Skip to main content

Posts

Showing posts from June, 2021

ರಾಜ್ಯದಲ್ಲಿಂದು 3382 ಕೊರೋನಾ ಪ್ರಕರಣ, 111 ಸಾವು.

  ಬೆಂಗಳೂರು:   ರಾಜ್ಯದಲ್ಲಿ ಇಂದು ಹೊಸದಾಗಿ 3382 ಜನರಿಗೆ ಕೊರೋನಾ ಪಾಸಿಟಿವ್ ಬಂದಿದೆ. 111 ಸೋಂಕಿತರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 76,505 ಸಕ್ರಿಯ ಪ್ರಕರಣಗಳು ಇವೆ. ರಾಜ್ಯದಲ್ಲಿ ಇಂದು 12,763 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು , ಇದುವರೆಗೆ 27,32,242 ಜನ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಇದುವರೆಗೆ ಕೊರೋನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 35,040 ಕ್ಕೆ ಏರಿಕೆಯಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 28,43,810 ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು 813 ಜನರಿಗೆ ಸೋಂಕು ತಗುಲಿದ್ದು , 11 ಮಂದಿ ಸಾವನ್ನಪ್ಪಿದ್ದಾರೆ. 9549 ಜನರು ಬಿಡುಗಡೆಯಾಗಿದ್ದು , 43,698 ಸಕ್ರಿಯ ಪ್ರಕರಣಗಳು ಇವೆ.

ವಿದ್ಯಾ ವಿಕಾಸ ಶಾಲೆಯ ವಿದ್ಯಾರ್ಥಿ, ರಾಷ್ಟ್ರಮಟ್ಟಕ್ಕೆ ಆಯ್ಕೆ.

  ಚಿತ್ರದುರ್ಗ: ನಗರದ ವಿದ್ಯಾವಿಕಾಸ ವಿದ್ಯಾಸಂಸ್ಥೆ ಯ ವಿದ್ಯಾರ್ಥಿ ಅನಿರುದ್ಧ್ ಎಸ್ . 2020-21  ಸಾಲಿನ NTSE ( National Talent Search Exam) ಪರೀಕ್ಷೆಯಲ್ಲಿ ಭಾಗವಹಿಸಿ ರಾಷ್ಟ್ರಮಟ್ಟಕ್ಕೆ  ಆಯ್ಕೆಯಾಗಿರುತ್ತಾರೆ .  ಜನವರಿ 2021 ರಲ್ಲಿ ನಡೆದ NTSE ಪರೀಕ್ಷೆಯಲ್ಲಿ ಚಿತ್ರದುರ್ಗ ತಾಲ್ಲೂಕಿನಿಂದ ವಿದ್ಯಾವಿಕಾಸ ವಿದ್ಯಾಸಂಸ್ಥೆ ಯ ವಿದ್ಯಾರ್ಥಿ ಅನಿರುದ್ಧ್   ಎಸ್, ಮಾರ್ಗದರ್ಶಿ ಶಿಕ್ಷಕರಾದ    ಸಂಪ ತ್  ಕು ಮಾರ್ ಸಿ ಡಿ  ಮಾರ್ಗದ ರ್ಶನದಲ್ಲಿ ಉತ್ತಮ ಅಂಕಗಳನ್ನು ಪಡೆದು  ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ರುತ್ತಾರೆ. ಸಂಸ್ಥೆಯ ಕಾರ್ಯದರ್ಶಿ ಬಿ. ವಿಜಯಕುಮಾರ್ , ಕ್ಯಾಂಪಸ್ ಇಂಚಾರ್ಜ್ ಪೃಥ್ವಿ ಶ್ ಎಸ್. ಎಮ್,  ಮು ಖ್ಯೋಪಾದ್ಯಾಯ ರಾದ ಸಂಪ ತ್  ಕು ಮಾರ್ ಸಿ ಡಿ . ಹೆಡ್ ಕೋಆರ್ಡಿನೇಟರ್ ಬಸವರಾಜಯ್ಯ ಪಿ ಹಾಗೂ ಶಿಕ್ಷಕ ವೃಂದದವರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿ ಗೆ ಅಭಿನಂದಿಸುತ್ತಾರೆ .

ಮಹಿಳಾ ಏಕದಿನ ಪಂದ್ಯ: ಭಾರತದ ವನಿತೆಯರಿಗೆ, ಇಂಗ್ಲೆಂಡ್ ವನಿತೆಯರ ಸವಾಲ್.

  ಬ್ರಿಸ್ಟಲ್‌   : ಇಂಗ್ಲೆಂಡ್‌ ಎದುರಿನ ಮೊದಲ ಏಕದಿನ ಪಂದ್ಯವನ್ನು 8 ವಿಕೆಟ್‌ಗಳಿಂದ ಕಳೆದುಕೊಂಡ ಭಾರತದ ವನಿತಾ ತಂಡ ಮತ್ತೂಂದು ಮುಖಾಮುಖೀಗೆ ಸಜ್ಜಾಗಿದೆ. ಬುಧವಾರ ಬ್ರಿಸ್ಟಲ್‌ನಲ್ಲಿ ಈ ಸೆಣಸಾಟ ನಡೆಯಲಿದ್ದು ಈಗಾಗಲೇ 1-0 ಹಿನ್ನಡೆಯಲ್ಲಿರುವ ಮಿಥಾಲಿ ಪಡೆಗೆ ಸರಣಿಯನ್ನು ಸಮಬಲಕ್ಕೆ ತರುವ ನಿಟ್ಟಿನಲ್ಲಿ ಇದು ಮಾಡು ಇಲ್ಲವೆ ಮಡಿ ಪಂದ್ಯವಾಗಿದೆ. ಸರಣಿ ಗೆಲುವಿನ ಕಾತರದಲ್ಲಿ ಇಂಗ್ಲೆಂಡ್‌ ಆತಿಥೇಯ ಹಾಗೂ ವಿಶ್ವ ಚಾಂಪಿಯನ್‌ ತಂಡವಾದ ಇಂಗ್ಲೆಂಡ್‌ ತನ್ನ ಖ್ಯಾತಿಗೆ ತಕ್ಕಂತೆ ಮೊದಲ ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ. ಬ್ಯಾಟಿಂಗ್‌ , ಬೌಲಿಂಗ್‌ ಎರಡೂ ವಿಭಾಗದಲ್ಲಿಯೂ ಉತ್ಕೃಷ್ಟ ಮಟ್ಟದ ಪ್ರದರ್ಶನ ತೋರಿದ್ದು ಇದೇ ಪರಾಕ್ರಮವನ್ನು ಈ ಪಂದ್ಯ ದಲ್ಲಿಯೂ ಮುಂದುವರೆಸಿ ಸರಣಿ ವಶಪಡಿಸುವ ಇರಾದೆಯಲ್ಲಿದೆ ಹೀತರ್‌ ನೈಟ್‌ ಪಡೆ.   ಬೌಲಿಂಗ್‌ನಲ್ಲಿ ಸ್ಪಿನ್ನರ್‌ ಎಕ್‌ ಸ್ಟೋನ್‌ , ಬ್ರಂಟ್‌ ಮತ್ತು ಅನ್ಯಾ ಶ್ರಬೊ à ಲ್‌ ಕೂಡ ನಿಯಂತ್ರಿತ ಬೌಲಿಂಗ್‌ ಮೂಲಕ ಪ್ರವಾಸಿಗರನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ  

ಹಸಿಮೆಣಸಿನಕಾಯಿ ಆಹಾರದ ರುಚಿಗೆ ಅಷ್ಟೇ ಅಲ್ಲ, ಆರೋಗ್ಯಕ್ಕೂ ಸೈ.

ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರ ಜೊತೆಗೆ , ಕಣ್ಣಿನ ಕಾಳಜಿ ವಹಿಸುತ್ತದೆ ಹಸಿರು ಮೆಣಸಿನಕಾಯಿ!   ಹೆಚ್ಚಿನ ಜನರು ಹಸಿರು ಮೆಣಸಿನಕಾಯಿ ತಿನ್ನಲು ಇಷ್ಟಪಡುತ್ತಾರೆ. ಆಹಾರವನ್ನು ರುಚಿಯಾಗಿ ಮಾಡಲು ಇದನ್ನು ಬಳಸಲಾಗುತ್ತದೆ. ಹಸಿರು ಮೆಣಸಿನಕಾಯಿಯನ್ನು ಅನೇಕ ರೀತಿಯ ಚಟ್ನಿಗಳಿಗೆ ಸೇರಿಸಲಾಗುತ್ತದೆ. ಇತ್ತೀಚಿನ ಅನೇಕ ಸಂಶೋಧನೆಗಳ ಪ್ರಕಾರ , ಹಸಿರು ಮೆಣಸಿನಕಾಯಿಗಳನ್ನು ತಿನ್ನುವುದರಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ತೊಡೆದುಹಾಕಬಹುದು. ಆರೋಗ್ಯ ತಜ್ಞರ ಪ್ರಕಾರ , ಹಸಿ ಮೆಣಸಿನಕಾಯಿಯಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಸಿ ಇದ್ದು , ಇದು ಅನೇಕ ರೋಗಗಳಿಂದ ಆರೋಗ್ಯವನ್ನು ರಕ್ಷಿಸುತ್ತದೆ. ಡಯಟ್ ತಜ್ಞ ಡಾ.ರಂಜನಾ ಸಿಂಗ್ ಅವರ ಪ್ರಕಾರ , ವಿಟಮಿನ್ ಎ , ಬಿ 6, ಸಿ , ಕಬ್ಬಿಣ , ತಾಮ್ರ , ಪೊಟ್ಯಾಸಿಯಮ್ , ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ ಹಸಿರು ಮೆಣಸಿನಕಾಯಿಯಲ್ಲಿ ಹೇರಳವಾಗಿ ಕಂಡುಬರುತ್ತದೆ. ಇದು ಬೀಟಾ ಕ್ಯಾರೋಟಿನ್ , ಕ್ರಿಪ್ಟೋಕ್ಸಾಂಥಿನ್ , ಲುಟೀನ್- ಕ್ಯಾಂಥಿನ್ ಮುಂತಾದ ಆರೋಗ್ಯಕರ ಅಂಶಗಳನ್ನು ಒಳಗೊಂಡಿದೆ , ಇದು ದೇಹವನ್ನು ಆರೋಗ್ಯವಾಗಿಡಲು ಪ್ರಮುಖ ಪಾತ್ರ ವಹಿಸುತ್ತದೆ. ಹಸಿರು ಮೆಣಸಿನಕಾಯಿ ಅನೇಕ ಗಂಭೀರ ಕಾಯಿಲೆಗಳಿಂದ ರಕ್ಷಿಸುತ್ತದೆ : ಆಹಾರ ತಜ್ಞ ಡಾ.ರಂಜನಾ ಸಿಂಗ್ ಅವರ ಪ್ರಕಾರ , ಹಸಿರು ಮೆಣಸಿನಕಾಯಿಗಳು ಆಹಾರಕ್ಕೆ ತೀವ್ರತೆಯನ್ನು ತರುತ್ತವೆ , ಇದು ಆರೋಗ್ಯದ ಜೊತೆಗೆ ರುಚಿಗೆ ಸಹಕಾರಿಯಾಗಿದೆ. ಹಸಿ ಮೆಣಸಿನಕಾಯ...

ಎಚ್ಚರಿಕೆ ನೀಡಿದ ವಿಶ್ವ ಆರೋಗ್ಯ ಸಂಸ್ಥೆ, ಡೆಲ್ಟಾ ಪ್ಲೆಸ್ ನಡುವೆಯೇ ಆತಂಕ ಸೃಷ್ಟಿಸಿದ ಲ್ಯಾಂಬ್ಡಾ.

  ಲಂಡನ್ : ಭಾರತದಲ್ಲಿ ಅಪಾರ ಹಾನಿ ಸೃಷ್ಟಿಸಿರುವ ಡೆಲ್ಟಾ ರೂಪಾಂತರಿ ವೈರಸ್ ಇದೀಗ ವಿಶ್ವಾದ್ಯಂತ ಆತಂಕಕ್ಕೆ ಕಾರಣವಾಗಿದೆ. ಹಲವು ದೇಶಗಳಲ್ಲಿ ಡೆಲ್ಟಾ ವೈರಸ್ ಪ್ರಕರಣಗಳು ಪತ್ತೆಯಾಗುತ್ತಿವೆ. ಇನ್ನೊಂದೆಡೆ ಈ ಡೆಲ್ಟಾ ವೇರಿಯಂಟ್ ರೂಪಾಂತರಿಯಾಗಿ ಡೆಲ್ಟಾ ಪ್ಲಸ್ ಮೂಲಕ ಮತ್ತಷ್ಟು ಆತಂಕ ಹೆಚ್ಚಿಸಿದೆ. ಏತನ್ಮಧ್ಯೆ ಮತ್ತೊಂದು ಕೊರೊನಾ ರೂಪಾಂತರಿ ಮೆಲ್ಲಗೆ ಕದತಟ್ಟಲಾರಂಭಿಸಿದೆ. ಕೊರೋನಾದ ಈ ವೇರಿಯಂಟ್ ' ಲ್ಯಾಂಬ್ಡಾ ವೇರಿಯಂಟ್ ಆಗಿದೆ. ಈ ವೇರಿಯಂಟ್ ಅನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಸಂಘಟನೆಗಳು ಇದನ್ನು ' ವೇರಿಯಂಟ್ ಆಫ್ ಕನ್ಸರ್ನ್ ' ಅಡಿ ವರ್ಗೀಕರಿಸಿವೆ. ತುಂಬಾ ವೇಗವಾಗಿ ತನ್ನ ಪಾದಚಾಚುತ್ತಿದೆ ವಿಶ್ವ ಆರೋಗ್ಯ ಸಂಘಟನೆ ಈಗಾಗಲೇ ' ಲ್ಯಾಂಬ್ಡಾ ವೇರಿಯಂಟ್ ' ಅನ್ನು ' ವೇರಿಯಂಟ್ ಆಫ್ ಕನ್ಸರ್ನ್ '   ಅಡಿ ಪಟ್ಟಿ ಮಾಡಿದೆ. ಜೂನ್ 15 ರಂದು ಹೇಳಿಕೆ ಬಿಡುಗಡೆ ಮಾಡಿದ್ದ ವಿಶ್ವ ಆರೋಗ್ಯ ಸಂಘಟನೆ , ವಿಶ್ವದ ಸುಮಾರು 29 ದೇಶಗಳಲ್ಲಿ ಲ್ಯಾಂಬ್ಡಾ ವೇರಿಯಂಟ್ ನಮೂನೆಗಳು ದೊರೆತಿವೆ ಎಂದು ಹೇಳಿತ್ತು. ಇದು ದಕ್ಷಿಣ ಅಮೇರಿಕಾದಿಂದ ತನ್ನ ಪಯಣ ಆರಂಭಿಸಿದೆ ಎನ್ನಲಾಗಿದೆ. ಇದೀಗ ದಕ್ಷಿಣ ಬ್ರೆಜಿಲ್   ಸೇರಿದಂತೆ ಬ್ರಿಟನ್ ನಲ್ಲಿಯೂ ಕೂಡ ಲ್ಯಾಂಬ್ಡಾ ವೇರಿಯಂಟ್ ಪ್ರಕರಣಗಳು ಪತ್ತೆಯಾಗಿವೆ. ನ್ಯೂಸ್ ಮೆಡಿಕಲ್ ಲೈಫ್ ಸೈನ್ಸಸ್   ನಲ್ಲಿ ಪ್ರಕಟಗೊಂಡ ಇತ್ತೀಚಿನ ವರದಿಯ ಪ್ರಕಾರ , ಕೊರೊನಾ ವೈರಸ್ ನ ಈ ರೂಪ...

