Skip to main content

Posts

Showing posts from December, 2022

IND vs BAN: ಸಿರಾಜ್- ಕುಲ್ದೀಪ್ ಮ್ಯಾಜಿಕ್; ಬಾಲ ಮುದುರಿದ ಬಾಂಗ್ಲಾ! 133 ರನ್​ಗಳಿಗೆ 8 ವಿಕೆಟ್ ಪತನ

ಟೀಂ ಇಂಡಿಯಾ ವಿರುದ್ಧ ಅಮೋಘ ಪ್ರದರ್ಶನ ನೀಡಿ ಏಕದಿನ ಸರಣಿ ಗೆದ್ದಿದ್ದ ಬಾಂಗ್ಲಾದೇಶ (India and Bangladesh) ತಂಡ ಟೆಸ್ಟ್ ಸರಣಿಯಲ್ಲಿ ಮುಗ್ಗರಿಸಿದೆ. ಚಟ್ಟೋಗ್ರಾಮ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶ ಎರಡನೇ ದಿನದಾಟದ ಅಂತ್ಯಕ್ಕೆ ಕೇವಲ 133 ರನ್‌ಗಳಿಗೆ ತನ್ನ 8 ವಿಕೆಟ್‌ಗಳನ್ನು ಕಳೆದುಕೊಂಡಿದೆ. ಬಾಂಗ್ಲಾದೇಶದ ಬ್ಯಾಟ್ಸ್‌ಮನ್‌ಗಳಿಗೆ ಚಳ್ಳೆ ಹಣ್ಣು ತಿನ್ನಿಸಿದ ಸಿರಾಜ್ (Mohammed Siraj) ಹಾಗೂ ಕುಲ್ದೀಪ್ ಯಾದವ್ ಭಾರತಕ್ಕೆ ಇನ್ನಿಂಗ್ಸ್ ಮುನ್ನಡೆ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಬಾಂಗ್ಲಾ ಪರ ಉರುಳಿರುವ 8 ವಿಕೆಟ್​ಗಳಲ್ಲಿ ಕುಲ್ದೀಪ್ ಯಾದವ್ (Kuldeep Yadav) 10 ಓವರ್‌ಗಳಲ್ಲಿ 33 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಸಿರಾಜ್ ಕೂಡ 3 ವಿಕೆಟ್ ಪಡೆದಿದ್ದಾರೆ. ಇನ್ನುಳಿದಂತೆ ಒಂದು ವಿಕೆಟ್ ಉಮೇಶ್ ಯಾದವ್ ಪಾಲಾಯಿತು. ಭಾರತದ ಬೌಲಿಂಗ್ ದಾಳಿಗೆ ನಲುಗಿದ ಬಾಂಗ್ಲಾದೇಶದ ಬ್ಯಾಟ್ಸ್‌ಮನ್​ಗಳಿಗೆ ಹೆಚ್ಚು ಹೊತ್ತು ವಿಕೆಟ್‌ನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ತಂಡದ ಪರ ಇದುವರೆಗೆ ಮುಶ್ಫಿಕರ್ ರಹೀಮ್ ಗರಿಷ್ಠ 28 ರನ್ ಗಳಿಸಿದರೆ, ಲಿಟ್ಟನ್ ದಾಸ್ 24 ರನ್ ಗಳಿಸಿದರು. ಝಾಕಿರ್ ಹಸನ್ 20 ರನ್​ಗಳ ಇನಿಂಗ್ಸ್ ಆಡಿದರು. ಇನ್ನುಳಿದಂತೆ 9ನೇ ವಿಕೆಟ್​ಗೆ ಜೊತೆಯಾಗಿರುವ ಮೆಹದಿ ಹಸನ್ ಹಾಗೂ ಇಬಾದತ್ ಹುಸೇನ್ 3ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ. ಹಸನ್ 16 ರನ್ ಗಳಿಸಿದರೆ, ಇಬಾದತ್ 13 ರನ್ ಗಳ...

ಸಿರಾಜ್ ಜೊತೆ ಲಿಟನ್ ಕಿರಿಕ್; ಮುಂದಿನ ಎಸೆತದಲ್ಲೇ ಔಟ್! ಕಿಂಗ್ ಕೊಹ್ಲಿ ರಿಯಾಕ್ಷನ್ ಹೇಗಿತ್ತು ಗೊತ್ತಾ? ವಿಡಿಯೋ

ಚಟ್ಟೋಗ್ರಾಮ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾದೇಶ (India and Bangladesh) ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಆಡಿ ಮುಗಿಸಿರುವ ಟೀಂ ಇಂಡಿಯಾ ಬಾಂಗ್ಲಾ ಎದುರು 404 ರನ್​ಗಳ ಟಾರ್ಗೆಟ್ ಮುಂದಿಟ್ಟಿದೆ. ಆದರೆ ಈ ಗುರಿ ಬೆನ್ನಟ್ಟಿರುವ ಬಾಂಗ್ಲಾ ತಂಡಕ್ಕೆ ಆರಂಭದಲ್ಲೇ ಹಿನ್ನಡೆ ಎದುರಾಗಿದೆ. ಕೇವಲ 56 ರನ್​ಗಳಿಗೆ ತಂಡದ ಪ್ರಮುಖ 4 ವಿಕೆಟ್​ಗಳು ಉರುಳಿವೆ. ಆರಂಭದಿಂದಲೇ ಬಾಂಗ್ಲಾ ಆಟಗಾರರ ಮೇಲೆ ಸವಾರಿ ಮಾಡಿರುವ ಸಿರಾಜ್ (Mohammad Siraj) ಹಾಗೂ ಉಮೇಶ್ ಯಾದವ್ ರನ್​ಗಳಿಗೆ ಕಡಿವಾಣ ಹಾಕಿದ್ದಾರೆ. ಆದರೆ ಈ ನಡುವೆ ಸಿರಾಜ್ ಹಾಗೂ ಬಾಂಗ್ಲಾ ತಂಡದ ಆಟಗಾರ ಲಿಟನ್ ದಾಸ್ (Litton Das) ಮೈದಾನದಲ್ಲಿಯೇ ಮಾತಿನ ಚಕಮಕಿ ನಡೆಸಿದ ಘಟನೆ ನಡೆದಿದೆ. ಆದರೆ ಈ ವಾಗ್ವಾದ ನಡೆದ ಮುಂದಿನ ಎಸೆತದಲ್ಲಿಯೇ ಸಿರಾಜ್, ಲಿಟನ್​ರನ್ನು ಪೆವಿಲಿಯನ್​ಗಟ್ಟಿ ಏಟಿಗೆ ಎದುರೇಟು ನೀಡಿದ್ದಾರೆ. ಇದಕ್ಕೆ ಕಿಂಗ್ ಕೊಹ್ಲಿ (Virat Kohli) ಕೂಡ ಸಾಥ್ ನೀಡಿದ್ದಾರೆ. ವಾಸ್ತವವಾಗಿ ಬಾಂಗ್ಲಾ ಇನ್ನಿಂಗ್ಸ್​ 14ನೇ ಓವರ್‌ನಲ್ಲಿ ಈ ಘಟನೆ ನಡೆಯಿತು. ಈ ಓವರ್ ಎಸೆಯಲು ಬಂದ ಸಿರಾಜ್ ಹಾಗೂ ಲಿಟ್ಟನ್ ದಾಸ್ ನಡುವೆ ಮಾತಿನ ಚಕಮಕಿ ನಡೆಯಿತು. ಈ ಓವರ್​ಗೂ ಮುನ್ನ ಸಿರಾಜ್ ವಿರುದ್ಧ ಲಿಟ್ಟನ್ ದಾಸ್ ಕೆಲವು ಅತ್ಯುತ್ತಮ ಹೊಡೆತಗಳನ್ನು ಆಡಿದ್ದರು. ಈ ವೇಳೆ ಬೌಲಿಂಗ್​ಗೆ ಬಂದ ಸಿರಾಜ್​ ಲಿಟನ್​ಗೆ ಏನನ್ನೋ ಹೇಳಿದರು. ಇದನ್ನು ನೋಡಿದ ಲಿಟನ್​ ನನಗೆ ಸ...

IND vs BAN: 3 ಜೀವದಾನ ಸಿಕ್ಕರೂ ಶತಕ ಸಿಡಿಸದ ಶ್ರೇಯಸ್; ಆದರೂ ಎರಡೆರಡು ದಾಖಲೆ ಸೃಷ್ಟಿ..!

