ಬೆಂಗಳೂರು : ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 1259 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 1701 ಮಂದಿ
ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಕಳೆದ 24 ಗಂಟೆಯಲ್ಲಿ 1259
ಜನರಿಗೆ ಕೊರೊನಾ ಸೋಂಕು ತಗುಲಿದ್ದು, 1701 ಮಂದಿ
ಗುಣಮುಖರಾಗಿದ್ದಾರೆ.ಕಿಲ್ಲರ್ ಕೊರೊನಾ ಸೋಂಕಿಗೆ 29 ಮಂದಿ
ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 29,41,026
ಕ್ಕೆ ಏರಿಕೆಯಾಗಿದ್ದು, ಇದುವರೆಗೆ 28,84,032
ಜನರು ಗುಣಮುಖರಾಗಿದ್ದಾರೆ, ಹಾಗೂ ಕೊರೊನಾ ಸಾವಿನ
ಸಂಖ್ಯೆ 37,184 ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಸದ್ಯ 19,784 ಸಕ್ರಿಯ
ಪ್ರಕರಣಗಳಿದ್ದು, ಪಾಸಿಟಿವಿಟಿ ದರ ಶೇಕಡ .0.65 ರಷ್ಟು ಇದೆ. ಬೆಂಗಳೂರಿನಲ್ಲಿ ಇಂದು 295 ಮಂದಿಗೆ ಸೋಂಕು
ತಗುಲಿದ್ದು, 371 ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
ಬೆಂಗಳೂರಿನಲ್ಲಿ ಕಿಲ್ಲರ್ ಕೊರೊನಾ ಸೋಂಕಿಗೆ 11 ಮಂದಿ ಮೃತಪಟ್ಟಿದ್ದು,
ಬೆಂಗಳೂರಿನಲ್ಲಿ ಸದ್ಯ 7582 ಸಕ್ರಿಯ ಪ್ರಕರಣಗಳಿದೆ.
No comments:
Post a Comment