ಇಂದು ರಾಜ್ಯದಲ್ಲಿ ಏರಿಕೆ ಕಂಡ ಕೊರೋನಾ,3222 ಜನರಿಗೆ ಸೋಂಕು 93 ಮಂದಿ ಸಾವು.

  ಬೆಂಗಳೂರು : ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 4,000 ಕ್ಕಿಂತ ಇಳಿಮುಖವಾಗಿದೆ. ರಾಜ್ಯದಲ್ಲಿ ಕೊವಿಡ್- 19 ಹೊಸ ಪ್ರಕರಣಗಳ ಶೇಕಡಾವಾರು ಪ್ರಮಾಣ 2.54 ರಷ್ಟಿದ್ದು , ಸಾವಿನ ಪ್ರಮಾಣ ಶೇ. 2.88 ರಷ್ಟಿದೆ. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 3222 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 93 ಮಂದಿ ಪ್ರಾಣ ಬಿಟ್ಟಿದ್ದು , 14724 ಸೋಂಕಿತರು ಗುಣಮುಖರಾಗಿದ್ದಾರೆ. ಮಂಗಳವಾರದ ಅಂಕಿ-ಅಂಶಗಳ ಪ್ರಕಾರ , ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 28,40,428 ಕ್ಕೆ ಏರಿಕೆಯಾಗಿದೆ.   ಈವರೆಗೂ 27,19,479 ಸೋಂಕಿತರು ಗುಣಮುಖರಾಗಿದ್ದು. 34929 ಮಂದಿ ಪ್ರಾಣ ಬಿಟ್ಟಿದ್ದಾರೆ. ಇದರ ಹೊರತಾಗಿ 85,997 ಕೊವಿಡ್- 19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಜಿಲ್ಲಾವಾರು ಕೊರೊನಾವೈರಸ್ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಒಟ್ಟು 3222 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 8, ಬಳ್ಳಾರಿ 18, ಬೆಳಗಾವಿ 114, ಬೆಂಗಳೂರು ಗ್ರಾಮಾಂತರ 48, ಬೆಂಗಳೂರು 753, ಬೀದರ್ 2, ಚಾಮರಾಜನಗರ 50, ಚಿಕ್ಕಬಳ್ಳಾಪುರ 25, ಚಿಕ್ಕಮಗಳೂರು 114, ಚಿತ್ರದುರ್ಗ 44, ದಕ್ಷಿಣ ಕನ್ನಡ 385, ದಾವಣಗೆರೆ 95, ಧಾರವಾಡ 30, ಗದಗ 26, ಹಾಸನ 242, ಹಾವೇರಿ 10, ಕಲಬುರಗಿ 36, ಕ...

ನಾಯಕನಹಟ್ಟಿಗೆ ಹರಿಯಿತು ವಾಣಿವಿಲಾಸ ನೀರು.

* ಪಟ್ಟಣದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ವಾಣಿವಿಲಾಸ ಜಲಾಶಯದ ಶುದ್ಧ ಕುಡಿಯುವ ನೀರಿನ ಘಟಕವು ಆರಂಭವಾಗುತ್ತಿದ್ದು ,   Ø ವಾಣಿವಿಲಾಸ ಜಲಾಶಯದ ನೀರನ್ನು ಕುಡಿಯಬೇಕು ಎಂಬ ಪಟ್ಟಣದ 10 ವಾರ್ಡ್‌ಗಳ ಸಾರ್ವಜನಿಕರ ಕನಸು ನನಸಾಗಲಿದೆ.    * ಪಟ್ಟಣಕ್ಕೆ ಶಾಶ್ವತವಾಗಿ ಶುದ್ಧ ಕುಡಿಯುವ ನೀರನ್ನು ಒದಗಿಸಲು ಮಾರಿಕಣಿವೆಯ ವಾಣಿವಿಲಾಸ ಜಲಾಶಯದಿಂದ ಪೈಪ್‌ಲೈನ್ ಮೂಲಕ ಪಟ್ಟಣಕ್ಕೆ ನೀರು ತರಲಾಯಿತು. ನಾಯಕನಹಟ್ಟಿ :    ಸಮಾಜಕಲ್ಯಾಣ ಸಚಿವ ಬಿ.ಶ್ರೀರಾಮುಲು ಅಧ್ಯಕ್ಷತೆಯಲ್ಲಿ ನಗರಾಭಿವೃದ್ಧಿ ಇಲಾಖೆ ಸಚಿವ ಬೈರತಿ ಬಸವರಾಜ ಅವರು ಶುದ್ಧ ಕುಡಿಯುವ ನೀರಿನ ಘಟಕವನ್ನು ಬುಧವಾರ ಉದ್ಘಾಟಿಸಲಿದ್ದು , ವಾಣಿವಿಲಾಸ ಜಲಾಶಯದ ನೀರನ್ನು ಕುಡಿಯಬೇಕು ಎಂಬ ಪಟ್ಟಣದ 10 ವಾರ್ಡ್‌ಗಳ ಸಾರ್ವಜನಿಕರ ಕನಸು ನನಸಾಗಲಿದೆ. ಪಟ್ಟಣಕ್ಕೆ ಶಾಶ್ವತವಾಗಿ ಶುದ್ಧ ಕುಡಿಯುವ ನೀರನ್ನು ಒದಗಿಸಲು ಮಾರಿಕಣಿವೆಯ ವಾಣಿವಿಲಾಸ ಜಲಾಶಯದಿಂದ ಪೈಪ್‌ಲೈನ್ ಮೂಲಕ ಪಟ್ಟಣಕ್ಕೆ ನೀರು ತರಲಾಯಿತು. ಆ ನೀರನ್ನು ನೇರವಾಗಿ ಸಾರ್ವಜನಿಕರು ಬಳಸಲು ಯೋಗ್ಯವಿಲ್ಲದ ಕಾರಣ ಪಟ್ಟಣದಲ್ಲಿ ಅತ್ಯಾಧುನಿಕ ಕುಡಿಯುವ ನೀರು ಶುದ್ಧೀಕರಣ ಘಟಕವನ್ನು ₹ 2.3 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ನಗರ ನೀರು ಸರಬರಾಜು ಘಟಕದ ಎಂಜಿನಿಯರ್ ಎಚ್.ಬಿ. ಓಬನಾಯಕ ಮಾತನಾಡಿ , ' ಪಟ್ಟಣದಲ್ಲಿ ನಿರ್ಮಾಣವಾಗಿರುವ ಕುಡಿಯುವ ನೀರು ಶುದ್ಧೀಕರಣ ಘಟಕವು ದಿನಕ್ಕೆ 20 ಲಕ್ಷದ 10 ಸಾವಿರ ...