ಭಾರತ ಮತ್ತು ಬಾಂಗ್ಲಾದೇಶ (India and Bangladesh) ನಡುವಿನ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟವನ್ನು ಆರಂಭಿಸಿರುವ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ಸಿಕ್ಕಿಲ್ಲ. ಮೊದಲ ದಿನದಾಟದಲ್ಲಿ 82 ರನ್​ಗಳಿಸಿದ್ದ ಶ್ರೇಯಸ್ ಅಯ್ಯರ್ (Shreyas Iyer), ಎರಡನೇ ದಿನದಾಟದಲ್ಲಿ ಇದನ್ನು ಶತಕವನ್ನಾಗಿ ಪರಿವರ್ತಿಸಲಿದ್ದಾರೆ ಎಂಬ ನಿರೀಕ್ಷೆ ಇತ್ತು. ಆದರೆ ಎರಡನೇ ದಿನದಾಟದಲ್ಲಿ ತನ್ನ ಖಾತೆಗೆ 4 ರನ್ ಸೇರಿಸಿದ ಅಯ್ಯರ್ ಬಾಂಗ್ಲಾದೇಶದ ಬೌಲರ್ ಇಬಾದತ್ ಹುಸೇನ್ (Ibadat Hussain) ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಪೆವಿಲಿಯನ್ ಸೇರಿಕೊಂಡಿದ್ದಾರೆ. ಇದರೊಂದಿಗೆ ಬಾಂಗ್ಲಾದೇಶದ ವಿರುದ್ಧ 86 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ಅಯ್ಯರ್, ತಮ್ಮ ಟೆಸ್ಟ್ ವೃತ್ತಿಜೀವನದ (Test career) ನಾಲ್ಕನೇ ಅರ್ಧಶತಕವನ್ನು ಪೂರ್ಣಗೊಳಿಸಿದ್ದಾರೆ. 2. ಸಿಕ್ಕ 3 ಜೀವದಾನಗಳ ಸದುಪಯೋಗ ಮಾಡಿಕೊಳ್ಳಲಿಲ್ಲ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಶ್ರೇಯಸ್ ಅಯ್ಯರ್ 3 ಜೀವದಾನಗಳನ್ನು ಪಡೆದರು. 30 ರನ್‌ಗಳ ವೈಯಕ್ತಿಕ ಸ್ಕೋರ್‌ನಲ್ಲಿ ಮೊದಲ ಜೀವದಾನ ಪಡೆದ ಅಯ್ಯರ್, ಇದಾದ ನಂತರ ಸಿಕ್ಕ ಎರಡನೇ ಜೀವದಾನದಿಂದ ಎಲ್ಲರೂ ಆಶ್ಚರ್ಯಚಕಿತರಾದರು. ಏಕೆಂದರೆ ಬಾಂಗ್ಲಾ ವೇಗಿ ಇಬಾದತ್ ಹುಸೇನ್ ಎಸೆದ ಚೆಂಡು ಅಯ್ಯರ್ ಅವರ ಬ್ಯಾಟ್ ತಪ್ಪಿಸಿಕೊಂಡು ಸೀದಾ ವಿಕೆಟ್​ಗೆ ಬಡಿಯಿತು. ಚೆಂಡು ಬಡಿದ ತಕ್ಷಣ ವಿಕೆಟ್​ನಲ್ಲಿ ಲೈಟ್​ ಕೂಡ ಆನ್​ ಆಯಿತು, ಬೆಲ್ಸ್ ಸಹ ...

INDW vs AUSW: ಬ್ಯಾಟಿಂಗ್-ಬೌಲಿಂಗ್​ನಲ್ಲಿ ಮಿಂಚಿದ ಆಸೀಸ್: ಭಾರತೀಯ ಮಹಿಳೆಯರಿಗೆ ಎರಡನೇ ಸೋಲು

ಭಾರತ ಪ್ರವಾಸ ಬೆಳೆಸಿರುವ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡ ಟಿ20 ಸರಣಿ ಆಡುತ್ತಿದ್ದು ಬೊಂಬಾಟ್ ಪ್ರದರ್ಶನ ತೋರುತ್ತಿದೆ. ಬುಧವಾರ ಮುಂಬೈನ ಬ್ರಬೌರ್ನ್ ಕ್ರೀಡಾಂಗಣದಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ 21 ರನ್​ಗಳ ಜಯ ಸಾಧಿಸುವ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 2-1 ಮುನ್ನಡೆ ಪಡೆದುಕೊಂಡಿದೆ. ಕಾಂಗರೂ ಪಡೆಯ ಬ್ಯಾಟಿಂಗ್-ಬೌಲಿಂಗ್ ಅಬ್ಬರಕ್ಕೆ ತಬ್ಬಿಬ್ಬಾದ ಭಾರತ ಮಹಿಳಾ ತಂಡ ಎರಡನೇ ಸೋಲು ಕಂಡಿದೆ. ಮೊದಲ ಪಂದ್ಯದಲ್ಲಿ ಆಸೀಸ್ 9 ವಿಕೆಟ್​ಗಳ ಜಯ ಸಾಧಿಸಿದರೆ, ದ್ವಿತೀಯ ಟಿ20ಯಲ್ಲಿ ನಡೆದ ಸೂಪರ್ ಓವರ್​ನಲ್ಲಿ ಭಾರತ ಗೆಲುವು ಕಂಡಿತ್ತು. ಇದೀಗ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಜಯಿಸುವ ಮೂಲಕ ಮುನ್ನಡೆ ಸಾಧಿಸಿದೆ. ಭಾರತ ಸರಣಿ ವಶಪಡಿಸಿಕೊಳ್ಳಬೇಕಾದರೆ ಉಳಿದಿರುವ ಎರಡೂ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ತೃತೀಯ ಟಿ20 ಯಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕಿ ಹರ್ಮನ್​ಪ್ರೀತ್ ಕೌರ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್​ಗೆ ಇಳಿದ ಆಸ್ಟ್ರೇಲಿಯಾ ಮೊದಲ ಓವರ್​ನಲ್ಲೇ ರೇಣುಕಾ ಸಿಂಗ್ ಬೌಲಿಂಗ್​ನಲ್ಲಿ ಅಲಿಸ್ಸಾ ಹೀಲೆ (1) ಔಟಾದರು. ನಂತರದ ಓವರ್​ನಲ್ಲಿ ತಹಿಲಾ ಮೆಕ್​ಘ್ರತ್ ಕೂಡ 1 ರನ್​ಗೆ ನಿರ್ಗಮಿಸಿದರು. ನಂತರ ಬೆತ್ ಮೂನೆ ಹಾಗೂ ಎಲಿಸ್ಸಾ ಪೆರಿ ಉತ್ತಮ ಜೊತೆಯಾಟ ಆಡಿ ತಂಡವನ್ನು ಮೇಲೆತ್ತಿದರು. ಈ ಜೋಡಿ 64 ರನ್​ಗಳ ಜೊತೆಯಾಟ ಆಡತು. ಚೆನ್ನಾಗಿಯೆ ಆಡುತ್ತಿದ್ದ ಮೋನಿ 22 ಎಸೆತಗಳಲ್ಲಿ ...

FIFA World Cup 2022: ಸೆಮೀಸ್​ನಲ್ಲಿ ಮೊರಕ್ಕೊಗೆ ಸೋಲು: ಫಿಫಾ ಫೈನಲ್​ನಲ್ಲಿ ಫ್ರಾನ್ಸ್-ಅರ್ಜೆಂಟೀನಾ ಸೆಣೆಸಾಟ

ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌ (FIFA World Cup) ಅಂತಿಮ ಹಂತದತ್ತ ತಲುಪುತ್ತಿದೆ. ಬುಧವಾರ ಅಲ್​ ಬಯಾತ್ ಸ್ಟೇಡಿಂ​ನಲ್ಲಿ ನಡೆದ ದ್ವಿತೀಯ ಸೆಮಿ ಫೈನಲ್​ ಹಣಾಹಣಿಯಲ್ಲಿ ಮೊರಾಕ್ಕೊ ತಂಡವನ್ನು 2-0 ಗೋಲ್​ಗಳಿಂದ ಮಣಿಸಿದ ಫ್ರಾನ್ಸ್​ (France vs Morocco) ತಂಡ ಪ್ರಶಸ್ತಿ ಸುತ್ತಿಗೇರಿದೆ. ತೀವ್ರ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಬಲಿಷ್ಠ ಫ್ರಾನ್ಸ್ ಜಯ ಸಾಧಿಸಿದ ಪರಿಣಾಮ ಫೈನಲ್​ನಲ್ಲಿ ಅರ್ಜೆಂಟೀನಾ (France vs Argentina) ವಿರುದ್ಧ ಕಪ್​ಗಾಗಿ ಹೋರಾಟ ನಡೆಸಲಿದೆ. ಸೆಮೀಸ್​ ಪಂದ್ಯದಲ್ಲಿ ಫ್ರಾನ್ಸ್ ಪರ ಥಿಯೊ ಹೆರ್ನಾಂಡೀಸ್ ಮತ್ತು ಬದಲಿ ಆಟಗಾರನಾಗಿ ಬಂದ ರಂಡಲ್ ಕೊಲೊ ಮೌನಿ ತಲಾ ಒಂದು ಗೋಲು ಸಿಡಿಸಿ ಗೆಲುವಿಗೆ ಕಾರಣರಾದರು. ಪಂದ್ಯದ ಆರಂಭದಿಂದಲೂ ಆಕ್ರಮಣಕಾರಿ ಆಟವಾಡಿದ ಫ್ರಾನ್ಸ್ ಪಂದ್ಯದ 5ನೇ ನಿಮಿಷದಲ್ಲೇ ಮೊದಲ ಗೋಲು ಗಳಿಸಿತು. ಫ್ರಾನ್ಸ್ ಪರ ಥಿಯೋ ಹೆರ್ನಾಂಡೆಜ್ ಮೊದಲು ಗೋಲು ಗಳಿಸಿದರು. ಬಳಿಕ ಮೊರಾಕ್ಕೊ ಸಾಕಷ್ಟು ಬಾರಿ ಗೋಲು ಗಳಿಸಿದರು ಪ್ರಯತ್ನಿಸಿದರೂ ಫ್ರಾನ್ಸ್ ಆಟಗಾರರು ರಕ್ಷಣಾತ್ಮಕ ಆಟದ ಮೊರೆ ಹೋಗಿ ಮೊರಾಕ್ಕೊಗೆ ಗೋಲು ಗಳಿಸಲು ಅವಕಾಶ ನೀಡಲಿಲ್ಲ. ಪಂದ್ಯ 1-0 ಅಂತರದಲ್ಲಿ ಫ್ರಾನ್ಸ್ ಪರವಾಗಿಯೇ ಅಂತಿಮ ಹಂತದತ್ತ ಸಾಗುತ್ತಲೇ ಫ್ರಾನ್ಸ್ ಪರ ಪರ್ಯಾಯ ಆಟಗಾರನಾಗಿ ಕಣಕ್ಕಿಳಿದ ರಾಂಡಲ್ ಕೊಲೊ ಮುವಾನಿ ಗೋಲು ಗಳಿಸಿ ಫ್ರಾನ್ಸ್ ಗೆಲುವು ಸ್ಪಷ್ಟಪಡಿಸಿದರು. IND vs BAN: 20 ಓವರ್ ಆಗುವಷ್ಟರಲ್ಲೇ ...

