Sunday 22 August 2021

ರಾಜ್ಯದಲ್ಲಿ ಇಂದು ಹೊಸದಾಗಿ 1189 ಜನರಿಗೆ ಕೊರೋನಾ ಪಾಸಿಟಿವ್, 22 ಸೋಂಕಿತರು ಸಾವು.

 

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1189 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 29,38,616 ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಇಂದು 1456 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 28,80,889 ಜನ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಇವತ್ತು 22 ಸೋಂಕಿತರು ಮೃತಪಟ್ಟಿದ್ದಾರೆ. ಇದುವರೆಗೆ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 37,145 ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ 20,556 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ದರ ಶೇಕಡ 0.94 ರಷ್ಟು ಇದೆ. ರಾಜಧಾನಿ ಬೆಂಗಳೂರಿನಲ್ಲಿ 267 ಜನರಿಗೆ ಸೋಂಕು ತಗುಲಿದ್ದು, ಇಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ. 300 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, 7762 ಸಕ್ರಿಯ ಪ್ರಕರಣಗಳು ಇವೆ.

ಜಿಲ್ಲೆಗಳ ವಿವರ:

ಬಾಗಲಕೋಟೆ 4, ಬಳ್ಳಾರಿ 5, ಬಿದರ್ 3, ಚಾಮರಾಜನಗರ 8, ಚಿಕ್ಕಬಳ್ಳಾಪುರ 1, ಧಾರವಾಡ 4, ಗದಗ 2, ಹಾವೇರಿ 1, ಕಲಬುರ್ಗಿ 0, ಕೋಲಾರ 8, ಕೊಪ್ಪಳ 1, ರಾಯಚೂರು 1, ರಾಮನಗರ 5, ವಿಜಯಪುರ 2, ಯಾದಗಿರಿ 3 ಪ್ರಕರಣ ವರದಿಯಾಗಿವೆ.

ಉಡುಪಿ 132, ಉತ್ತರಕನ್ನಡ 40, ತುಮಕೂರು 39, ಮೈಸೂರು 79, ಕೊಡಗು 55, ಹಾಸನ 75, ದಕ್ಷಿಣಕನ್ನಡ 286, ಚಿಕ್ಕಮಗಳೂರು 50, ಬೆಂಗಳೂರು ನಗರ 267 ಜನರಿಗೆ ಸೋಂಕು ತಗುಲಿದೆ.

ಮೃತಪಟ್ಟವರ ಸಂಖ್ಯೆ:

ಬಾಗಲಕೋಟೆ 1, ಬೆಂಗಳೂರು ನಗರ 2, ಚಾಮರಾಜನಗರ 1, ಚಿಕ್ಕಮಗಳೂರು 1, ದಕ್ಷಿಣಕನ್ನಡ 4, ದಾವಣಗೆರೆ 1, ಧಾರವಾಡ 2, ಕೋಲಾರ 1, ಮಂಡ್ಯ 2, ಮೈಸೂರು 1, ತುಮಕೂರು 2, ಉಡುಪಿ 2, ವಿಜಯಪುರ 1 ಸೇರಿ ರಾಜ್ಯದಲ್ಲಿ ಇಂದು 22 ಸೋಂಕಿತರು ಮೃತಪಟ್ಟಿದ್ದಾರೆ.




No comments:

Post a Comment