Friday 30 July 2021

ಆರೋಗ್ಯ ಇಲಾಖೆಯಿಂದ ಮಕ್ಕಳಿಗೆ ಚುಚ್ಚುಮದ್ದು.

 


ಚಿತ್ರದುರ್ಗ: ನಗರದ ವಿದ್ಯಾವಿಕಾಸ ವಿದ್ಯಾಸಂಸ್ಥೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ  1 ನೇ ತರಗತಿ, 4ನೇ ತರಗತಿ ಹಾಗು 10ನೇ ತರಗತಿ ಮಕ್ಕಳಿಗೆ ಲಸಿಕೆಯನ್ನು ನೀಡಲಾಯಿತು.

ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ವತಿಯಿಂದ ಧನುರ್ವಾಯು, ನಂಜು, ನಾಯಿ ಕೆಮ್ಮು, ಗಂಟಲು, ಮಾರಿ, ರೋಗ ತಡೆಗಟ್ಟಲು ಚುಚ್ಚುಮದ್ದನ್ನು 1ನೇ ತರಗತಿಗೆ, ಡಿಪಿಟಿ ಚುಚ್ಚುಮದ್ದು, 4 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ  ಟಿ ಡಿ ಚುಚ್ಚುಮದ್ದು ನೀಡಲಾಯಿತು.

ಕಾರ್ಯಕ್ರಮದಲ್ಲಿ ಆರೋಗ್ಯ ಕಾರ್ಯಕರ್ತೆರಾದ ಭಾಗ್ಯಲಕ್ಷ್ಮಿ  H D, ಗೀತ B,  ಹಾಗೂ ಆಶಾ ಕಾರ್ಯಕರ್ತೆ ಜಮೀಲಾ ಶಾಲೆಯ ಮುಖ್ಯೋಪಾಧ್ಯಾಯರಾದ ಸಂಪತ್ ಕುಮಾರ್ ಸಿ ಡಿ ಹಾಗೂ ಶಿಕ್ಷಕ, ಶಿಕ್ಷಕೇತರ ವರ್ಗದವರು ಉಪಸ್ಥಿತರಿದ್ದರು.


No comments:

Post a Comment