ನ್ಯೂಜಿಲ್ಯಾಂಡ್ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿದ ಕೇನ್ ವಿಲಿಯಮ್ಸನ್

ಇತ್ತೀಚಿನ ಪಂದ್ಯಗಳಲ್ಲಿ ಫಾರ್ಮ್‌ ಕಳೆದುಕೊಂಡಿದ್ದ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ (Kane Williamson) ಅವರು ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದು, ಮುಂಬರುವ ಪಾಕಿಸ್ತಾನ ಪ್ರವಾಸಕ್ಕಾಗಿ ಟಿಮ್ ಸೌಥಿ (Tim Southee) ಅವರು ಟೆಸ್ಟ್ ತಂಡವನ್ನು ಮುನ್ನಡೆಸಲಿದ್ದಾರೆ. “ನಾಯಕತ್ವವು ಮೈದಾನದ ಒಳಗೆ ಮತ್ತು ಹೊರಗೆ ಹೆಚ್ಚಿದ ಕೆಲಸದ ಹೊರೆಯೊಂದಿಗೆ ಬರುತ್ತದೆ ಮತ್ತು ನನ್ನ ವೃತ್ತಿಜೀವನದ ಈ ಹಂತದಲ್ಲಿ ಈ ನಿರ್ಧಾರಕ್ಕೆ ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಇನ್ನು ಕೇನ್ ವಿಲಿಯಮ್ಸನ್ ಬದಲಿಗೆ ಯಾರು ತಂಡವನ್ನು ಮುನ್ನಡೆಸಬಹುದು ಎಂಬ ಪ್ರಶ್ನೆಗೆ ಸ್ವತಃ ಕೇನ್ ಅವರೇ ಉತ್ತರಿಸಿದ್ದಾರೆ. “ಟಿಮ್ ಸೌಥಿ ಅವರನ್ನು ನಾಯಕನಾಗಿ ಮತ್ತು ಟಾಮ್ ಲ್ಯಾಥಮ್ ಅವರನ್ನು ಉಪನಾಯಕನಾಗಿ ಬೆಂಬಲಿಸಲು ನಾನು ಉತ್ಸುಕನಾಗಿದ್ದೇನೆ. ನನ್ನ ವೃತ್ತಿಜೀವನದ ಬಹುಪಾಲು ಅವರಿಬ್ಬರೊಂದಿಗೆ ಆಡಿದ್ದೇನೆ, ಅವರು ಉತ್ತಮ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸವಿದೆ” ಎಂದು ಕೇನ್ ವಿಲಿಯಮ್ಸನ್ ಹೇಳಿದ್ದಾರೆ. ಬ್ಯಾಟರ್ ವಿಲಿಯಮ್ಸನ್ ಅವರು ಈಗ ಇಂಗ್ಲೆಂಡ್ ಟೆಸ್ಟ್ ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್ ಅವರಿಂದ ಅಧಿಕಾರ ವಹಿಸಿಕೊಂಡ ನಂತರ 2016 ರಿಂದ ಬ್ಲ್ಯಾಕ್‌ಕ್ಯಾಪ್‌ಗಳನ್ನು ಮುನ್ನಡೆಸಿದ್ದಾರೆ. ಟೆಸ್ಟ್ ನಾಯಕತ್ವದಿಂದ ಕೆಳಗಿಳಿದಿರುವುದನ್ನು ಹೊರತುಪಡಿಸಿದರೆ ಅವರು ಮೂರೂ ಸ್ವರೂಪಗಳ ಕ್ರಿಕೆಟ್ ತಂಡಗಳಲ್ಲಿ ನ್ಯೂಜಿಲೆಂಡ್ ಅನ್ನು ಪ್ರತಿನ...

ರಾಹುಲ್ ಗಾಂಧಿಗೆ ಸಾಥ್ ನೀಡಿದ RBI ಮಾಜಿ ಗವರ್ನರ್..!

  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಹಮ್ಮಿಕೊಂಡಿದ್ದು, ಎಲ್ಲಾ ರಾಜ್ಯಕ್ಕೂ ಭೇಟಿ ನೀಡುತ್ತಿದ್ದಾರೆ. ಈ ಭೇಟಿಯ ವೇಳೆ ಹಲವರು ರಾಹುಲ್ ಗಾಂಧಿಗೆ ಜೊತೆಯಾಗುತ್ತಿದ್ದಾರೆ. ಇದೀಗ ರಾಜಸ್ಥಾನದಲ್ಲಿ ರಾಹುಲ್ ಗಾಂಧಿಗೆ ಆರ್ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಜೊತೆಯಾಗಿದ್ದಾರೆ. Former Governor of RBI, Dr. Raghuram Rajan joined Rahul Gandhi in today’s #BharatJodoYatra pic.twitter.com/BQax4O0KSF — Darshnii Reddy (@angrybirddtweet) December 14, 2022 ಇಂದು ಬೆಳಗ್ಗೆ ರಾಜಸ್ಥಾನದಿಂದ ಮತ್ತೆ ಯಾತ್ರೆ ಆರಂಭವಾಗಿದೆ. ಸವಾಯಿ ಮಾಧೋಪುರದ ಭಡೋತಿಯಿಂದ ಯಾತ್ರೆ ಪುನರಾರಂಭವಾಗಿದ್ದು, ಈ ಯಾತ್ರೆಯಲ್ಲಿ ಆರ್ಬಿಐ ಮಾಜಿ ಗವರ್ನರ್ ರಾಜನ್ ಸೇರಿಕೊಂಡಿದ್ದಾರೆ. ರಾಜನ್ ಅವರು ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ನೀತಿಯನ್ನು ಕಟುವಾಗಿ ಟೀಕಿಸಿದ್ದರು. ಇದೀಗ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ರಾಹುಲ್ ಗಾಂಧಿ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ಕನ್ಯಾಕುಮಾರಿಯಿಂದ ಶುರುವಾದ ಭಾರತ್ ಜೋಡೋ ಯಾತ್ರೆ 2023ರ ಫೆಬ್ರವರಿ ಆರಂಭದಲ್ಲಿ ಕಾಶ್ಮೀರ ತಲುಪಲಿದೆ. ಭಾರತ್ ಜೋಡೋ ಯಾತ್ರೆಯಲ್ಲಿ ಆಯಾ ರಾಜ್ಯದಲ್ಲಿ ಸಾಗುವಾಗ ಅಲ್ಲಿನ ಹೋರಾಟಗಾರರು, ರಾಜಕಾರಣಿಗಳು, ಸಿನಿಮಾ ಗಣ್ಯರು ಕೂಡ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ. The post ರಾಹುಲ್ ಗಾ...

IND vs BAN: 4000 ರನ್; ಸಿಕ್ಸರ್​ಗಳ ಅರ್ಧಶತಕ ಪೂರೈಸಿದ ರಿಷಬ್ ಪಂತ್..!

source https://tv9kannada.com/photo-gallery/cricket-photos/rishabh-pant-completed-his-4000-runs-in-international-cricket-and-hit-50-sixes-in-test-cricket-psr-au14-485595.html

KL Rahul- Athiya Shetty Wedding: ಕೆಎಲ್ ರಾಹುಲ್ -ಅಥಿಯಾ ಶೆಟ್ಟಿ ಮದುವೆ ಡೇಟ್ ಫಿಕ್ಸ್!