SPORTS: ಟಿ-20 ವಿಶ್ವಕಪ್ ಆರಂಭ, ‘ಅಕ್ಟೋಬರ್ 17’ ರಿಂದ ಯ ಎ ಇ ಮತ್ತು ಒಮನ್ ನಲ್ಲಿ ಆಯೋಜನೆ, ಐಸಿಸಿ ಅಧಿಕೃತ ಘೋಷಣೆ

  ಈ ವರ್ಷದ ಐಸಿಸಿ ಪುರುಷರ ಟಿ 20 ವಿಶ್ವಕಪ್ ʼ ನ್ನ ಯುಎಇದಲ್ಲಿ ನಡೆಸಲಾಗುವುದು ಎಂದು ಬಿಸಿಸಿಐ ಘೋಷಿಸಿದ ಒಂದು ದಿನ ನಂತ್ರ ಪಂದ್ಯಗಳ ಆಯೋಜನೆಯ ದಿನಾಂಕವನ್ನ ಐಸಿಸಿ ಪ್ರಕಟಿಸಿದೆ. ' ಪುರುಷರ ಟಿ 20 ವಿಶ್ವಕಪ್ 2021 ರ ಸ್ಥಳವನ್ನ ಯುಎಇ ಮತ್ತು ಒಮನ್ ʼ ಗೆ ಸ್ಥಳಾಂತರಿಸಲಾಗಿದೆ. ಇನ್ನು ಪಂದ್ಯಾವಳಿಯು ಅಕ್ಟೋಬರ್ 17 ರಿಂದ ನವೆಂಬರ್ 14 ರವರೆಗೆ ನಡೆಯಲಿದೆ. ಬಿಸಿಸಿಐ ಈ ಕಾರ್ಯಕ್ರಮದ ಆತಿಥೇಯರಾಗಿ ಉಳಿಯಲಿದೆ ' ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ( ಅಂದ್ಹಾಗೆ ನಿನ್ನೆ ' ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಈ ವರ್ಷದ ಟಿ 20 ವಿಶ್ವಕಪ್‌ ʼ ನ್ನ ಯುಎಇಗೆ ಸ್ಥಳಾಂತರಿಸಲಾಗಿದೆ. ಇನ್ನು ಪಂದ್ಯಗಳ ದಿನಾಂಕಗಳನ್ನ ಐಸಿಸಿ ನಿರ್ಧರಿಸಲಿದೆ ' ಎಂದು ಬಿಸಿಸಿಐ ಹೇಳಿತ್ತು. ಅದ್ರಂತೆ , ಇಂದು ಐಸಿಸಿ , ಪುರುಷರ ಟಿ 20 ವಿಶ್ವಕಪ್ 2021 ರ ಸ್ಥಳವನ್ನ ಯುಎಇ ಮತ್ತು ಒಮನ್ ʼ ಗೆ ಸ್ಥಳಾಂತರಿಸಲಾಗಿದೆ. ಇನ್ನು ಪಂದ್ಯಾವಳಿಯು ಅಕ್ಟೋಬರ್ 17 ರಿಂದ ನವೆಂಬರ್ 14 ರವರೆಗೆ ನಡೆಯಲಿದೆ ಎಂದು  ಐಸಿಸಿ ತಿಳಿಸಿದೆ. ಅಂದ್ಹಾಗೆ ನಿನ್ನೆ ' ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಈ ವರ್ಷದ ಟಿ 20 ವಿಶ್ವಕಪ್‌ ʼ ನ್ನ ಯುಎಇಗೆ ಸ್ಥಳಾಂತರಿಸಲಾಗಿದೆ. ಇನ್ನು ಪಂದ್ಯಗಳ ದಿನಾಂಕಗಳನ್ನ ಐಸಿಸಿ ನಿರ್ಧರಿಸಲಿದೆ ' ಎಂದು ಬಿಸಿಸಿಐ ಹೇಳಿತ್ತು. ಅದ್ರಂತೆ , ಇಂದು ಐಸಿಸಿ , ಪುರುಷರ ಟಿ 20 ವಿಶ್ವಕಪ್ 2021 ರ ಸ್ಥಳವನ್ನ ಯುಎಇ ಮತ್ತು ಒಮನ...

ದೇಶಾದ್ಯಂತ ಕೊರೋನಾ ಇಳಕೆಯತ್ತ, ಬ್ಲಾಕ್ ಫಂಗಸ್ ಏರಿಕೆಯತ್ತ!! 40845 ಬ್ಲಾಕ್ ಫಂಗಸ್ ಪತ್ತೆ.

