ಪಿಎಂ ಕಿಸಾನ್ ಸಮ್ಮಾನ್ ನಿಧಿ (PM Kisan samman nidhi)ಯ ಮೊತ್ತವೂ
ಇನ್ನೂ ನಿಮ್ಮ ಖಾತೆ ಸೇರದಿದ್ರೆ ಅಥವಾ ನೀವು ಇನ್ನೂ ನೋಂದಾಯಿಸದಿದ್ದರೆ, ನೀವು ಈಗ ಅದನ್ನ ಸುಲಭವಾಗಿ ಮಾಡಬಹುದು. ಪಿಎಂ ಕಿಸಾನ್ ಸಮ್ಮಾನ್ ನಿಧಿಯಲ್ಲಿ ರೈತರು
ತಮ್ಮ ಹೆಸರನ್ನ ಹೇಗೆ ನೋಂದಾಯಿಸಿಕೊಳ್ಳಬಹುದು ಅನ್ನೋದನ್ನ ನಾವು ಇಲ್ಲಿ ನಿಮಗೆ
ಹೇಳುತ್ತಿದ್ದೇವೆ. ಅಂದ್ಹಾಗೆ, ಈ
ಯೋಜನೆಯಡಿ ಸರ್ಕಾರವು ದೇಶದ ರೈತರಿಗೆ ವಾರ್ಷಿಕವಾಗಿ 6 ಸಾವಿರ
ರೂಪಾಯಿಗಳ ಆರ್ಥಿಕ ಸಹಾಯ ನೀಡುತ್ತದೆ.
ಈ ಯೋಜನೆಯಲ್ಲಿ ಆನ್ಲೈನ್ ನೋಂದಣಿ ಪ್ರಕ್ರಿಯೆಯು ತುಂಬಾ ಸುಲಭ.
ನೀವು ಮನೆಯಲ್ಲಿಯೇ ಕುಳಿತು ಈ ಪ್ರಕ್ರಿಯೆಯನ್ನು ಆನ್ಲೈನ್ನಲ್ಲಿ ಪೂರ್ಣಗೊಳಿಸಬಹುದು. ಇದಲ್ಲದೇ, ನೀವು ಈ ಯೋಜನೆಗೆ ಪಂಚಾಯತ್ ಕಾರ್ಯದರ್ಶಿ ಅಥವಾ ಸ್ಥಳೀಯ
ಸಾಮಾನ್ಯ ಸೇವಾ ಕೇಂದ್ರದ ಮೂಲಕ ಅರ್ಜಿ ಸಲ್ಲಿಸಬಹುದು. ಇದರ ಹೊರತಾಗಿಯೂ, ಈ ಯೋಜನೆಗೆ ನಿಮ್ಮನ್ನು ನೀವು ನೋಂದಾಯಿಸಿಕೊಳ್ಳಬಹುದು. ಅದ್ಹೇಗೆ?
ಯೋಜನೆಗೆ
ನೋಂದಾಯಿಸಿಕೊಳ್ಳಲು ಈ ಕೆಳಗಿನ ಪ್ರಕ್ರಿಯೆ ಅನುಸರಿಸಿ..!
>> ನೀವು ಮೊದಲು PM ಕಿಸಾನ್ʼನ ಅಧಿಕೃತ ವೆಬ್ ಸೈಟ್ pmkisan.gov.in ಗೆ ಹೋಗಬೇಕು.
>> ಈಗ ರೈತರ ಮೂಲೆಗೆ ಹೋಗಿ, ಇಲ್ಲಿ ನೀವು 'ಹೊಸ ರೈತ ನೋಂದಣಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
>> ಇದರ ನಂತರ ನೀವು ಆಧಾರ್ ಸಂಖ್ಯೆಯನ್ನ ನಮೂದಿಸಬೇಕು.