ಪ್ರಸ್ತುತ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾವನ್ನು (India vs Bangladesh) ಮುನ್ನಡೆಸುತ್ತಿರುವ ಕನ್ನಡಿಗ ಕೆಎಲ್ ರಾಹುಲ್ (KL Rahul) ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಕೆಎಲ್ ರಾಹುಲ್ ಮತ್ತು ಬಾಲಿವುಡ್ ನಟಿ ಅಥಿಯಾ ಶೆಟ್ಟಿ (Athiya Shetty) ಪ್ರೇಮ ಪಾಶದಲ್ಲಿ ಸಿಲುಕಿರುವ ವಿಚಾರ ನಿಮಗೆಲ್ಲ ಗೊತ್ತೇ ಇದೆ. ಅಲ್ಲದೆ ಜನವರಿಯಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿರಿಸಲಿದೆ ಎಂಬ ಮಾಹಿತಿ ಹೊರಬಿದ್ದಿತ್ತು. ಇದಕ್ಕೆ ಪೂರಕವೆಂಬಂತೆ ರಾಹುಲ್ ಜನವರಿಯಲ್ಲಿ ಟೀಂ ಇಂಡಿಯಾದಿಂದ (Team India) ರಜೆ ಕೇಳಿದ್ದಾರೆ ಎಂದು ವರದಿಯಾಗಿತ್ತು. ಇದೀಗ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸುವ ದಿನ ನಿಗದಿಯಾಗಿದ್ದು, ಈಗ ಸಿಕ್ಕಿರುವ ಮಾಹಿತಿ ಪ್ರಕಾರ ಈ ಜೋಡಿ ಹಕ್ಕಿಗಳ ವಿವಾಹ ಕಾರ್ಯಕ್ರಮ ಜನವರಿ 21 ರಿಂದ ಪ್ರಾರಂಭವಾಗಲಿದ್ದು, ಜನವರಿ 23 ರವರೆಗೆ ನಡೆಯಲಿದೆ. ಪಿಂಕ್ವಿಲ್ಲಾ ಸುದ್ದಿ ಪ್ರಕಾರ, ಇಬ್ಬರೂ ಜನವರಿಯಲ್ಲಿ ಮದುವೆಯಾಗಲಿದ್ದು, ಈಗಾಗಲೇ ಸಿದ್ಧತೆಗಳು ಪ್ರಾರಂಭವಾಗಿವೆ. ಈ ಜೋಡಿಗಳು ಡಿಸೆಂಬರ್ ಅಂತ್ಯದಿಂದ ಅತಿಥಿಗಳಿಗೆ ಆಹ್ವಾನ ನೀಡುವ ಪ್ರಕ್ರಿಯೆ ಆರಂಭಿಸಲ್ಲಿದ್ದಾರೆ. ವರದಿಯಂತೆ ಜನವರಿ 21 ರಿಂದ 23 ಜನವರಿವರೆಗೆ 3 ದಿನಗಳವರೆಗೆ ಈ ಮದುವೆ ಕಾರ್ಯಕ್ರಮ ನಡೆಯಲಿದೆ. ಅಲ್ಲದೆ ಈಗಿನಿಂದಲೇ ತಮ್ಮ ಆಪ್ತ ಕುಟುಂಬ ಸದಸ್ಯರಿಗೆ ಸಂದೇಶ ಕಳುಹಿಸಲು ಆರಂಭಿಸಿದ್ದಾರೆ ಎಂದು ವರದಿಯಾಗಿದೆ. IND vs BAN: ...

IND vs BAN, 1st Test: ಟಾಸ್ ಗೆದ್ದ ಭಾರತ; 3 ಸ್ಪಿನ್ನರ್‌, ಇಬ್ಬರು ಬೌಲರ್​ಗಳಿಗೆ ತಂಡದಲ್ಲಿ ಸ್ಥಾನ

ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯನ್ನು ಕಳೆದುಕೊಂಡ ಬಳಿಕ ಭಾರತ ತಂಡ ಇದೀಗ ಟೆಸ್ಟ್ ಸರಣಿಗೆ ಸಜ್ಜಾಗಿದೆ. ಭಾರತ ಹಾಗೂ ಬಾಂಗ್ಲಾದೇಶ (India vs Bangladesh) ನಡುವೆ ಚಿತ್ತಗಾಂಗ್​ನ ಜಹುರ್ ಅಹ್ಮದ್ ಚೌಧರಿ ಮೈದಾನದಲ್ಲಿ ಇಂದಿನಿಂದ ಮೊದಲ ಟೆಸ್ಟ್ ಪಂದ್ಯ ಆರಂಭವಾಗಿದೆ. ಟೀಮ್ ಇಂಡಿಯಾ ಖಾಯಂ ನಾಯಕ ರೋಹಿತ್ ಶರ್ಮಾ ಇಂಜುರಿಗೆ ತುತ್ತಾದ ಪರಿಣಾಮ ಮೊದಲ ಟೆಸ್ಟ್​ನಿಂದ ಹೊರಬಿದ್ದಿದ್ದಾರೆ. ಹೀಗಾಗಿ ಉಪ ನಾಯಕನಾಗಿದ್ದ ಕೆಎಲ್ ರಾಹುಲ್ (KL Rahul) ಕ್ಯಾಪ್ಟನ್ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ರೋಹಿತ್ ಜಾಗಕ್ಕೆ ಬದಲಿ ಆಟಗಾರನಾಗಿ ಅಭಿಮನ್ಯು ಈಶ್ವರನ್ ಆಯ್ಕೆ ಆಗಿದ್ದಾರೆ. ಉಭಯ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯದ ಟಾಸ್ ಮುಗಿದಿದ್ದು, ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರಾಹುಲ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಹಾಗೆಯೇ ಉಭಯ ತಂಡಗಳ ಆಡುವ ಹನ್ನೊಂದರ ಬಳಗದ ಪಟ್ಟಿಯೂ ಹೊರಬಿದ್ದಿದೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡದಲ್ಲಿ 12 ವರ್ಷಗಳ ನಂತರ ಜಯದೇವ್ ಉನಾದ್ಕಟ್ ಅವಕಾಶ ಪಡೆದಿದ್ದಾರೆ. ಆದರೆ ವೀಸಾ ಪಡೆಯುವಲ್ಲಿ ವಿಳಂಬವಾದ ಕಾರಣ, ಅವರು ಇಲ್ಲಿಯವರೆಗೆ ಬಾಂಗ್ಲಾದೇಶವನ್ನು ತಲುಪಲು ಸಾಧ್ಯವಾಗಿಲ್ಲ. ಇದರಿಂದಾಗಿ ಅವರು ಮೊದಲ ಟೆಸ್ಟ್‌ನ ಆಡುವ ಹನ್ನೊಂದರಿಂದ ಹೊರಗುಳಿದಿದ್ದಾರೆ. ಹೀಗಾಗಿ ಉನಾದ್ಕಟ್ ಅನುಪಸ್ಥಿತಿಯಲ್ಲಿ ವೇಗದ ಬೌಲಿಂಗ್ ಜವಾಬ್ದಾರಿ ಮೊಹಮ್ಮದ್ ಸಿರಾಜ್ ಮತ್ತು ಉಮೇಶ್ ಯಾದವ್ ಹೆಗಲ ಮೇಲಿ...

IND vs BAN 1st Test: ಇಂದಿನಿಂದ ಭಾರತ- ಬಾಂಗ್ಲಾದೇಶ ಪ್ರಥಮ ಟೆಸ್ಟ್ ಪಂದ್ಯ ಆರಂಭ: ಹೇಗಿರಲಿದೆ ಟೀಮ್ ಇಂಡಿಯಾ ಪ್ಲೇಯಿಂಗ್ XI?