  ನವದೆಹಲಿ :ದೇಶದಲ್ಲಿ ಎರಡನೇ ಕೋವಿಡ್ ಅಲೆ ಕಡಿಮೆಯಾಗುತ್ತಿದ್ದಂತೆ , ಕಪ್ಪು ಶಿಲೀಂಧ್ರಗಳ ಸೋಂಕಿನ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು , ಆರೋಗ್ಯ ಅಧಿಕಾರಿಗಳನ್ನು ಚಿಂತೆ ಮಾಡುತ್ತಲೇ ಇದೆ. ದೇಶದಲ್ಲಿ ಈವರೆಗೆ 40,845 ಕಪ್ಪು ಶಿಲೀಂಧ್ರ ಅಥವಾ ಮ್ಯೂಕಾರ್ಮೈಕೋಸಿಸ್ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಸೋಮವಾರ ಪ್ರಕಟಿಸಿದ್ದು , ಈ ಪೈಕಿ 31,344 ಗಂಭೀರ ಸ್ವರೂಪದಲ್ಲಿದೆ.ಇದಲ್ಲದೆ , ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 3,129 ರಷ್ಟಿದೆ ಎಂದು ಸಚಿವರು ಹೇಳಿದರು.ಮ್ಯೂಕೋರ್ಮೈಕೋಸಿಸ್ ಎಂಬುದು ಶಿಲೀಂಧ್ರದಿಂದ ಉಂಟಾಗುವ ಅಪರೂಪದ ಗಂಭೀರ ಶಿಲೀಂಧ್ರ ಸೋಂಕು.   ಪರಿಸರದಲ್ಲಿ ಇರುವ ಕಪ್ಪು ಶಿಲೀಂಧ್ರ ಬೀಜಕಗಳೊಂದಿಗೆ ಸಂಪರ್ಕಕ್ಕೆ ಬರುವ ಮೂಲಕ ಜನರು ಸೋಂಕಿಗೆ ಒಳಗಾಗಬಹುದು. ಅಧಿಕೃತ ಸಲಹೆಯ ಪ್ರಕಾರ , ಕಟ್ , ಸವೆತ , ಸುಡುವಿಕೆ ಅಥವಾ ಇತರ ರೀತಿಯ ಚರ್ಮದ ಆಘಾತಗಳ ಮೂಲಕ ಶಿಲೀಂಧ್ರವು ಚರ್ಮವನ್ನು ಪ್ರವೇಶಿಸಿದ ನಂತರ ಚರ್ಮದಲ್ಲಿ ಸೋಂಕು ಬೆಳೆಯಬಹುದು.ಮೂಗಿನ ಅಡೆತಡೆ , ಮುಖ ಅಥವಾ ಕೆನ್ನೆಯ ಮೂಳೆ ನೋವು , ಕಪ್ಪು ಮತ್ತು ದುರ್ವಾಸನೆ ಮೂಗಿನ ವಿಸರ್ಜನೆ , ದಟ್ಟಣೆ ಅಥವಾ ಕೆಂಪು ಮತ್ತು ಕಣ್ಣು ಮತ್ತು ಮೂಗಿನ ಊತ ಮತ್ತು ದೃಷ್ಟಿಹೀನತೆ ರೋಗದ ಕೆಲವು ಪ್ರಮುಖ ಲಕ್ಷಣಗಳಾಗಿವೆ. ಸೋಮವಾರ , ಕೋವಿಡ್ - 19 ರಂದು ನಡೆದ ಉನ್ನತ ಮಟ್ಟದ ಮಂತ್ರಿಗಳ ಸಭೆಯ ಅಧ್ಯಕ್ಷತೆ ವಹಿಸಿದ್ದ ಹರ್ಷವರ್ಧನ್ , ಒಟ್ಟು ಕಪ...

ಬಿರುಕು ಬಿಟ್ಟ ಹಿಮ್ಮಡಿ ಕಿರಿ ಕಿರ ಉಂಟು ಮಾಡುತ್ತಿದೆಯೇ? ಇಲ್ಲಿದೆ ಮನೆ ಮದ್ದು.

  ದೈಹಿಕ ಆಕರ್ಷಣೆಯನ್ನು ಕಾಪಾಡಿಕೊಳ್ಳಲು ಮುಖ ಮತ್ತು ಕೈಗಳಿಗೆ ಮಾಯಿಶ್ಚರೈಸೇಶನ್ ಅಗತ್ಯವಿರುವಂತೆಯೇ , ಪಾದಗಳಿಗೂ ಮಾಯಿಶ್ಚರೈಸೇಶನ್ ಅಗತ್ಯ. ಆದ್ದರಿಂದ , ಪಾದಗಳಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆಯೂ ಗಮನ ನೀಡಲಾಗುತ್ತದೆ. ಬಿರುಕು ಬಿಟ್ಟ ಹಿಮ್ಮಡಿಗಳ ಬಗ್ಗೆ ಮಹಿಳೆಯರು ಚಿಂತಿತರಾಗಿರುವುದನ್ನು ನಾವು ಕಾಣಬಹುದು. ಏಕೆಂದರೆ ಇದು ಅತ್ಯಂತ ಸುಂದರವಾದ ಸ್ಯಾಂಡಲ್ ಮತ್ತು ಸ್ಯಾಂಡಲ್ಗಳ ಹೊಳಪನ್ನು ಮಸುಕಾಗಿಸುತ್ತದೆ. ಈ ಸುದ್ದಿಯಲ್ಲಿ , ನಾವು ನಿಮಗೆ ಅಂತಹ ಕೆಲವು ಮನೆಮದ್ದುಗಳನ್ನು ನೀಡುತ್ತಿದ್ದೇವೆ , ಅದನ್ನು ಅಳವಡಿಸಿಕೊಳ್ಳುವ ಮೂಲಕ ನೀವು ಬಿರುಕು ಬಿಟ್ಟ ಕಾಲುಗಳ ಸಮಸ್ಯೆಯಿಂದ ಹೊರಬರಬಹುದು. 1. ಪ್ಯೂಮಿಸ್ ಸ್ಟೋನ್ ಅನ್ನು ಈ ರೀತಿ ಬಳಸಿ: ಪ್ಯೂಮಿಸ್ ಕಲ್ಲು/ಸ್ಟೋನ್ ನಿಮ್ಮ ಚರ್ಮವನ್ನು ಶುದ್ಧೀಕರಿಸಲು ಸಹಾಯ ಮಾಡುವ ಕಲ್ಲು. ಅದರ ಸಹಾಯದಿಂದ , ನಿಮ್ಮ ದಪ್ಪ ಮತ್ತು ಒರಟಾದ ಚರ್ಮದ ಪದರವನ್ನು ನೀವು ಸ್ವಚ್ಛಗೊಳಿಸಬಹುದು. ಇದನ್ನು ಸ್ಕ್ರಬ್ಬಿಂಗ್ , ಕ್ರ್ಯಾಕ್ಡ್ ಹೀಲ್ಸ್  ಮತ್ತು ಚರ್ಮದ ಅನೇಕ ಸಮಸ್ಯೆಗಳನ್ನು ನಿವಾರಿಸಲು ಬಳಸಲಾಗುತ್ತದೆ. ಈ ಕಲ್ಲು ಸತ್ತ ಚರ್ಮವನ್ನು ಅಂದರೆ ಡೆಡ್ ಸ್ಕಿನ್ ಅನ್ನು ತೆಗೆದುಹಾಕುತ್ತದೆ ಮತ್ತು ಬಿರುಕು ಬಿಟ್ಟ ಹಿಮ್ಮಡಿಯನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ. >> ಮೊದಲನೆಯದಾಗಿ , ಬಕೆಟ್ ಅಥವಾ ಟಬ್‌ನಲ್ಲಿರುವ ನೀರಿನಲ್ಲಿ ಕೆಲ ಸಮಯ ಕಾಲನ್ನು ನೆನೆಸಿ. >> ಇದಕ್ಕೆ ಶಾಂಪೂ ...

