Skip to main content

Posts

Showing posts from April, 2022

ಸಮಯಕ್ಕೆ ಸರಿಯಾಗಿ ಬಾರದ ವರ, ಬೇರೊಬ್ಬನ ವರಿಸಿದ ವಧು.!!!

 ಮುಂಬೈ: ಸಮಯಕ್ಕೆ ಸರಿಯಾಗಿ ವರ ಬರಲಿಲ್ಲ ಎಂದು, ವಧು ಅದೇ ಮಂಟಪದಲ್ಲಿ ಬೇರೊಬ್ಬನ ವರಿಸಿದ ಘಟನೆ ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯಲ್ಲಿ ನಡೆದಿದೆ. ಮದುವೆಯ ಸಮಾರಂಭವು ಮಹಾರಾಷ್ಟ್ರ  ಬುಲ್ಧಾನಾ ಜಿಲ್ಲೆಯ ಮಲ್ಕಾಪುರ್  ಪಾಂಗ್ರಾ ಗ್ರಾಮದಲ್ಲಿ    22 4 2022 ರ ಗುರುವಾರ ಸಂಜೆ 4 ಗಂಟೆಗೆ ನಿಗದಿಯಾಗಿದ್ದು, ಎಲ್ಲಾ ರೀತಿಯ ತಯಾರಿಯನ್ನು ಮಾಡಿಕೊಳ್ಳಲಾಗಿತ್ತು. ಸಂಜೆ 4ಕ್ಕೆ ಮದುವೆ ನಿಶ್ಚಯವಾಗಿದ್ದು, ಸಮಯಕ್ಕೆ ಸರಿಯಾಗಿ ವರ ಬಂದಿರಲಿಲ್ಲ. ವಧು ಹಾಗೂ ಆಕೆಯ ಕುಟುಂಬದವರು 8 ಗಂಟೆಯವರೆಗೂ ಕಾದರೂ ವರನ ಸುಳಿವೇ ಇಲ್ಲ, ಕೊನೆಗೆ ಸಂಬಂಧಿಕರಲ್ಲಿ ಒಬ್ಬರನ್ನು ಆಯ್ಕೆ ಮಾಡಿ ಮದುವೆ ಕಾರ್ಯ ಮಾಡಿ ಮುಗಿಸಿದರು. ಈ ಬಗ್ಗೆ ವಧುವಿನ ತಾಯಿ ಮಾತನಾಡುತ್ತಾ ನಾವು 8 ಗಂಟೆವರೆಗೂ ಕಾದೆವು, ಆದರೆ ವರ 8 ಗಂಟೆಯ ನಂತರ ಪಾನಮತ್ತನಾಗಿ ಕುಡಿದು, ಕುಣಿದು, ಕುಪ್ಪಳಿಸುತ್ತಾ.  ಸ್ನೇಹಿತರೊಂದಿಗೆ  ಬಂದು ನಮ್ಮ ಮೇಲೆ ಜಗಳ ಶುರುಮಾಡಿದ. ಅಷ್ಟರೊಳಗಾಗಲೇ ನಮ್ಮ ಸಂಬಂಧಿಕರಲ್ಲಿ ಒಬ್ಬರನ್ನು ಆಯ್ಕೆ ಮಾಡಿ ನಿಗದಿಯಾದಂತೆ ಮದುವೆ ಮಾಡಿ ಮುಗಿಸಿದ್ದೆವು ಎಂದರು. ಮದುವೆಗೆ ಎಲ್ಲಾ ಸಿದ್ಧತೆ ಕಾರ್ಯಗಳು ನಿಗದಿಯಾದಂತೆ ನಡೆದಿದ್ದವು ಆದರೆ ನಾನು 4ಗಂಟೆಗೆ ನಿಗದಿಯಾದ ಮದುವೆಗೆ 8 ಗಂಟೆಯವರೆಗೂ ಕಾದರೂ ವರ ಬರಲಿಲ್ಲ ಎಂಟು ಗಂಟೆಯ ನಂತರ ಕುಡಿದು ಬಂದಿದ್ದಲ್ಲದೆ ವರನು ನಮ್ಮೊಂದಿಗೆ ಜಗಳಕ್ಕಿಳಿದ ಹಾಗಾಗಿ  ಮದುವೆಗೆ ಬಂದಿದ್ದ ನಮ್ಮ ಸಂ...