ಭಾರತ ಕ್ರಿಕೆಟ್ ತಂಡದ ಬಾಂಗ್ಲಾದೇಶ ಪ್ರವಾಸ ಏಕದಿನ ಸರಣಿಯಲ್ಲಿ ಅಂದುಕೊಂಡಂತೆ ಸಾಗಲಿಲ್ಲ. ಮೊದಲ ಎರಡು ಪಂದ್ಯಗಳಲ್ಲಿ ಸೋತು ಸರಣಿ ಕಳೆದುಕೊಂಡ ಟೀಮ್ ಇಂಡಿಯಾ (Team India) ಕೊನೆಯ ಪಂದ್ಯದಲ್ಲಿ ಗೆದ್ದು ಬೀಗಿತಷ್ಟೆ. ಇದೀಗ ವೈಟ್-ಬಾಲ್ ಸರಣಿಯ ನಂತರ ಟೆಸ್ಟ್ ಸರಣಿಗೆ ಭಾರತ ಸಜ್ಜಾಗುತ್ತಿದೆ. ಇಂದಿನಿಂದ ಭಾರತ ಹಾಗೂ ಬಾಂಗ್ಲಾದೇಶ (India vs Bangladesh) ನಡುವಣ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಇದು ಚಿತ್ತಗಾಂಗ್​ನ ಜಹುರ್ ಅಹ್ಮದ್ ಚೌಧರಿ ಮೈದಾನದಲ್ಲಿ ಆಯೋಜಿಸಲಾಗಿದೆ. ಎರಡನೇ ಏಕದಿನ ಪಂದ್ಯದ ವೇಳೆ ಗಾಯಗೊಂಡಿದ್ದ ನಾಯಕ ರೋಹಿತ್ ಶರ್ಮಾ ಗುಣಮುಖರಾಗದ ಕಾರಣ ಮೊದಲ ಟೆಸ್ಟ್​ನಿಂದ ಹೊರುಗುಳಿದಿದ್ದಾರೆ. ಹೀಗಾಗಿ ಕೆಎಲ್ ರಾಹುಲ್ ​ಗೆ (KL Rahul) ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ಚೇತೇಶ್ವರ್ ಪೂಜಾರ ಉಪ ನಾಯಕನಾಗಿದ್ದಾರೆ. ಮೊದಲ ಟೆಸ್ಟ್ ಪಂದ್ಯಕ್ಕೆ ರೋಹಿತ್ ಬದಲು ಅಭಿಮನ್ಯು ಈಶ್ವರನ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಜೊತೆಗೆ ಮೊಹಮ್ಮದ್ ಶಮಿ ಮತ್ತು ಆಲ್ ರೌಂಡರ್ ರವೀಂದ್ರ ಜಡೇಜಾ ಗಾಯದಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಹೀಗಾಗಿ ಇವರಿಬ್ಬರ ಬದಲಿಗೆ ನವದೀಪ್ ಸೈನಿ ಮತ್ತು ಸೌರಭ್ ಕುಮಾರ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ರೋಹಿತ್ ಅಲಭ್ಯತೆಯಲ್ಲಿ ಶುಭ್ಮನ್ ಗಿಲ್ ಅವರು ನಾಯಕ ಕೆಎಲ್ ರಾಹುಲ್ ಜೊತೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಒತ್ತಡದಲ್ಲಿರುವ ಗಿಲ್ ಕಳೆದ 11 ಪಂದ್ಯಗಳಲ್ಲಿ 4 ಅರ್ಧಶತಕ ಸಿಡಿಸಿದ್ದ...

ಬೆಂಗಳೂರಿನಲ್ಲಿ ಜಿ.20 ಶೃಂಗಸಭೆ ಕನ್ನಡಿಗರ ದೌರ್ಭಾಗ್ಯ : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರ ಪ್ರತಿಭಟನೆ

            ವರದಿ ಮತ್ತು ಫೋಟೋ : ಸುರೇಶ್ ಪಟ್ಟಣ್,                            ಮೊ : 87220 22817 ಚಿತ್ರದುರ್ಗ,(ಡಿ.13) : ಡಿಸೆಂಬರ್ 13 ರಿಂದ 17 ರವರೆಗೆ ನಡೆಯುವ ಜಿ.20 ರಾಷ್ಟ್ರಪತಿಗಳ ಶೃಂಗಸಭೆಯನ್ನು ಬೆಂಗಳೂರಿನ ದೇವನಹಳ್ಳಿ ಮತ್ತು ರಾಷ್ಟ್ರಾದ್ಯಂತ ನಿಯೋಜಿಸಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರಿ ಇಂದು ಪ್ರತಿಭಟನೆ ನಡೆಸಿದರು. ಈ ಹಿಂದೆ ಜಿ-20 ರಾಷ್ಟ್ರಗಳ ಶೃಂಗ ಸಭೆಯನ್ನು ಏರ್ಪಡಿಸುವ ಪೂರ್ವಭಾವಿ ಸಭೆಯಲ್ಲಿ ಭಾರತದ 75ನೇ ವರ್ಷದ ಸ್ವಾತಂತ್ರೋತ್ಸವದ ವರ್ಷಾಚರಣೆಯಲ್ಲಿ ಭಾರತಕ್ಕೆ ಆತಿಥ್ಯವನ್ನು ಏರ್ಪಡಿಸುವ ಅವಕಾಶದ ಪ್ರಧಾನಿಯವರ ಕೋರಿಕೆಯ ಮೇರೆಗೆ ದಿನಾಂಕ:13.12.2022 ರಿಂದ 17.12.2022 ರವರೆಗೆ ಇದೇ ವರ್ಷ ದೇವನಹಳ್ಳಿಯಲ್ಲಿ ಸಕಲ ಪೊಲೀಸ್ ಬಂದೋಬಸ್ತ್ ನೊಂದಿಗೆ ಏರ್ಪಡಿಸಿರುವುದು ಕನ್ನಡಿಗರ ದೌರ್ಭಾಗ್ಯದ ಸಂಗತಿಯಾಗಿದೆ ಎಂದು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆಯ ಕಾರ್ಯಕರ್ತರು ಕಪ್ಪು ಪಟ್ಟಿಯನ್ನು ಧರಿಸಿ ಖಂಡಿಸಿದರು. ದೇಶದ ಪ್ರಧಾನಮಂತ್ರಿಗಳು ಈವರೆಗೆ ಅಂಬಾನಿ, ಆದಾನಿಯವರನ್ನು ಬಲಪಡಿಸಿದ ಮುಂದುವರಿದ ಭಾಗವಾಗಿ ಅಂಬಾನಿ, ಪತಂಜಲಿಯವರಂತಹ ಆರ್ಥಿಕ ವ್ಯವಹಾರಗಳ ಮುಖಾಂತರ ಜಾಗತಿಕವಾಗಿ ಭಾರತವನ್ನು ಆ...

ಬಿಜೆಪಿಯಿಂದ ಟಿಕೆಟ್ ನೀಡಿದಿದ್ದರೆ  ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ : ಶಾಸಕ ಗೂಳಿಹಟ್ಟಿ ಶೇಖರ್

  ಚಿತ್ರದುರ್ಗ : ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಕ್ಷದಿಂದ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯೂ ಬೆಳೆಯುತ್ತಾ ಹೋಗುತ್ತದೆ. ಹೊಸದುರ್ಗ ಕ್ಷೇತ್ರದಿಂದ ಶಾಸಕ ಗೂಳಿಹಟ್ಟಿ ಶೇಖರ್ ಹಾಗೂ ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್ ಲಿಂಗಮೂರ್ತಿ ಇಬ್ಬರೂ ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಹೀಗಾಗಿ ಇಬ್ಬರ ನಡುವೆ ಈಗಾಗಲೇ ವೈಮನಸ್ಸು ಏರ್ಪಟ್ಟಿದೆ. ಆಗಾಗ ವಾಕ್ಸಮರಗಳು ನಡೆಯುತ್ತಲೆ ಇರುತ್ತವೆ. ಇದು ಪಕ್ಷದ ವರ್ಚಸ್ಸಿಗೆ ದೊಡ್ಡ ಪೆಟ್ಟು ಬೀಳುವ ಸಾಧ್ಯತೆ ಇದೆ. ಹೀಗಾಗಿ ಇಬ್ಬರನ್ನು ಸಮಾಧಾನ ಮಾಡಿ, ಒಂದೇ ಪಕ್ಷದವರು ಎಂದು ಒಗ್ಗೂಡಿಸುವ ಕೆಲಸ ವಿಫಲವಾಗಿದೆ. ಹೊಸದುರ್ಗ ಪಟ್ಟಣದಲ್ಲಿ ಸಂಧಾನ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಇಬ್ಬರೂ ಹಾಜರಿದ್ದರು. ಎಂಎಲ್ಸಿ ಕೆ.ಎಸ್.ನವೀನ್, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ ನೇತೃತ್ವದಲ್ಲಿ ಸಂಧಾನ ಸಭೆ ನಡೆಸಲಾಯಿತು. ಸಭೆಯಲ್ಲಿ ಪಕ್ಷದ ಸೂಚನೆಯಂತೆ ನಡೆದುಕೊಳ್ಳಲು ಸೂಚನೆ ನೀಡಲಾಗಿತ್ತು. ಆದರೆ ಅದ್ಯಾಕೋ ಸಂಧಾನ ಸಭೆ ಯಶಸ್ವಿಯಾಗದೆ ವಿಫಲವಾಯ್ತು. ಸಭೆಯ ಬಳಿಕ ಈ ಬಾರಿ ಬಿಜೆಪಿಯಿಂದ ಟಿಕೆಟ್ ನೀಡಿದರೆ ಖುಷಿ, ಇಲ್ಲವಾದರೆ ಪಕ್ಷೇತರವಾಗಿಯೇ ಸ್ಪರ್ಧೆ ನಡೆಸುವುದಾಗಿ ಗೂಳಿಹಟ್ಟಿ ಶೇಖರ್ ನೇರವಾಗಿಯೇ ತಿಳಿಸಿದ್ದಾರೆ. ಇನ್ನು ಹೊಸದುರ್ಗದ ಪಟ್ಟಣದಲ್ಲಿ ಕಳಪೆ ಕಾಮಗಾರಿ ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ರೋಶಗೊಂಡಿದ್ದ ಖನಿಜ ನಿಗಮ ಮಾಜಿ ಅದ್ಯಕ್ಷ ಎಸ್.ಲಿಂಗಮೂರ್ತಿ ಅವರು,...