ಬಹು ನಿರೀಕ್ಷಿತ 2-ಡಿಜಿ ಕೊರೋನಾ ಔಷಧಿ ಮಾರುಕಟ್ಟೆಯಲ್ಲಿ ಲಭ್ಯ.

Ø ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲೀಯರ್ ಮೆಡಿಸಿನ್ ಅಂಡ್ ಅಪ್ಲೈಡ್ ಸೈನ್ಸಸ್ , ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಜೇಷನ್ ಹಾಗೂ ಡಾ. ರೆಡ್ಡಿಸ್ ಲ್ಯಾಬ್  ಗಳು ಜಂಟಿಯಾಗಿ ಈ ಔಷಧಿಯನ್ನುಅಭಿವೃದ್ಧಿಪಡಿಸಿವೆ. Ø ಈ ಔಷಧಿಯ ಒಂದು ಸ್ಯಾಚೆಟ್ ಬೆಲೆ ರೂ. 990 ನಿಗದಿಪಡಿಸಲಾಗಿದೆ. ಆದರೆ , ಸರ್ಕಾರಿ ಆಸ್ಪತ್ರೆಗಳಿಗೆ ಇದನ್ನು ಕಡಿಮೆ ಬೆಲೆಯಲ್ಲಿ ಪೂರೈಸಲಾಗುತ್ತಿದೆ.   ನವದೆಹಲಿ : ಆಸ್ಪತ್ರೆಗಳಲ್ಲಿ ದಾಖಲಾದ ಕೊರೊನಾ ರೋಗಿಗಳಿಗೆ 2-DG(2- ಡಿ-ಆಕ್ಸಿ-ಡಿ - ಗ್ಲುಕೋಸ್)   ಕೊರೊನಾ ಔಷಧಿಯನ್ನು ವಾಣಿಜ್ಯಾತ್ಮಕವಾಗಿ ಬಿಡುಗಡೆ ಮಾಡಲಾಗಿದೆ ಎಂದು ಹೈದರಾಬಾದ್ ಮೂಲದ ಡಾ. ರೆಡ್ಡಿಸ್ ಲ್ಯಾಬ್ ಘೋಷಿಸಿದೆ. ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲೀಯರ್ ಮೆಡಿಸಿನ್ ಅಂಡ್ ಅಪ್ಲೈಡ್ ಸೈನ್ಸಸ್ , ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಜೇಷನ್ ಹಾಗೂ ಡಾ. ರೆಡ್ಡಿಸ್ ಲ್ಯಾಬ್   ಗಳು ಜಂಟಿಯಾಗಿ ಈ ಔಷಧಿಯನ್ನುಅಭಿವೃದ್ಧಿಪಡಿಸಿವೆ. ಈ ಔಷಧಿಯನ್ನು ದೇಶಾದ್ಯಂತ ಇರುವ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಪೂರೈಸಲಾಗುವುದು. ಈ ಕುರಿತು ಕಂಪನಿ ಹೊರಡಿಸಿರುವ ಒಂದು ಹೇಳಿಕೆಯ ಪ್ರಕಾರ ಮೊದಲು ಈ ಔಷಧಿಯನ್ನು ಮೆಟ್ರೋ ನಗರಗ ಳಿಗೆ ಪೂರೈಕೆ ಮಾಡಲಾಗುವುದು ಎನ್ನಲಾಗಿದೆ. ಈ ಔಷಧಿಯ ಒಂದು ಸ್ಯಾಚೆಟ್ ಬೆಲೆ ರೂ. 990 ನಿಗದಿಪಡಿಸಲಾಗಿದೆ. ಆದರೆ , ಸರ್ಕಾರಿ ಆಸ್ಪತ್ರೆಗಳಿಗೆ ಇದನ್ನು ಕಡಿಮೆ ಬೆಲೆಯಲ್ಲಿ ಪೂರೈಸಲಾಗುತ್ತಿದೆ. ಕಳೆದ ...

ರಾಜ್ಯದಲ್ಲಿಂದು ಭಾರಿ ಇಳಿಕೆ ಕಂಡ ಕೊರೀನಾ, 2576 ಜನರಿಗೆ ಸೋಂಕು,93 ಸಾವು.

ಬೆಂಗಳೂರು:   ರಾಜ್ಯದಲ್ಲಿ ಬಹುದಿನಗಳ ನಂತರ ಇಂದು ಕೊರೋನಾ ಹೊಸ ಪ್ರಕರಣಗಳ ಸಂಖ್ಯೆ ಭಾರೀ ಇಳಿಮುಖವಾಗಿದೆ. ಮೊದಲ ಬಾರಿಗೆ ಹೊಸ ಕೇಸ್ 3 ಸಾವಿರಕ್ಕಿಂತ ಕಡಿಮೆಯಾಗಿದೆ. ರಾಜ್ಯದಲ್ಲಿ ಇಂದು ಹೊಸದಾಗಿ 2576 ಜನರಿಗೆ ಸೋಂಕು ತಗುಲಿದೆ. ಒಟ್ಟು ಸೋಂಕಿತರ ಸಂಖ್ಯೆ 28,37,206 ಕ್ಕೆ ಏರಿಕೆಯಾಗಿದೆ. ಇವತ್ತು 5933 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು , ಇದುವರೆಗೆ 27,04,755 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇವತ್ತು 93 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಇದುವರೆಗೆ 34,836 ಸೋಂಕಿತರು ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1 ಲಕ್ಷಕ್ಕಿಂತ ಕಡಿಮೆಯಾಗಿದ್ದು , 97,592 ಸಕ್ರಿಯ ಪ್ರಕರಣಗಳು ಇವೆ. ಪಾಸಿಟಿವಿಟಿ ದರ ಶೇಕಡ 1.92 ಇದೆ. ರಾಜಧಾನಿ ಬೆಂಗಳೂರಿನಲ್ಲಿ 563 ಜನರಿಗೆ ಸೋಂಕು ತಗುಲಿದೆ.  18 ಸೋಂಕಿತರು ಮೃತಪಟ್ಟಿದ್ದಾರೆ. 1588 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು , ಇದುವರೆಗೆ 62,430 ಸಕ್ರಿಯ ಪ್ರಕರಣಗಳಿವೆ.  

ಜುಲೈ 1ರಿಂದ ಚಂದನದಲ್ಲಿ ‘ಸಂವೇದಾ ಪಾಠಗಳು, ಆನ್ ಲೈನ್ ಇದ್ದರೆ ಓಕೆ, ಇಲ್ಲದಿದ್ದಲ್ಲಿ ರೆಕಾರ್ಡ್ ಪಾಠ.