ಹಿಂದಿ ರಾಷ್ಟ್ರ ಭಾಷ ವಿವಾಧ| ನಟ ಸುದೀಪ್ ಬೆಂಬಲಕ್ಕೆ ನಿಂತ| ಸಿ.ಎಂ. ಬೊಮ್ಮಾಯಿ.

ಬೆಂಗಳೂರು:'ಹಿಂದಿ ರಾಷ್ಟ್ರ ಭಾಷೆ ಅಲ್ಲ 'ಎಂಬ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನಟ ಸುದೀಪ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿ ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಭಾಷಾವಾರು ರಾಜ್ಯಗಳ ವಿಂಗಡಣೆಯಾಗಿರುವುದರಿಂದ ಪ್ರತಿಯೊಂದು ಭಾಷೆಗೂ ಅದರದೇ ಆದ ಮಹತ್ವವಿದೆ. ಯಾವ ಭಾಷೆ ಮೇಲು-ಕೀಳು ಅಲ್ಲ,  ಆಯಾ ರಾಜ್ಯಗಳಿಗೆ ಆಯಾ ಭಾಷೆ ಮಹತ್ವದ್ದಾಗುತ್ತದೆ. ಅಲ್ಲದೆ  ಕರ್ನಾಟಕದಲ್ಲಿ ಕನ್ನಡವೇ ನಮ್ಮ ಉಸಿರು ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು, ಎಲ್ಲರೂ ಆಯಾ ಭಾಷೆಗಳಿಗೆ ಗೌರವಿಸಬೇಕು ಎಂದರು. ಇತ್ತೀಚಿಗೆ ನಟ ಸುದೀಪ್ ಕಾರ್ಯಕ್ರಮವೊಂದರಲ್ಲಿ ಹಿಂದಿ ರಾಷ್ಟ್ರ ಭಾಷೆಯಲ್ಲ ಎಂದಿದ್ದರು ಇದಕ್ಕೆ ಪ್ರತಿಯಾಗಿ ಅಜಯ್ ದೇವಗನ್ ಹಿಂದಿ ರಾಷ್ಟ್ರಭಾಷೆ ಎಂದು ಪ್ರತಿಪಾದಿಸಿದ್ದರು, ಈ  ಭಾಷಾ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಇದರದ್ದೆ  ಸುದ್ದಿಯಾಗಿತ್ತು. ಈ ಟ್ವೀಟ್ ಆದರಿಸಿ ಭಾಷಾ ವಿಚಾರವಾಗಿ ಇಬ್ಬರು ನಟರ ನಡುವಿನ ಸಂಭಾಷಣೆ ಮತ್ತೊಮ್ಮೆ ಹಿಂದಿ ಭಾಷೆ, ರಾಷ್ಟ್ರ ಬಾಷೆಯೇ?  ಎಂಬ ವಿಚಾರ ಮತ್ತೆ ಮುನ್ನೆ ಲೆಗೆ ಬಂದಿದೆ .

ಟಿ-20 ವಿಶ್ವ ಕಪ್ ಗೆ ವಿರಾಟ್ ಇರಲ್ಲ!!