ಅಖಿಲ ಭಾರತ ಕನ್ನಡ ಸಮ್ಮೇಳನ :  ಪ್ರತಿನಿಧಿ ನೋಂದಣಿಗೆ ಡಿ.18 ಅಂತಿಮ ದಿನ

  ಚಿತ್ರದುರ್ಗ : ಹಾವೇರಿಯಲ್ಲಿ ಜ.6 ರಿಂದ ಮೂರು ದಿನಗಳ ಜರುಗಲಿರುವ ಅಖಿಲ ಭಾರತ ಕನ್ನಡ ಸಮ್ಮೇಳನಕ್ಕೆ ಪ್ರತಿನಿಧಿ ನೊಂದಣಿಗೆ ಡಿ.18 ಅಂತಿಮ ದಿನವಾಗಿದೆ. ಗೂಗಲ್ ಪ್ಲೇಸ್ಟೋರ್ ನಲ್ಲಿ ಕಸಾಪ ಎಂದು ಟೈಪ್ ಮಾಡಿದರೆ ಆಪ್ ತೆರೆದುಕೊಳ್ಳುತ್ತದೆ. ನಂತರ ಆನ್ ಲೈನ್ ನಲ್ಲಿ 500 ರೂಗಳನ್ನು ಪಾವತಿಸಿ ಪ್ರತಿನಿಧಿಯಾಗಲು ಅವಕಾಶವಿದೆ. ಕಸಾಪ ಸದಸ್ಯರಾದ ನಂತರ ಪ್ರತಿನಿಧಿಯಾಗಿ ನೊಂದಾಯಿಸಬೇಕಾಗಿರುವುದು ಕಡ್ಡಾಯವಾಗಿದೆ. ಪ್ರತಿನಿಧಿಯಾಗಿ ನೊಂದಾಯಿಸಿದವರಿಗೆ ವಸತಿ, ರೈಟಿಂಗ್ ಪ್ಯಾಡ್, ಪೆನ್ನು ಸೇರಿದಂತೆ ಕಿಟ್,  ತಿಂಡಿ,ಊಟ ದ ಕೂಪನ್ ಮತ್ತು ಓಓಡಿ ಸೌಲಭ್ಯಗಳನ್ನು ನೀಡಲಾಗುವುದು. ನೊಂದಾಯಿಸಿದವರಿಗೆ ಮಾತ್ರ ಸಮ್ಮೇಳನದಲ್ಲಿ ಭಾಗವಹಿಸಬಹುದು ಎಂಬ ಸುಳ್ಳು ವರದಿ ಹರಿದಾಡುತ್ತಿದೆ. ನೊಂದಾಯಿತ ಪ್ರತಿನಿಧಿಗಳಿಗೆ ವಸತಿ ಸೌಲಭ್ಯ ಮತ್ತು ಕೆಲವು ಸೌಲಭ್ಯಗಳನ್ನು ಹೆಚ್ಚುವರಿಯಾಗಿ ಒದಗಿಸಲಾಗುವುದು.  ಸಮ್ಮೇಳನದಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ಭಾಗವಹಿಸುವ ಎಲ್ಲರಿಗೂ ಊಟೋಪಚಾರದ ವ್ಯವಸ್ಥೆಯಿದೆ. ಆನ್‍ಲೈನ್ ನೊಂದಣಿಯಲ್ಲಿ ಸಮಸ್ಯೆಗಳು ಉಂಟಾದಲ್ಲಿ ಸಹಾಯ ವಾಣಿ ಸಂಖ್ಯೆಗಳಾದ 8123878812, 9448519073, 7795662064 ಗಳನ್ನು ಸಂಪರ್ಕಿಸಬಹುದಾಗಿದೆ. ಹಾವೇರಿ ಚಿಕ್ಕ ನಗರವಾಗಿರುವುದರಿಂದ ಪ್ರತಿನಿಧಿಗಳಿಗೆ ವಸತಿ ಸೌಲಭ್ಯಗಳನ್ನು ಒದಗಿಸುವುದಕ್ಕಾಗಿ ನಿಶ್ಚಿತವಾದ ಸಂಖ್ಯೆ ಅಗತ್ಯವಿದೆ. ಹಾವೇರಿಯನ್ನು ಹೊರತುಪಡಿಸಿ...

ಚುನಾವಣೆ ಮುಗಿಯುವ ತನಕ ಇಬ್ಬರ ಮಾತು ಮುಳುವಾಗದಿರಲಿ : ಸಿದ್ದರಾಮಯ್ಯ, ಡಿಕೆಶಿಗೆ ಕಿವಿ ಮಾತು ಹೇಳಿದರಾ ವೇಣುಗೋಪಾಲ್..?

ನವದೆಹಲಿ: ಕರ್ನಾಟಕದ ರಾಜ್ಯದ ಚುನಾವಣೆ ಸನಿಹವಾಗುತ್ತಿದ್ದಂತೆ ಮೂರು ಪಕ್ಷಗಳು ಅಬ್ಬರದ ಪ್ರಚಾರದಲ್ಲಿ ತೊಡಗಿಕೊಂಡಿವೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ರಾಜ್ಯದಲ್ಲಿ ಅಧಿಕಾರ ಹಿಡಿಯಲು ನಾನಾ ಕಸರತ್ತುಗಳನ್ನು ನಡೆಸುತ್ತಿವೆ. ಇದರ ನಡುವೆ ಕಾಂಗ್ರೆಸ್ ನಲ್ಲಿರುವ ಒಳ ಮುನಿಸು ಮಾತ್ರ ಕಡಿಮೆಯಾದಂತೆ ಕಾಣುತ್ತಿಲ್ಲ. ಆ ಮುನಿಸಿನಿಂದ ಪಕ್ಷಕ್ಕೆ ಡ್ಯಾಮೇಜ್ ಆಗಬಾರದು ಎಂದು ವೇಣುಗೋಪಾಲ್ ಅವರು ಎಚ್ಚರಿಕೆ ನೀಡಿದ್ದಾರೆ. ನಿನ್ನೆ ನವದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ಜೊತೆಗೆ ಸಭೆ ನಡೆಸಲಾಗಿದೆ. ಆ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ರಾಜ್ಯದ ಪ್ರಮುಖ ನಾಯಕರು ಭಾಗಿಯಾಗಿದ್ದರು. ಈ ವೇಳೆ ಸಭೆಯಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರಿಗೆ ವೇಣುಗೋಪಾಲ್ ಅವರು ಕಿವಿ ಮಾತು ಹೇಳಿದ್ದಾರೆ. ನಿಮ್ಮಿಬ್ಬರ ಮಾತು, ಹೇಳಿಕೆಗಳು ವಿಭಿನ್ನವಾಗಿರುತ್ತದೆ. ಇದರಿಂದ ಪಕ್ಷಕ್ಕೆ ಹಿನ್ನಡೆಯಾಗುತ್ತದೆ. ಕರ್ನಾಟಕದಲ್ಲಿನ ಕಾಂಗ್ರೆಸ್ ಗೆಲುವು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಉಳಿಸುವ ಗೆಲುವಾಗಲಿದೆ. ಮೊದಲು ಪಕ್ಷ ಆಮೇಲೆ ವ್ಯಕ್ತಿ. ಪಕ್ಷವೇ ಸೋತರೆ ಆಮೇಲೆ ಯಾರು ಏನು ಮಾಡುವುದಕ್ಕಲೆ ಆಗುವುದಿಲ್ಲ. ಅನಗತ್ಯ ಹೇಳಿಕೆಗಳು ಬೇಡ. ಕರ್ನಾಟಕದಲ್ಲಿ ಪಕ್ಷದ ಸ್ಥಿತಿ ಉತ್ತಮವಾಗಿದೆ. ಪಕ್ಷಕ್ಕೆ ಹಿನ್ನಡೆಯಾದರೆ ಅದಕ್ಕೆ ನೀವಿಬ್ಬರೇ ಕಾರಣವ...