  ಬೆಂಗಳೂರು:   ರಾಜ್ಯದಲ್ಲಿ ಶಾಲೆ ಪುನರಾರಂಭದ ಬಗ್ಗೆ ಟಾಸ್ಕ್ ಫೋರ್ಸ್ ಸಮಿತಿ ರಚಿಸಲಾಗುತ್ತಿದ್ದು , ಸಮಿತಿ ಸಲಹೆಯಂತೆ ಶಾಲೆ ಆರಂಭದ ಬಗ್ಗೆ ಶೀಘ್ರದಲ್ಲಿ ನಿರ್ಧರಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಜುಲೈ 1 ರಿಂದ ಚಂದನ ವಾಹಿನಿಯಲ್ಲಿ ಪಾಠ ಆರಂಭವಾಗಲಿದೆ. ಕನ್ನಡ ಆಂಗ್ಲ ಮಾಧ್ಯಮಗಳಲ್ಲಿ ಪಾಠ ನಡೆಯಲಿದ್ದು , ದೀಕ್ಷಾ ಪೋರ್ಟಲ್ ನಲ್ಲಿ ಪಾಠಗಳ ವಿಡಿಯೋ ಲಭ್ಯವಿದೆ ಎಂದರು. ಮಕ್ಕಳಿಗಾಗಿ ಮಕ್ಕಳ ವಾಹಿನಿ ಆರಂಭವಾಗಿದ್ದು , ಯೂಟ್ಯೂಬ್ ನಲ್ಲಿಯೂ ವಿಡಿಯೋಗಳು ಇವೆ. ಸಿ ಬಿ ಎಸ್ ಇ ಮಾದರಿಯಲ್ಲಿ ನಿರಂತರ ಮೌಲ್ಯಾಂಕದ ಬಗ್ಗೆಯೂ ಚರ್ಚೆ ನಡೆದಿವೆ. ಮಕ್ಕಳಿಗೆ ಆನ್ ಲೈನ್ ಕ್ಲಾಸ್ ಸಿಗದಿದ್ದರೆ ರೆಕಾರ್ಡ್ ಮಾಡಿ ಪಾಠ ಕೇಳುವ ಸೌಲಭ್ಯ ಒದಗಿಸಲಾಗುವುದು ಎಂದು ಹೇಳಿದರು.

ಎಸ್ ಎಸ್ ಎಲ್ ಸಿ ಪರೀಕ್ಷೆ ಜುಲೈ 19 ಮತ್ತು 22 ಕ್ಕೆ ಮೂಹೂರ್ತ ಫಿಕ್ಸ್.

ಬೆಂಗಳೂರು : ಜೂ. 28- ಕೋವಿಡ್- 19 ನಿಂದಾಗಿ ತೂಗುಯ್ಯಾಲೆಯಲ್ಲಿದ್ದ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎನಿಸಿದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಜುಲೈ 19 ಮತ್ತು 22 ರಂದು ಎರಡು ದಿನಗಳು ಮಾತ್ರ ನಡೆಯಲಿದೆ. ರಾಜ್ಯದ ಸುಮಾರು 8,76,581 ವಿದ್ಯಾರ್ಥಿಗಳು 73,666 ಕೇಂದ್ರಗಳಲ್ಲಿ ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಬರೆಯಲಿದ್ದಾರೆ. ಜುಲೈ 19 ( ಸೋಮವಾರ)ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30 ರ ವರೆಗೆ ಮೊದಲ ಪತ್ರಿಕೆ (ಗಣಿತ , ಸಮಾಜ ವಿಜ್ಞಾನ ಹಾಗೂ ವಿಜ್ಞಾನ) ಹಾಗೂ ಜುಲೈ 22 ( ಗುರುವಾರ)ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30 ರ ವರೆಗೆ (ಭಾಷಾ ವಿಷಯಗಳು) ಪರೀಕ್ಷೆ ನಡೆಯಲಿದೆ. ವಿಕಾಸಸೌಧದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‍ಕುಮಾರ್ ಹಾಗೂ ಅ ಧಿ ಕಾರಿಗಳು ಎಲ್ಲ ಜಿಲ್ಲೆಗಳ ಜಿಲ್ಲಾ ಧಿ ಕಾರಿಗಳು , ಜಿಲ್ಲಾ ಪೋ ಲೀಸ್ ವರಿಷ್ಠಾ ಧಿ ಕಾರಿಗಳು , ಮುಖ್ಯ ಕಾರ್ಯನಿರ್ವಹಣಾ ಧಿ ಕಾರಿಗಳು , ಖಜಾನೆ ಅ ಧಿ ಕಾರಿಗಳು ಸೇರಿದಂತೆ ಮತ್ತಿತರರ ಜತೆ ವಿಡಿಯೋ ಕಾ ನ್ಫ ರೆನ್ಸ್ ಮೂಲಕ ಪತ್ರಿಕಾಗೋಷ್ಠಿಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷಾ ದಿನಾಂಕವನ್ನು ಅ ಧಿ ಕೃತವಾಗಿ ಘೋಷಣೆ ಮಾಡಿದರು. ಕೋವಿಡ್- 19 ಹಿನ್ನೆಲೆಯಲ್ಲಿ ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಎರಡು ದಿನ ಮಾತ್ರ ನಡೆಸಲಾಗುವುದು. ವಿದ್ಯಾರ್ಥಿಗಳಿಗೆ ಬಹು ಆಯ್ಕೆಯ ಪ್ರಶ್ನೆಗಳನ್ನು ನೀಡಲಾಗುವುದು. ಪ್ರತಿಯೊಬ್ಬರೂ ಒಎಂಆರ್ ಶೀ ಟ್ನ ಲ್ಲಿ ಉತ್ತ...

ಡಾ|| ವೈ.ಎ.ಎನ್. ಮತ್ತು ಚಿದಾನಂದ್ ಎಂ.ಗೌಡ ಸ್ನೇಹಿತರ ಬಳಗದ ವತಿಯಿಂದ ಖಾಸಗಿ ಶಾಲಾ ಶಿಕ್ಷಕರಿಗೆ ಫುಡ್ ಕಿಟ್ ವಿತರಣೆ.