  ಹೊಸದಿಲ್ಲಿ: ಪ್ರಸ್ತುತ ಕಳಪೆ ಫಾರ್ಮ್ ನಲ್ಲಿರುವ ಭಾರತದ ಕ್ರಿಕೆಟ್ ಟಿ-20 ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20ವಿಶ್ವ ಕಪ್ ನಲ್ಲಿ  ಟೀಮ್ ಇಂಡಿಯಾವನ್ನು ಪ್ರತಿನಿಧಿಸುವ  ಸಾಧ್ಯತೆ ಕಡಿಮೆ ಎಂದು ಹಿರಿಯ ಅಧಿಕಾರಿಯೊಬ್ಬರು ಸುಳಿವು ನೀಡಿದ್ದಾರೆ.  ವಿರಾಟ್ ಕೊಹ್ಲಿ ಪ್ರಸ್ತುತ ಆರ್ ಸಿಬಿ ಪರ ಐಪಿಎಲ್ ನಲ್ಲಿ ಆಡುತ್ತಿದ್ದಾರೆ. ಆದರೆ ಇಲ್ಲಿಯ ಅವರಿಂದ ಉತ್ತಮ ಸಾಧನೆ ಹೊರ ಹೊಮ್ಮಿಲ್ಲ. ಕೊಹ್ಲಿ ಆಟವನ್ನು ಬಿಸಿಸಿಐ ಆಯ್ಕೆಗಾರರು ಸೂಕ್ಷ್ಮವಾಗಿ ಗಮನಿಸುತ್ತಿದ್ದ, ಅವರ ಟಿ-20 ಭವಿಷ್ಯದ ಬಗ್ಗೆ ಖಾತರಿ ಇಲ್ಲ ಎಂದು ಅಧಿಕಾರಿ ಹೇಳಿದ್ದಾರೆ.  "ಆಯ್ಕೆ ವಿಷಯದಲ್ಲಿ ನಾವು ಮಧ್ಯೆ ಪ್ರವೇಶಿಸುವುದಿಲ್ಲ. ಕೊಹ್ಲಿ ಮತ್ತು ಇತರ ಆಟಗಾರರ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕಾದ." ಎಂದು ಬಿಸಿಸಿಐ  ಅಧಿಕಾರಿ  ಹೇಳಿದರು.  ಭಾರತದ ಟಿ-20 ತಂಡದಲ್ಲಿ ವಿರಾಟ್ ಕೊಹ್ಲಿ ಭವಿಷ್ಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷ  ಚೇತನ್ ಶರ್ಮ ಯಾವುದೇ ಪ್ರತಿಕ್ರಿಯೆ ನೀಡಲು ನಿರ್ಧರಿಸಿದ್ದಾರೆ. 

2022-23 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ವಾರ್ಷಿಕ ಕಾರ್ಯಸೂಚಿ ಪ್ರಕಟ

  ಬೆಂಗಳೂರು: ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ರಾಜ್ಯದ ಎಲ್ಲಾ ಸರ್ಕಾರಿ , ಅನುದಾನಿತ ಹಾಗೂ ಅನುದಾನ ರಹಿತ  ಪ್ರಾಥಮಿಕ ಮತ್ತು ಪೌಢಶಾಲೆಗಳಿಗೆ  2022-23 ನೇ ಸಾಲಿನ ಶೈಕ್ಷಣಿಕ ವರ್ಷದ ಚಟುವಟಿಕೆಗಳ ಕ್ರಿಯಾಯೋಜನೆ . ವಾರ್ಷಿಕ ಕ್ರಿಯಾ ಯೋಜನೆಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ https://drive.google.com/file/d/1se1x6osq_NZxBiHZSD5DRXjpTpQWqsEZ/view?usp=sharing

ನಾಯಕನಹಟ್ಟಿ: ಹಿರೇಕೆರೆಗೆ 1 ಅಡಿ ಮಳೆ ನೀರು.

  ಚಿತ್ರದುರ್ಗ(ನಾಯಕನಹಟ್ಟಿ): ಚಳ್ಳಕೆರೆ ತಾಲೂಕಿನ ಬೆಳಗಟ್ಟ, ಹಾಯ್ಕಲ್ , ಹುಣಸೆಕಟ್ಟೆ ಪ್ರದೇಶದಲ್ಲಿ ಸೋಮವಾರ ಸುರಿದ ಉತ್ತಮ ಮಳೆಗೆ ತಿಪ್ಪೇರುದ್ರಸ್ವಾಮಿಗಳು ನಿರ್ಮಿಸಿದ ಹಿರೇಕೆರೆಗೆ ಒಂದು ಅಡಿ ನೀರು ಹರಿದಿದೆ.ಕಳೆದ ವರ್ಷ 10 ಅಡಿ ಇದ್ದ ನೀರಿನ ಪ್ರಮಾಣ ಬೇಸಿಗೆಯಲ್ಲಿ 7 ಅಡಿಗೆ ಕಸಿದಿತ್ತು. ಇದೀಗ ಕೆರೆ ಮೇಲ್ಭಾಗದ ಪ್ರದೇಶದಲ್ಲಿ ಉತ್ತಮ ಮಳೆಯಿಂದಾಗಿ ಹಿರೇಕೆರೆಗೆ ಒಂದು ಅಡಿಯಷ್ಟು ನೀರು ಬಂದಿದೆ.

