ್ ಹಾಗೂ ರೆಡ್ ಅಲರ್ಟ್ ಲೆವೆಲ್ ಮೀರಿದರೆ ಮತ್ತೆ ಲಾಕ್‍ಡೌನ್ ಮಾಡಬೇಕು ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ. ಗ್ರೀನ್ ಅಲರ್ಟ್ ಎಂದರೆ 250 ಕ್ಕಿಂತ ಕಡಿಮೆ ಪ್ರಕರಣಗಳ ದಾಖಲಾಗುವ ಲೋ ರಿಸ್ಕ್ ಪರಿಸ್ಥಿತಿ , 250 ರಿಂದ 500 ರರೊಳಗೆ ಪ್ರಕರಣಗಳು ದಾಖಲಾದರೆ ಅದನ್ನು ಯೆಲ್ಲೊ ಅಲರ್ಟ್ ಎಂದು ಗುರುತಿಸಲಾಗುವುದು. ಅದೇ ರೀತಿ 500 ರಿಂದ ಒಂದು ಸಾವಿರದೊಳಗೆ ಪ್ರಕರಣಗಳು ದಾಖಲಾದರೆ ಅದನ್ನು ಆರೆಂಜ್ ಲೆವೆಲ್ ಎಂದು ಹಾಗೂ ಒಂದೇ ದಿನ...

ಪೊಷಕರು: ಮಕ್ಕಳ ಪಾಲನೆಯಲ್ಲಿ ತಪ್ಪಿಯೂ ಈ ಐದು ತಪ್ಪು ಮಾಡಬಾರದು.!

  ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಮೊಟಿವೇಶನ್  ಅತಿ ಮುಖ್ಯ. ಮಕ್ಕಳ ಸಣ್ಣ ಪುಟ್ಟ ವಸ್ತುಗಳು ನಿಮಗೆ ಜೋಕ್ ತರಹ ಅನ್ನಿಸಬಹುದು. ಆದರೆ , ತಿಳಿದುಕೊಳ್ಳಿ ಆ ಸಣ್ಣ ಪುಟ್ಟ ವಸ್ತುವನ್ನು ಮಾಡುವ ಹಿಂದೆ ಮಕ್ಕಳು ಅಪಾರ ಶ್ರಮ ಹಾಕಿದ್ದಿರಬಹುದು. ·          ನೀವು ಮಾಡುವ ಕೆಲವೊಂದು ತಪ್ಪು ಮಕ್ಕಳ ಆತ್ಮವಿಶ್ವಾಸವನ್ನೇ ಚಿವುಟಿ ಬಿಡಬಹುದು. ·          ಹಾಗಾಗಿ ಮಕ್ಕಳ ಪಾಲನೆಯಲ್ಲಿ ಈ ಐದು ತಪ್ಪು ಮಾಡಲೇ ಬಾರದು. ·          ಆ ಐದು ತಪ್ಪು ಯಾವುದು ಎಂಬುದಕ್ಕೆ ಇದನ್ನು ಓದಿ ಮಕ್ಕಳ ಮನಸ್ಸು ಬಹು ಮುಗ್ದ. ನೀವು ಮಾಡುವ ಕೆಲವೊಂದು ತಪ್ಪು ಮಕ್ಕಳ ಆತ್ಮವಿಶ್ವಾಸವನ್ನೇ ಚಿವುಟಿ ಬಿಡಬಹುದು. ಮಕ್ಕಳ ಆತ್ಮವಿಶ್ವಾಸವೇ ಇಲ್ಲದಂತಾಗಿ , ಘೋರ ಹಿಂಜರಿಕೆ ಅವರನ್ನು ಕಾಡಬಹುದು. ಹಾಗಾಗಿ ಮಕ್ಕಳ ಪಾಲನೆಯಲ್ಲಿ ಈ ಐದು ತಪ್ಪು ಮಾಡಲೇ ಬಾರದು.! ಯಾವುದು ಆ ಐದು ತಪ್ಪು. ? 1.      ಮಕ್ಕಳ ಅಪಹಾಸ್ಯ ಮಾಡುವುದು. ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಮೊಟಿವೇಶನ್ ಅತಿ ಮುಖ್ಯ. ಮಕ್ಕಳ ಸಣ್ಣ ಪುಟ್ಟ ವಸ್ತುಗಳು ನಿಮಗೆ ಜೋಕ್ ತರಹ ಅನ್ನಿಸಬಹುದು. ಆದರೆ , ತಿಳಿದುಕೊಳ್ಳಿ ಆ ಸಣ್ಣ ಪುಟ್ಟ ವಸ್ತುವನ್ನು ಮಾಡುವ ಹಿಂದೆ ಮಕ್ಕಳು ಅಪಾರ ಶ್ರಮ ಹಾಕಿದ್ದಿರಬಹುದು. ಆ ವಸ್ತು...