Monday 30 August 2021

ಸುನಿಲ್ ಗವಾಸ್ಕರ್, ದಿಲೀಪ್ ವೆಂಗ್ ಸರ್ಕಾರ್, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ರೋಹಿತ್ತರಬೇತುದಾರ, ಮಾಜಿ ಕ್ರಿಕೆಟಿಗ 'ವಸೂ ಪರಾಂಜಪೆ' ನಿಧನ


ಮುಂಬೈ : ಮಾಜಿ ಕ್ರಿಕೆಟಿಗ ವಸೂ ಪರಾಂಜಪೆ (82 ) ಸೋಮವಾರ ಮುಂಬೈನಲ್ಲಿ ನಿಧನರಾಗಿದ್ದಾರೆ. ಈ ಮೂಲಕ ಭಾರತೀಯ ಕ್ರಿಕೆಟ್ ನ ಹಲವಾರು ಸೂಪರ್ ಸ್ಟಾರ್ ಗಳ ವೃತ್ತಿ ಜೀವನ ರೂಪಿಸಿದ್ದಂತ ತರಬೇತುದಾರ ವಸೂ ಪರಾಂಜಪೆ ಇನ್ನಿಲ್ಲವಾಗಿದ್ದಾರೆ.

ಪರಂಜಪೆ 29 ಪ್ರಥಮ ದರ್ಜೆ ಪಂದ್ಯಗಳಲ್ಲಿ ಮುಂಬೈಯನ್ನು ಪ್ರತಿನಿಧಿಸಿದ್ದಾರೆ. ಎರಡು ಶತಕಗಳು ಮತ್ತು ಅಷ್ಟೇ ಅರ್ಧಶತಕಗಳೊಂದಿಗೆ 785 ರನ್ ಗಳಿಸಿದ್ದಾರೆ. ಅವರು ಒಂಬತ್ತು ವಿಕೆಟ್ ಗಳನ್ನು ಸಹ ಪಡೆದರು.

ಅವರು ಕೋಚ್ ಪಾತ್ರದಲ್ಲಿ ನಿವೃತ್ತಿಯ ನಂತರ ಖ್ಯಾತಿಯನ್ನು ಪಡೆದಿದ್ದರು. ಸುನಿಲ್ ಗವಾಸ್ಕರ್, ದಿಲೀಪ್ ವೆಂಗ್ ಸರ್ಕಾರ್, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ರೋಹಿತ್) ಸೇರಿದಂತೆ ಭಾರತೀಯ ಕ್ರಿಕೆಟ್ ನ ಹಲವಾರು ಸೂಪರ್ ಸ್ಟಾರ್ ಗಳ ವೃತ್ತಿಜೀವನವನ್ನು ರೂಪಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ಈ ಕುರಿತಂತೆ ಭಾರತದ ಮಾಜಿ ಆಲ್ರೌಂಡರ್ ಮತ್ತು ರಾಷ್ಟ್ರೀಯ ಕ್ರಿಕೆಟ್ ತಂಡದ ಪ್ರಸ್ತುತ ಮುಖ್ಯ ತರಬೇತುದಾರ ರವಿಶಾಸ್ತ್ರಿ ಸಾಮಾಜಿಕ ಮಾಧ್ಯಮಗಳಲ್ಲಿ ಗೌರವ ಸಲ್ಲಿಸಿದ್ದು, ವಸೂ ಪರಾಂಜಪೆಅವರ ನಿಧನದಿಂದ ನಿಜವಾಗಿಯೂ ದುಃಖಿತನಾಗಿದ್ದೇನೆ. ಅವರು ಆಟದಲ್ಲಿ ಒಂದು ಸಂಸ್ಥೆಯಾಗಿದ್ದರು, ಅವರು ಏನು ಮಾಡಿದರೂ ನಿಜವಾದ ಸಕಾರಾತ್ಮಕ ಕಂಪನವನ್ನು ಹೊಂದಿತ್ತು. ಅವರ ಕುಟುಂಬಕ್ಕೆ ಸಂತಾಪಗಳು. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ತಿಳಿಸಿದ್ದಾರೆ.

No comments:

Post a Comment