ಕ್ಷೀರಕ್ರಾಂತಿಯಲ್ಲಿ ಜಗತ್ತಿಗೆ ಭಾರತ ನಂ. 1!

  ಗುಜರಾತ್: ‘ಕ್ಷೀರ ಕ್ರಾಂತಿಯ ನೇತಾರ’  ಎನ್ನುವ ಹೆಗ್ಗಳಿಕೆ ಪಡೆದ ಭಾರತಕ್ಕೆ ಈಗ ಜಗತ್ತಿನಲ್ಲೇ ಅತಿಹೆಚ್ಚು ಹಾಲು ಉತ್ಪಾದಿಸುವ ರಾಷ್ಟ್ರ ಎನ್ನುವ ಶ್ರೇಯಸ್ಸೂ ದಕ್ಕಿದೆ. ಈ ವಿ ಷಯವನ್ನು ಅಧಿಕೃತವಾಗಿ ಘೋಷಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು “ ದೇಶದಲ್ಲಿ ವಾರ್ಷಿಕ 8.5 ಲಕ್ಷ ಕೋಟಿ ರೂ. ಮೌಲ್ಯದ ಹಾಲು ಉತ್ಪಾದನೆ ಸಾಧ್ಯವಾಗುತ್ತಿದೆ. ವಹಿವಾಟಿನ ದೃಷ್ಟಿಯಿಂದ ಅಕ್ಕಿ , ಗೋಧಿಯಂತಹ ಅತಿ ಬಳಕೆಯ ಪದಾರ್ಥಗಳನ್ನೇ ಹಾಲು ಹಿಂದಿಕ್ಕಿದೆ.ಹೈನು ವಲಯದ ಅತಿ ದೊಡ್ಡ ಲಾಭ ಸಣ್ಣ ರೈತರಿಗೆ ದಕ್ಕುತ್ತಿದೆ, ಎಂದರು. ಗುಜರಾತ್ ನ ಬನಸ್ಕಾಂತ ಜಿಲ್ಲೆಯ ಡಿಯೋದರದಲ್ಲಿ ನೂತನ ಹೈನುಗಾರಿಕೆ ಸಂಕೀರ್ಣ ಉದ್ಘಾಟಿಸಿ ಮಾತನಾಡಿದ ಪ್ರದಾನಿ ಮೋದಿ ‘ಸಹಕಾರ ಹೈನುಗಾರಿಕೆಯು ಸಣ್ಣ ರೈತರನ್ನು ಸಬಲಗೊಳಿಸಿದೆ.ಅದರಲ್ಲೂ ವಿಶೇಷವಾಗಿ ಮಹಿಳೆಯರನ್ನು ಅದು ಸ್ವಾವಲಂಬಿಗಳನ್ನಾಗಿಸಿದೆ. ಇದರಿಂದ ಗ್ರಾಮೀಣ ಭಾಗದ ಆರ್ಥಿಕತೆಗೂ ಆನೆ ಬಲ ಬಂದಿದೆ, ಎಂದು  ಬಣ್ಣಿಸಿದರು. ಕ್ಷೀರ ಕ್ರಾಂತಿಯಲ್ಲಿ ಭಾರತದ ಸಾಧನೆ. ·         23%   ಜಾಗತಿಕ ಹಾಲು ಉತ್ಪಾದನೆಯಲ್ಲಿ ಭಾರತದ ಪಾಲು. ·         8.5 ಲಕ್ಷ ಕೋಟಿ ರೂ. ವಾರ್ಷಿಕ ವಹಿವಾಟನ್ನು ಭಾರತದ ಕ್ಷೀರೋದ್ಯಮ ನಡೆಸುತ್ತಿದೆ. ·         200 ದಶಲಕ್ಷ ಟನ್ -2020-2...

ಏಪ್ರಿಲ್ 22 ರಿಂದ ಮೇ 18 ರ ವರೆಗೆ ದ್ವಿತೀಯ ಪಿಯು ಪರೀಕ್ಷೆಗೂ ಹಿಜಾಬ್ ಧರಿಸುವಂತಿಲ್ಲ.

