ಎಜ್ಬಾಸ್ಟನ್ (ಇಂಗ್ಲೆಂಡ್): ಹಾಲಿ ಟೆಸ್ಟ್ ಕ್ರಿಕೆಟ್ನಲ್ಲಿ ಚಾಂಪಿಯನ್ ತಂಡ ಯಾವುದು ಎಂಬುದು ಜೂನ್ 18 ರಿಂದ ನಡೆಯುವ ಟೆಸ್ಟ್ ಫೈನಲ್ ಪಂದ್ಯ ವೇದಿಕೆ ಆಗಲಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಸೆಣಸಲಿವೆ. ಉಭಯ ತಂಡಗಳೂ ಅದಾಗಲೇ ತಂಡಗಳನ್ನು ಪ್ರಕಟಿಸಿದೆ. ಭಾರತ ತಂಡವೂ ಪ್ರಕಟವಾಗಿದೆ. ಆದರೆ, ಕನ್ನಡಿಗ ಕೆಎಲ್ ರಾಹುಲ್ ಆಯ್ಕೆಯಾಗಿಲ್ಲ ಎಂಬ ಕೊರಗೂ ಸೇರಿದಂತೆ ಐದು ಆಟಗಾರರು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೆ ಆಯ್ಕೆ ಆಗಲಿಲ್ಲ! ಯಾಕೆ? ಎಂಬ ಪ್ರಶ್ನೆ ಕಾಡತೊಡಗಿದೆ.ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಂದ್ಯಕ್ಕೆ ಇನ್ನು ಎರಡು ದಿನಗಳಿರುವಾಗ ಬಿಸಿಸಿಐ 15 ಆಟಗಾರರ ಭಾರತ ತಂಡವನ್ನು ನಿನ್ನೆ ಪ್ರಕಟಿಸಿದೆ. ವಿರಾಟ್ ಕೊಹ್ಲಿ ನಾಯಕನಾಗಿ ಅಜಿಂಕ್ಯ ರಹಾನೆ ಉಪ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ.
ಈಗಿನ ಪ್ರಕಟಿತ ತಂಡದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶುಭ್ಮನ್ ಗಿಲ್, ಚೇತೇಶ್ವರ ಪೂಜಾರ ಮತ್ತಿತರರು ಬಲಿಷ್ಠ ಬ್ಯಾಟಿಂಗ್ ಅನ್ನು ಕಾಯ್ದುಕೊಳ್ಳಬಲ್ಲರು. ಆರ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಸ್ಪಿನ್ ಬೌಲಿಂಗ್ ಆಲ್ರೌಂಡರ್ ರೂಪದಲ್ಲಿ ವಿರಾಜಮಾನರಾಗಿದ್ದಾರೆ. ಇನ್ನು ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಮೊಹಮದ್ ಶಮಿ, ಉಮೇಶ್ ಯಾದವ್ ಹಾಗೂ ಮೊಹಮದ್ ಸಿರಾಜ್ ಕೈಯಲ್ಲಿ ಬಾಲ್ ಹಿಡಿದು ಸನ್ನದ್ಧರಾಗಿದ್ದಾರೆ. ರಿಶಬ್ ಪಂತ್ ಮತ್ತು ವೃದ್ಧಿಮಾನ್ ಸಹ ಇಬ್ಬರು ವಿಕೆಟ್ ಹಿಂದೆ ನಿಲ್ಲಲು ನಾಮುಂದು ತಾಮುಂದು ಎಂದು ನಿಂತಿದ್ದಾರೆ. ಗಮನಾರ್ಹವೆಂದರೆ ಐತಿಹಾಸಿಕ ವಿಶ್ವ ಟೆಸ್ಟ್ ಫೈನಲ್ ಪಂದ್ಯಕ್ಕೆ ಈ 15 ಮಂದಿ ಆಟಗಾರರೇ ಅಂತಿಮ ಅಂತಲ್ಲ.
ಪ್ರಕಟಿತ ತಂಡದಲ್ಲಿ ಆಟಗಾರರ ಆಯ್ಕೆ ಬಗ್ಗೆ ಆಶ್ಚರ್ಯಗಳೇನೂ ಇಲ್ಲವಾದರೂ ಈ ಸಂದರ್ಭದಲ್ಲಿ ಬೆಂಚ್ ಕಾಯಿಸುತ್ತಿರುವ, ಕೆಎಲ್ ರಾಹುಲ್, ಶಾರ್ದೂಲ್ ಠಾಕೂರ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಮಯಾಂಕ್ ಅಗರ್ವಾಲ್. ಈ ಐದು ಆಟಗಾರರು ಅವಕಾಶ ಸಿಕ್ಕರೆ ಎರಡು ಕೈಗಳಿಂದ ಬಾಚಿಕೊಳ್ಳಲು ತುದಿಗಾಲಲ್ಲಿದ್ದಾರೆ.
No comments:
Post a Comment