>> ಇದರೊಂದಿಗೆ, ಕ್ಯಾಪ್ಚಾ ಕೋಡ್ ಅನ್ನು
ನಮೂದಿಸುವ ಮೂಲಕ ರಾಜ್ಯವನ್ನ ಆಯ್ಕೆ ಮಾಡಬೇಕಾಗುತ್ತದೆ ಮತ್ತು ನಂತರ ಪ್ರಕ್ರಿಯೆಯನ್ನು ಮುಂದೆ
ಸಾಗಿಸಬೇಕಾಗುತ್ತದೆ.
>> ಈ ನಮೂನೆಯಲ್ಲಿ ನೀವು ನಿಮ್ಮ ಸಂಪೂರ್ಣ ವೈಯಕ್ತಿಕ ಮಾಹಿತಿಯನ್ನು
ಭರ್ತಿ ಮಾಡಬೇಕು.
>> ಇದರೊಂದಿಗೆ, ಬ್ಯಾಂಕ್ ಖಾತೆ ವಿವರಗಳು
ಮತ್ತು ಫಾರ್ಮ್ಗೆ ಸಂಬಂಧಿಸಿದ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ.
>> ನಂತರ ನೀವು ಫಾರ್ಮ್ ಅನ್ನು ಸಲ್ಲಿಸಬಹುದು.
ಈ ಮಾಹಿತಿಯನ್ನ
ಮುಂದಿನ ಕಂತಿಗೆ ನೀಡಬೇಕಾಗುತ್ತದೆ..!
2019 ರಲ್ಲಿ ಆರಂಭವಾದ ಈ ಯೋಜನೆಯಲ್ಲಿ ಕೆಲವು ದೋಷಗಳು ಕಂಡುಬಂದವು, ಅದನ್ನ ಸರಿಪಡಿಸಲು ಸರ್ಕಾರ ನಿರ್ಧರಿಸಿದೆ. ಈ ಯೋಜನೆಯಲ್ಲಿ ಪಾರದರ್ಶಕತೆ ತರಲು ಸರ್ಕಾರ
ಈ ಕ್ರಮ ಕೈಗೊಂಡಿದೆ. ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಹೊಸ ನೋಂದಣಿ ಮಾಡಿದ ರೈತರು ಈಗ ತಮ್ಮ
ಜಮೀನಿನ ಪ್ಲಾಟ್ ಸಂಖ್ಯೆಯನ್ನು ಅರ್ಜಿ ನಮೂನೆಯಲ್ಲಿ ನಮೂದಿಸಬೇಕಾಗುತ್ತದೆ. ಆದಾಗ್ಯೂ, ಹೊಸ ನಿಯಮಗಳು ಯೋಜನೆಗೆ ಸಂಬಂಧಿಸಿದ ಹಳೆಯ ಫಲಾನುಭವಿಗಳ ಮೇಲೆ ಪರಿಣಾಮ ಬೀರುವುದಿಲ್ಲ.
ಈ ಯೋಜನೆಯಲ್ಲಿ ನೊಂದಾಯಿಸಿದ್ರು 2000 ರೂಪಾಯಿ ಕಂತು ಇನ್ನೂ ಖಾತೆಗೆ ಬಂದಿಲ್ಲ ಅನ್ನೋದಾದ್ರೆ,
ನೀವು ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ, ದೂರು
ದಾಖಲಿಸಬಹುದು. ರೈತರಿಗೆ ಸಹಾಯ ಮಾಡಲು ಕೇಂದ್ರ ಕೃಷಿ ಸಚಿವಾಲಯದಿಂದ ಸಹಾಯವಾಣಿ ಸಂಖ್ಯೆಗಳನ್ನು
ನೀಡಲಾಗಿದೆ. ರೈತರು PM ಕಿಸಾನ್ ಸಹಾಯವಾಣಿ 155261 ಅಥವಾ ಟೋಲ್ ಫ್ರೀ ಸಂಖ್ಯೆ 1800115526 ಗೆ ಕರೆ ಮಾಡಬಹುದು.
ರೈತರು ಸಚಿವಾಲಯದ 011 23381092 ಸಂಖ್ಯೆಯನ್ನು ಕೂಡ ಸಂಪರ್ಕಿಸಬಹುದು.
No comments:
Post a Comment