  ಬೆಂಗಳೂರು: ರಾಜ್ಯಾದ್ಯಂತ ಏಪ್ರಿಲ್ 22 ರಿಂದ ಆರಂಭವಾಗಲಿರುವ ದ್ವಿತೀಯ ಪಿಯು ಪರೀಕ್ಷೆಗೆ ಸರಕಾರ, ಹೈಕೋರ್ಟ್ನ ಆದೇಶದನ್ವಯ ಹಿಜಾಬ್ ಧರಿಸಿ ಬರುವಂತಿಲ್ಲ. ಕಡ್ಡಾಯವಾಗಿ ಸಮವಸ್ತ್ರದಲ್ಲೇ ಪರೀಕ್ಷೆಗೆ ಹಾಜರಾಗಬೇಕು. “ಪರೀಕ್ಷಾ ಕಾರ್ಯಕ್ಕೆ ಹಾಜರಾಗುವ ಸಿಬ್ಬಂದಿ ಹಾಗೂ ಇತರೆ ಧಾರ್ಮಿಕ ಸಂಕೇತವುಳ್ಳ ವಸ್ತ್ರಗಳನ್ನು ಧರಿಸಿ ಪರೀಕ್ಷಾ ಕಾರ್ಯಕ್ಕೆ ಹಾಜರಾಗಲು ಅವಕಾಶವಿಲ್ಲ.” ಎಂದು ಪ್ರಾಥಮಿಕ ಮತ್ತು ಪೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು. ಸಮವಸ್ತ್ರ ನಿಯಮದಿಂದ ಪುನಾರಾವರ್ತಿತ ಮತ್ತು ಖಾಸಗಿ ಅಭ್ಯರ್ಥಿಗಳಿಗೆ ವಿನಾಯಿತಿ ನೀಡಲಾಗಿದೆ. ವಿದ್ಯಾರ್ಥಿಗಳು ಸರಕಾರ ಮತ್ತು ಹೈಕೋರ್ಟ್ ಆದೇಶ ಪಾಲನೆ ಮಾಡಬೇಕು. ಇತ್ತೀಚೆಗೆ ಪೂರ್ಣಗೊಂಡ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಗೆ 14 ಜಿಲ್ಲೆಗಳಲ್ಲಿ ಇತರೆ ಧರ್ಮದ ಹೆಣ್ಣು ಮಕ್ಕಳಿಗೆ ಹೋಲಿಸಿದರೆ. ಮುಸ್ಲಿಂ ಧರ್ಮದ ಹೆಣ್ಣು ಮಕ್ಕಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಂದರೆ ಶೇ 98 ರಷ್ಟು ಮಂದಿ ಹಾಜರಾಗಿದ್ದಾರೆ. ಹಾಗಾಗಿ ಹಿಜಾಬ್ ಒಂದು ಸಮಸ್ಯೆಯಲ್ಲ ಎಂದರು.

ಏಪ್ರಿಲ್ 22 ರಿಂದ ಮೇ 18 ರ ವರೆಗೆ ದ್ವಿತೀಯ ಪಿ.ಯು.ಸಿ.

