Thursday, 24 November 2022

ಉಗ್ರ ಸಂಘಟನೆಯ ಟಾರ್ಗೆಟ್ ದೇವಸ್ಥಾನಗಳಂತೆ : ಹೊರ ಬಿತ್ತು ಭಯಾನಕ ಸತ್ಯ

 

ಬೆಂಗಳೂರು: ಮಂಗಳೂರಿನ ಕುಕ್ಕರ್ ಬಾಂಬ್ ಬ್ಲಾಸ್ಟ್ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇ ದಿನೇ ಹಲವು ವಿಚಾರಗಳು ಬೆಳಕಿಗೆ ಬರುತ್ತಿವೆ. ಇದೀಗ ಈ ಬ್ಲಾಸ್ಟ್ ಹೊಣೆಯನ್ನು ಇಸ್ಲಾಮಿಕ್ ರೆಸಿಸ್ವೆನ್ಸ್ ಕೌನ್ಸಿಲ್ ಸಂಘಟನೆ ಹೊಣೆ ಹೊತ್ತುಕೊಂಡಿದ್ದು, ಹಿಂದೂ ದೇವಾಲಯಗಳೇ ನಮ್ಮ ಟಾರ್ಗೆಟ್ ಆಗಿದ್ದವು ಎಂದಿದೆ. ಈ ವಿಚಾರ ಈಗ ಕೇಳಿದವರಿಗೆ ಮೈಝುಮ್ಮೆನಿಸುವಂತೆ ಮಾಡಿದೆ.

ಇಸ್ಲಾಮಿಕ್ ರೆಸಿಸ್ವೆನ್ಸ್ ಕೌನ್ಸಿಲ್ ಹೆಸರು ಬರೆಯಲಾಗಿರುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಡಾರ್ಕ್ ವೆಬ್ ಮೂಲಕ ಅರೆಬಿಕ್ ಭಾಷೆಯಲ್ಲಿ ಪೋಸ್ಟ್ ಮಾಡಲಾಗಿದ್ದು, ಪ್ರತೀಕಾರ ತೀರಿಸಿಕೊಳ್ಳುವ ಎಚ್ಚರಿಕೆಯನ್ನು ನೀಡಿದೆ. ಈ ಪೋಸ್ಟ್ ನಲ್ಲಿ ಕುಕ್ಕರ್ ಬಾಂಬ್ ಸ್ಪೋಟದ ಶಂಕಿತ ಆರೋಪಿ ಶಾರಿಕ್ ಫೋಟೋಗಳನ್ನು ಸಹ ಮುದ್ರಿಸಲಾಗಿದೆ.

ಪೋಸ್ಟ್ ನಲ್ಲಿ, ಕೇಸರಿ ಉಗ್ರರನ್ನು ಗುರಿಯಾಗಿಸಿಕೊಂಡು ನಮ್ಮ ಸಹೋದರ ಮೊಹಮ್ಮದ್ ಶಾರೀಕ್ ಕದ್ರಿ ದೇವಸ್ಥಾನವನ್ನು ಟಾರ್ಗೆಟ್ ಮಾಡಿದ್ದನು. ಆದರೆ ಅದರ ಉದ್ದೇಶ ಪೂರೈಸದೆ ಇದ್ದರು ನಾವೂ ವ್ಯಾಪಾರ ಮತ್ತು ತಂತ್ರಗಳನ್ನು ದೃಷ್ಟಿಕೋನದಿಂದ ಯಶಸ್ವಿಯಾಗಿದ್ದೇವೆ. ಸಹೋದರನ ಬಂಧನಕ್ಕೆ ಸಂತಸಪಡುತ್ತಿರುವ ಅದರಲ್ಲೂ ಎಡಿಜಿಪಿ ಅಲೋಕ್ ಕುಮಾರ್ ಅಂತವರ ಸಂತೋಷವೂ ಅಲ್ಪಕಾಲಿಕವಾಗಿರುತ್ತದೆ ಎಂದು ಎಚ್ಚರಿಕೆ ನೀಡಿದೆ.

The post ಉಗ್ರ ಸಂಘಟನೆಯ ಟಾರ್ಗೆಟ್ ದೇವಸ್ಥಾನಗಳಂತೆ : ಹೊರ ಬಿತ್ತು ಭಯಾನಕ ಸತ್ಯ first appeared on Kannada News | suddione.



source https://suddione.com/temples-are-the-target-of-terrorist-organizations-the-shocking-truth-has-come-out/

No comments:

Post a Comment

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...