ಚಿತ್ರದುರ್ಗ: ನಗರದ ಬಾಪೂಜಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ಡಾ|| ವೈ. ಎ. ನಾರಾಯಣ ಸ್ವಾಮಿ ,ಎಂ. ಚಿದಾನಂದ ಗೌಡ ಹಾಗೂ ಸ್ನೇಹಿತರ ಬಳಗದ ವತಿಯಿಂದ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ ಕೋವಿಡ್ -19 ರ ಆಹಾರ ಕಿಟ್ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮನುಷ್ಯ ಪ್ರಕೃತಿಗಿಂತ ದೊಡ್ಡವನಲ್ಲ. ಪ್ರಕೃತಿಯಿಂದ ಸಂಭವಿಸಿರುವ ಈ ನಿಗೂಢ ಕಾಯಿಲೆಗೆ ಇಡೀ ಪ್ರಪಂಚವೇ ನಲುಗಿ ಹೋಗಿದೆ. ಮಾನ್ಯ ಮುಖ್ಯಮಂತ್ರಿಗಳು ಹೊಸ ಭರವಸೆಯೊಂದಿಗೆ ಸರ್ಕಾರ ರಚನೆ ಮಾಡಿದರು.ಆದರೆ ಪ್ರಕೃತಿ ಸೃಷ್ಟಿಸುತ್ತಿರುವ ಪ್ರವಾಹ,ಕೋವಿಡ್ 1 ಮತ್ತು 2 ನೇ ಅಲೆಯಿಂದಾಗಿ ಸರ್ಕಾರ ಹಾಗೂ ಸಾರ್ವಜನಿಕರ ಜೀವನ ಅಸಹಾಯಕತೆಯತ್ತ ಸಾಗಿದೆ ಎಂದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿಯವರು ಕರೋನದ ಹಾವಳಿಯಿಂದಾಗಿ ದೇಶದ ಜಿ ಡಿ ಪಿ 6 ರಿಂದ 7 ಕ್ಕೆತಲುಪಬೇಕಾಗಿದ್ದು, ಅರ್ಧಕ್ಕೆ ಬಂದು ನಿಂತಿದೆ. ನಿರುದ್ಯೋಗ ಹೆಚ್ಚಾಗಿ ಸರ್ಕಾರದ ಆದಾಯ ಕಡಿಮೆಯಾಗಿ ಖರ್ಚು ಹೆಚ್ಚಾಗಿದೆ. ಹೀಗಾಗಿ ಉತ್ಪಾದನಾ ಘಟಕಗಳಿಗೆ, ನಿರ್ಮಾಣ ಕಾರ್ಯಗಳಿಗೆ ಮೊದಲ ಹಂತದಲ್ಲಿ ಪ್ರಾಮುಖ್ಯತೆ ನೀಡಿ ಉತ್ತೇಜಿಸಲಾಯಿತು.ಹಂತ ಹಂತವಾಗಿ ಎಲ್ಲಾ ಕ್ಷೇತ್ರಗಳು ಮರುಜೀವ ಪಡೆಯುವ ಹೊಸ್ತಿಲಿನಲ್ಲಿವೆಯಾದರೂ ಬಹು ದೊಡ್ಡ ಹೊಡೆತ ಬಿದ್ದಿರುವುದು ಺ ಶಿಕ್ಷಣ ಇಲಾಖೆಗೆ, ಅದರಲ್ಲೂ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರ ಜೀವನ ಕಳೆದ 15 -16 ತಿಂಗಳುಗಳಿಂದ ಪರಿಸ್ಥಿತಿ ...

ಚಿತ್ರದುರ್ಗ:15ರ ಪೋರನೀಗ “ಇಂಡಿಯಾ ಬಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆಮಾಡಿದ ವೀರ.

v         ಕಿರು ನಾಲಗೆ ಹಿಂದಕ್ಕೆ ,  ನಾಲಗೆ ತುದಿಯನ್ನು ಅಡಗಿಸುವ ಅದ್ಭುತ ಕೌಶಲ ತೋರುವ   ಮೂಲಕ   ಇಂಡಿಯಾ ಬಕ್ ಆಫ್ ರೆಕಾರ್ಡ್ ಮಾಡಿದ ಹೆಗ್ಗಳಿಕೆಗೆ ಪಾತ್ರನಾದ   9 ನೇ ತರಗತಿ ವಿದ್ಯಾರ್ಥಿ . Ø ಚಿತ್ರದುರ್ಗ: ಸಾಧನೆ ಅನ್ನೋದು ಸಾಧಕನ ಸ್ವತ್ತೇ ಹೊರತು , ಸೋಮಾರಿಯ ಸ್ವತ್ತಲ್ಲ ಎನ್ನುವ ನಾಣ್ನುಡಿಯನ್ನು ನಾವೆಲ್ಲರೂ ಕೇಳಿರುತ್ತೇವೆ. ಒಬ್ಬೊಬ್ಬರು ಒಂದೊಂದು ಕ್ಷೇತ್ರದಲ್ಲಿ ಸಾಧನೆ ಮಾಡಿದವರೂ ಕಡಿಮೆಯೇನಿಲ್ಲ. ಆದರೆ , ಚಿತ್ರದುರ್ಗದ ಬಾಲಕ ಮಾಡಿದ ಸಾಧನೆ ಕೇಳಿದರೆ ನೀವು ಬೆರಗಾಗೋದು ಗ್ಯಾರಂಟಿ. Ø ಬಾಯಿಯಿಂದ ನಾಲಗೆಯನ್ನು ಮುಂದಕ್ಕೆ ಚಾಚುವುದನ್ನು ಕೇಳಿದ್ದೇವೆ ಮತ್ತು ನೋಡಿದ್ದೇವೆ. ಆದರೆ , ಹಿಂದಕ್ಕೆಳೆದು ಕಿರು ನಾಲಗೆಯ ಹಿಂಭಾಗಕ್ಕೆ ಅಡಗಿಸುವುದನ್ನು ನೀವೆಂದೂ ಕೇಳಿಲ್ಲ , ನೋಡಿಲ್ಲ. ಆದರೆ , ಚಿತ್ರದುರ್ಗದ ಬಾಲಕ ಎಚ್.ವೈ.ಶ್ರೀಹರ್ಷ ಮಾತ್ರ ತನ್ನ ಬಾಯಲ್ಲಿರುವ ನಾಲಗೆಯ ತುದಿಯನ್ನು ಕಿರು ನಾಲಗೆಯ ಹಿಂದಕ್ಕೆ ಹೆಚ್ಚು ಹೊತ್ತು( 1 ನಿಮಿಷ 22 ಸೆಕೆಂಡ್) ಅಡಗಿಸುವ ಕೌಶಲದೊಂದಿಗೆ ‘2021 ರ ಇಂಡಿಯಾ ಬುಕ್ ಆಫ್ ರೆಕಾರ್ಡ್ ’ ಮಾಡಿದ ಸಾಧಕನಾಗಿದ್ದಾನೆ ಎಂದರೆ ನೀವು ನಂಬಲೇಬೇಕಿದೆ. Ø ಚಿತ್ರದುರ್ಗದಲ್ಲಿ ನೆಲೆಸಿರುವ ಎನ್.ಉಪ್ಪಾರಹಟ್ಟಿ ಗ್ರಾಮದ ಯರಿಸ್ವಾಮಿ ಮತ್ತು ಮಮತಾರಾಣಿ ದಂಪತಿಯ ಪುತ್ರ ಶ್ರೀಹರ್ಷ , 14 ವರ್ಷದ ಪೋರ. ಚಿತ್ರದುರ್ಗದ ಡಾನ್ ಬಾಸ್ಕೋ ಶಾಲೆಯಲ್ಲಿ 9 ನೇ ತ...