  ಬೆಂಗಳೂರು; ಏಪ್ರಿಲ್ 22 ರಿಂದ 18 ರ ವರೆಗೆ ಒಟ್ಟು 1076 ಪರೀಕ್ಷಾ ಕೇಂದ್ರಗಳಲ್ಲಿ ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30 ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ. ಎಂದು ಪ್ರಾಥಮಿಕ ಮತ್ತು ಪೌಢಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ . ಒಟ್ಟು 6.84 ಲಕ್ಷ ವಿದ್ಯಾರ್ಥಿ: ಈ ಭಾರಿ 3,46,936 ಬಾಲಕರು, 3,37,319 ಬಾಲಕಿಯರು ಸೇರಿದಂತೆ ಒಟ್ಟು 6,84,255. ವಿದ್ಯಾರ್ಥಿಗಳು ಪರೀಕ್ಷಗೆ ನೋಂದಣಿ ಮಾಡಿಕೊಂಡಿದ್ದಾರೆ.ಇದರಲ್ಲಿ 6,00,519 ಹೊಸ ಅಭ್ಯರ್ಥಿಗಳು, 61,808 ಪುನರಾವರ್ತಿತ ಹಾಗೂ 21,928 ಮಂದಿ ಖಾಸಗಿ ಅಭ್ಯರ್ಥಿಗಳಿದ್ದಾರೆ. ಕಲಾ ವಿಭಾಗದ 2,28,167 ವಾಣಿಜ್ಯ ವಿಭಾಗದ 2,45,519, ವಿಜ್ಞಾನ ವಿಭಾಗದ 2,10,569 ವಿದ್ಯಾರ್ಥಿಗಳು 2,212 ಮಂದಿ ವಿಶೇಷಚೇತನರು ಪರೀಕ್ಷೆ ಬರೆಯಲಿದ್ದಾರೆ ಎಂದರು. ಪರೀಕ್ಷಾ ಅಕ್ರಮ ತಡೆಯಲು 2152 ವಿಶೇಷ ಜಾಗೃತ ದಳ, 858 ತಾಲೂಕು ಜಾಗೃತಚ ದಳ ಹಾಗೂ 64 ಜಿಲ್ಲಾ ಜಾಗೃತ ದಳಗಳನ್ನು ರಚನೆ ಮಾಡಾಗಿದೆ. ಪರೀಕ್ಷಗೆ ಹಾಜರಾಗುವ ವಿದ್ಯಾರ್ಥಿಗಳು ಪರೀಕ್ಷೆ ದಿನಗಳಂದು ತಮ್ಮ ಪ್ರವೇಶ ಪತ್ರ ತೋರಿಸಿ   ಕೆಎಸ್ ಆರ್ ಟಿಸಿ, ಬಿಎಂಟಿಸಿ ಸೇರಿದಂತೆ ಇತರೆ ಸಾರಿಗೆ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಸಾರಿಗೆ ಇಲಾಖೆ ಅವಕಾಶ ಕಲ್ಪಿಸಿದೆ. ಈ ಬಾರಿ ಹಾಸನ, ತುಮಕೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಹೊಸದಾಗಿ ಮೌಲ್ಯಮಾಪನ ಕೇಂದ್ರಗಳನ್ನು ತೆರೆಯಲಾಗುವುದು, ಒಟ್ಟು 81 ಕೇಂದ್ರಗಳಲ್ಲಿ...

ಒಂದೇ ಸಾಲಿನಲ್ಲಿ ಐದು ಗ್ರಹಗಳು ಗೋಚರ!!

  ಚಿತ್ರದು ರ್ಗ : ವಿಸ್ಮಯಗಳ ಲೋಕ ಬಾಹ್ಯಕಾಶದಲ್ಲಿ ಏಪ್ರೀಲ್ 24ರ ಸೂರ್ಯೋದಯಕ್ಕಿಂತ ಮುಂಚೆ ಪೂರ್ವ ದಿಕ್ಕಿನಲ್ಲಿ 5 ಗ್ರಹಗಳು ಒಂದೇ ಸಾಲಿನಲ್ಲಿ ಕಾಣಲಿವೆ. ಬುಧ, ಗುರು, ಶುಕ್ರ, ಮಂಗಳ ಹಾಗೂ ಶನಿ ಗ್ರಹಗಳು ಒಂದೇ ರೇಖೆಯಲ್ಲಿ ಸಾಗುವುದನ್ನು ಬರಿಗಣ್ಣಿನಿಂದಲೇ ನೋಡಬಹುದು. ದೂರದರ್ಶಕ ಅಥವಾ ಬೈನಾಕುಲರ್ ಇದ್ದರೆ, ಇಂತಹ ಅಪರೂಪದ ನೋಟವನ್ನು ಕಣ್ತುಕೊಳ್ಳಬಹುದು ಎಂದು ಹವ್ಯಾಸಿ ಖಗೋಳ ವೀಕ್ಷಕ, ಕ.ರಾ.ವಿ.ಪ ರಾಜ್ಯ ಸಮಿತಿ ಸದಸ್ಯ ಎಚ್,ಎಸ್,ಟಿ ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.