IND vs BAN Test: 18 ಸದಸ್ಯರ ತಂಡ: ಮೊದಲ ಟೆಸ್ಟ್​ಗೆ ಭಾರತದ ಪ್ಲೇಯಿಂಗ್ XI ನಲ್ಲಿ ಯಾರಿಗೆ ಅವಕಾಶ?: ಇಲ್ಲಿದೆ ನೋಡಿ

ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯನ್ನು ಕಳೆದುಕೊಂಡ ಬಳಿಕ ಭಾರತ ತಂಡ ಇದೀಗ ಟೆಸ್ಟ್ ಸರಣಿಗೆ ಸಜ್ಜಾಗುತ್ತಿದೆ. ಭಾರತ ಹಾಗೂ ಬಾಂಗ್ಲಾದೇಶ (India vs Bangladesh) ನಡುವೆ ಚಿತ್ತಗಾಂಗ್​ನ ಜಹುರ್ ಅಹ್ಮದ್ ಚೌಧರಿ ಮೈದಾನದಲ್ಲಿ ಬುಧವಾರ ಡಿಸೆಂಬರ್ 14 ರಿಂದ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಟೀಮ್ ಇಂಡಿಯಾ ಖಾಯಂ ನಾಯಕ ರೋಹಿತ್ ಶರ್ಮಾ ಇಂಜುರಿಗೆ ತುತ್ತಾದ ಪರಿಣಾಮ ಮೊದಲ ಟೆಸ್ಟ್​ನಿಂದ ಹೊರಬಿದ್ದಿದ್ದಾರೆ. ಹೀಗಾಗಿ ಉಪ ನಾಯಕನಾಗಿದ್ದ ಕೆಎಲ್ ರಾಹುಲ್ (KL Rahul) ಕ್ಯಾಪ್ಟನ್ ಜವಾಬ್ದಾರಿ ನಿರ್ವಹಿಸಲಿದ್ದಾರೆ. ರೋಹಿತ್ ಜಾಗಕ್ಕೆ ಬದಲಿ ಆಟಗಾರನಾಗಿ ಅಭಿಮನ್ಯು ಈಶ್ವರನ್ ಆಯ್ಕೆ ಆಗಿದ್ದಾರೆ. ಏಕದಿನ ಸರಣಿಗೆ ಅಲಭ್ಯರಾಗಿದ್ದ ರಿಷಭ್ ಪಂತ್ ಕೂಡ ತಂಡ ಸೇರಿಕೊಂಡಿದ್ದಾರೆ. ಒಟ್ಟು 18 ಆಟಗಾರರಿಂದ ಕೂಡಿರುವ ಭಾರತ ತಂಡದಲ್ಲಿ ಮೊದಲ ಟೆಸ್ಟ್​ಗೆ ಕಣಕ್ಕಿಳಿಯುವವರು ಯಾರು ಎಂಬುದು ಕುತೂಹಲ ಕೆರಳಿಸಿದೆ. ಸಂಭಾವ್ಯ ಪ್ಲೇಯಿಂಗ್ XI (India Playing XI) ಬಗ್ಗೆ ನೋಡುವುದಾದರೆ… ರೋಹಿತ್ ಅಲಭ್ಯತೆಯಲ್ಲಿ ಶುಭ್ಮನ್ ಗಿಲ್ ಅವರು ನಾಯಕ ಕೆಎಲ್ ರಾಹುಲ್ ಜೊತೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಒತ್ತಡದಲ್ಲಿರುವ ಗಿಲ್ ಕಳೆದ 11 ಪಂದ್ಯಗಳಲ್ಲಿ 4 ಅರ್ಧಶತಕ ಸಿಡಿಸಿದ್ದಾರಷ್ಟೆ. ಆಸ್ಟ್ರೇಲಿಯಾ ವಿರುದ್ಧ ಗಳಿಸಿದ 91 ರನ್ ಗರಿಷ್ಠ ಸ್ಕೋರ್ ಆಗಿದೆ. ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಗಿಲ್​ಗೆ ಇದೊಂದು ಉತ್ತಮ ಅವಕಾಶ. ಮೂರನೇ ಕ್ರಮಾಂಕದಲ್ಲಿ ಉಪ ನಾ...

IND vs BAN 1st Test: ಭಾರತ-ಬಾಂಗ್ಲಾದೇಶ ಮೊದಲ ಟೆಸ್ಟ್ ಪಂದ್ಯ ಯಾವಾಗ?, ಎಷ್ಟು ಗಂಟೆಗೆ?, ಎಲ್ಲಿ?: ಇಲ್ಲಿದೆ ಮಾಹಿತಿ

source https://tv9kannada.com/photo-gallery/cricket-photos/india-vs-bangladesh-1st-test-when-and-where-to-watch-heres-all-you-need-to-know-about-ban-vs-ind-test-vb-au48-485047.html

ಚಿತ್ರದುರ್ಗ ನಗರಸಭೆ: ಆಯ-ವ್ಯಯ ತಯಾರಿಸಲು ಸಾರ್ವಜನಿಕರು ಸಲಹೆ ಸೂಚನೆ ನೀಡಲು ಕೋರಿಕೆ

ಮಾಹಿತಿ ಮತ್ತು ಫೋಟೋ ಕೃಪೆ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ ಚಿತ್ರದುರ್ಗ.ಡಿ.12: ಚಿತ್ರದುರ್ಗ ನಗರಸಭೆಯ 2023-24ನೇ ಸಾಲಿನ ಆಯ-ವ್ಯಯ ತಯಾರಿಸಲು ಅಭಿವೃದ್ಧಿ ಯೋಜನೆಗಳ ಕುರಿತು ನಗರದ ಗಣ್ಯವ್ಯಕ್ತಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವರ್ತಕರು, ನಿವೃತ್ತ ಅಧಿಕಾರಿಗಳು, ನೌಕರರು, ಪತ್ರಕರ್ತರು, ಹಿರಿಯ ನಾಗರೀಕರು, ಸಾರ್ವಜನಿಕರು ತಮ್ಮ ಸಲಹೆ ಸೂಚನೆಗಳನ್ನು ಲಿಖಿತ ರೂಪದಲ್ಲಿ ಕಚೇರಿ ವೇಳೆಯಲ್ಲಿ ನೀಡಬಹುದಾಗಿದೆ. ಚಿತ್ರದುರ್ಗ ನಗರಸಭೆಯ 2023-24ನೇ ಸಾಲಿನ ಆಯ-ವ್ಯಯ ತಯಾರಿಸುವ ಬಗ್ಗೆ 1ನೇ ಪೂರ್ವಭಾವಿ (ಸಾರ್ವಜನಿಕ ಸಲಹಾ ಸೂಚನಾ) ಸಭೆಯನ್ನು ಏರ್ಪಡಿಸಿರುವುದರಿಂದ ನಗರದ ಗಣ್ಯ ವ್ಯಕ್ತಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವರ್ತಕರು, ನಿವೃತ್ತ ಅಧಿಕಾರಿಗಳು, ನೌಕರರು, ಪತ್ರಕರ್ತರು, ಹಿರಿಯ ನಾಗಕರಿಕರು ಸಾರ್ವಜನಿಕರು ಇದೇ ಡಿಸೆಂಬರ್ 15ರಂದು ಬೆಳಿಗ್ಗೆ 11ಕ್ಕೆ ಚಿತ್ರದುರ್ಗ ನಗರಸಭೆ ಕಚೇರಿ ಸಭಾಂಗಣದಲ್ಲಿ ಆಗಮಿಸಿ, ತಮ್ಮ ಸಲಹೆ ಸೂಚನೆ ನೀಡಲು ಕೋರಿದೆ ಅಥವಾ ಲಿಖಿತ ರೂಪದಲ್ಲಿ ಕಚೇರಿ ವೇಳೆಯಲ್ಲಿ ನೀಡಬಹುದಾಗಿದೆ ಎಂದು ಚಿತ್ರದುರ್ಗ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ. ಡಿ.14ರಂದು ಚಿತ್ರದುರ್ಗ ನಗರಸಭೆ ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ಚಿತ್ರದುರ್ಗ,(ಡಿ.12) :   ಚಿತ್ರದುರ್ಗ ನಗರಸಭೆಯ ಉಪಾಧ್ಯಕ್ಷರ ರಾಜೀನಾಮೆಯಿಂದ ತೆರವಾಗಿರುವ ಉಪಾಧ್ಯಕ್ಷರ ಸ್ಥಾನಕ್ಕೆ ಇದೇ ಡಿಸೆಂಬರ್ 14ರಂದು ಬ...

ಕೈ ನಾಯಕರನ್ನು ದೆಹಲಿಗೆ ಕರೆಸಿಕೊಂಡ ಪ್ರಿಯಾಂಕ ಗಾಂಧಿ : ಚುನಾವಣೆಯ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತಾರಾ..?

ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಭರ್ಜರಿ ಪ್ರಚಾರ ಕಾರ್ಯ ಶುರುವಾಗಿದೆ. ಮೂರು ಪಕ್ಷಗಳು ಕರ್ನಾಟಕ ಚುನಾವಣೆ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಈ ಬಾರಿ ಜನರ ಮನಸ್ಸನ್ನು ಗೆಲ್ಲಲೇಬೇಕೆಂಬ ಪಣ ತೊಟ್ಟಿದ್ದಾರೆ. ಇದರ ನಡುವೆ ಗುಜರಾತ್ ಚುನಾವಣೆಯ ಸೋಲು ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದೆ. ಹಿಮಾಚಲ ಪ್ರದೇಶದಲ್ಲಿ ಅಧಿಕಾರ ಸಿಕ್ಕ ತೃಪ್ತಿಗಿಂತ ಸೋಲಿನ ಬೇಸರ ಹೆಚ್ಚಾಗಿ ಕಾಡುತ್ತಿದೆ. ಇದೆ ಕಾರಣಕ್ಕೆ ಕರ್ನಾಟಕದ ಮೇಲೆ ಹೆಚ್ಚು ಗಮನಹರಿಸಲಾಗುತ್ತಿದೆ. ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇದೆ. ಇದರ ನಡುವೆ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯೂ ಬೆಲೆಯುತ್ತಾ ಹೋಗುತ್ತಿದೆ. ಜೊತೆಗೆ ದಲಿತ ಸಿಎಂ ಕೂಗು ಮತ್ತೆ ಜೋರಾಗುಇದೆ. ಈ ಎಲ್ಲಾ ಬೆಳವಣಿಗೆಯ ನಡುವೆ ಕರ್ನಾಟಕದ ಚುನಾವಣೆಯಲ್ಲಿ ಗೆಲ್ಲುವುದು ಬಹಳ ಮುಖ್ಯವಾಗಿದೆ. ಹೀಗಾಗಿ ಇಂದು ಕಾಂಗ್ರೆಸ್ ನ ರಾಜ್ಯ ನಾಯಕರಿಗೆ ಪ್ರಿಯಾಂಕ ಗಾಂಧಿ ಬುಲಾವ್ ನೀಡಿದ್ದಾರೆ. ದೆಹಲಿಯಲ್ಲಿ ಮುಂದಿನ ಚುನಾವಣೆಯ ರೂಪುರೇಷೆಯ ಬಗ್ಗೆ ಚರ್ಚೆಯಾಗಲಿದೆ. ಒಂದು ಕಡೆ ಗುಜರಾತ್ ನಲ್ಲಿ ಬಿಜೆಪಿ ಹೊಸ ಪ್ಲ್ಯಾನ್ ಹಾಕಿಕೊಂಡಿತ್ತು. ಹಿರಿಯರಿಗೆ ಕೊಕ್ ನೀಡಿ, ಯುವಕರಿಗೆ ಮಣೆ ಹಾಕಿತ್ತು. ಈ ಎಲ್ಲಾ ಅಂಶಗಳಿಂದ ಗೆಲುವು ಸುಲಭವಾಗಿತ್ತು. ಸತೀಶ್ ಜಾರಕಿಹೊಳಿ ಕಾಂಗ್ರೆಸ್ ನಾಯಕರಿಗೆ ಇದನ್ನು ಪರೋಕ್ಷವಾಗಿ, ಸೂಕ್ಷ್ಮವಾಗಿ ತಿಳಿಸಿದ್ದಾರೆ. ಹೀಗಾಗಿ ಆ ಬಗ್ಗೆಯೂ ಇಂದು ಪ್ರಿಯಾಂಕ ಗಾಂಧಿ ರಾಜ್ಯ ನಾಯಕರ ಜೊತ...

‘ನನಗೆ ನೀವು ಸಾರ್ವಕಾಲಿಕ ಶ್ರೇಷ್ಠ ಆಟಗಾರ’; ಕಣ್ಣೀರಿಟ್ಟ ರೊನಾಲ್ಡೊಗೆ ಭಾವನಾತ್ಮಕ ಸಂದೇಶ ಬರೆದ ಕೊಹ್ಲಿ

ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌ನಲ್ಲಿ (FIFA World Cup) ಅಚ್ಚರಿಯ ಫಲಿತಾಂಶಗಳು ಕಂಡುಬರುತ್ತಿವೆ. ಈಗಾಗಲೇ ಕ್ವಾರ್ಟರ್​ಫೈನಲ್​ನಲ್ಲಿ 5 ಬಾರಿಯ ವಿಶ್ವಚಾಂಪಿಯನ್​ ಬ್ರೆಜಿಲ್​ ಸೋಲುಂಡು ಟೂರ್ನಿಯಿಂದ ಹೊರಬಿದ್ದಿದೆ. ಇದರ ಬೆನ್ನಲ್ಲೇ ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) ನೇತೃತ್ವದ ಬಲಿಷ್ಠ ಪೋರ್ಚುಗಲ್ ತಂಡ ಕೂಡ ಟೂರ್ನಿಯಿಂದ ಔಟಾಗಿದೆ. ಶನಿವಾರ ರಾತ್ರಿ ನಡೆದ ರೋಚಕ ಕ್ವಾರ್ಟರ್‌ ಫೈನಲ್​ನ ಪಂದ್ಯದಲ್ಲಿ ಮುನ್ಪಡೆ ಆಟಗಾರ ಯೂಸೆಫ್ ಎನ್-ನೆಸೈರಿ ಸಿಡಿಸಿದ ಏಕೈಕ ಗೋಲಿನ ನೆರವಿನಿಂದ ಮೊರಾಕ್ಕೊ (Morocco vs Portugal) ತಂಡ ಫಿಫಾ ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಿತು. ಈ ಮೂಲಕ ಸೆಮೀಸ್ ತಲುಪಿದ ಮೊದಲ ಆಫ್ರಿಕನ್​ ರಾಷ್ಟ್ರ ಎಂಬ ದಾಖಲೆಯನ್ನೂ ಬರೆಯಿತು. ಇದರೊಂದಿಗೆ ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವಕಪ್ ಗೆಲ್ಲುವ ಕನಸು ಭಗ್ನಗೊಂಡಿತು. ಸೋಲಿನ ಆಘಾತದಲ್ಲಿ ಕಣ್ಣೀರಿಡುತ್ತಲೇ ಮೈದಾನದಿಂದ ಹೊರನಡೆದಿದ್ದ ರೊನಾಲ್ಡೊಗೆ ಇಡೀ ಕ್ರೀಡಾ ಪ್ರಪಂಚವೇ ಸಮಾಧಾನದ ಮಾತುಗಳನ್ನು ಹೇಳಿತ್ತು. ಈಗ ಅವರ ಸಾಲಿಗೆ ಕಿಂಗ್ ಕೊಹ್ಲಿ ಕೂಡ ಸೇರ್ಪಡೆಗೊಂಡಿದ್ದು, ರೊನಾಲ್ಡೊರನ್ನು ಕೊಹ್ಲಿ ‘ನನಗೆ ನೀವು ಸಾರ್ವಕಾಲಿಕ ಶ್ರೇಷ್ಠ ಆಟಗಾರ’ ಎಂದು ಬಣ್ಣಿಸಿದ್ದಾರೆ. ನೀವು ದೇವರು ನೀಡಿದ ಉಡುಗೊರೆ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿರುವ ಕೊಹ್ಲಿ ಅದರಲ್ಲಿ, ನೀವು ಇಲ್ಲಿಯವರೆಗ...

Sanju Samson: ಟೀಮ್ ಇಂಡಿಯಾ ತೊರೆಯುತ್ತಾರ ಸಂಜು?: ಸ್ಯಾಮ್ಸನ್​ಗೆ ಬಿಗ್ ಆಫರ್ ನೀಡಿದ ಐರ್ಲೆಂಡ್ ಕ್ರಿಕೆಟ್

ಭಾರತ ಕ್ರಿಕೆಟ್ ತಂಡದಲ್ಲಿ ಈಗ ಅನುಭವಿ ಯುವ ಆಟಗಾರರ ದಂಡೇ ಇದೆ. ಎರಡು ಬಲಿಷ್ಠ ತಂಡ ಕಟ್ಟುವಷ್ಟು ಆಟಗಾರರು ಟೀಮ್ ಇಂಡಿಯಾ ದಲ್ಲಿ (Team India) ಇದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್​ನಿಂದ (IPL) ಹುಟ್ಟಿದ ಅನೇಕ ಆಟಗಾರರು ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಹೊಸ ಹೊಸ ಆಟಗಾರರು ಭಾರತೀಯ ಕ್ರಿಕೆಟ್​ಗೆ ಕಾಲಿಡುತ್ತಿರುವುದರಿಂದ ಪ್ರತಿಭಾವಂತ ಅನುಭವಿ ಪ್ಲೇಯರ್ಸ್​ಗೆ ಅವಕಾಶ ಸಿಗದಿರುವುದು ಕೂಡ ಹೆಚ್ಚಾಗುತ್ತಿದೆ. ಇದಕ್ಕೆ ಮುಖ್ಯ ಉದಾಹರಣೆ ಸಂಜು ಸ್ಯಾಮ್ಸನ್ (Sanju Samson). ಭಾರತದಲ್ಲಿ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿರುವ ಸ್ಯಾಮ್ಸನ್ ಅವರನ್ನು ಸತತವಾಗಿ ಬಿಸಿಸಿಐ ಕಡೆಗಣಿಸುತ್ತಿದೆ. ವಿಕೆಟ್‌ಕೀಪರ್ ಬ್ಯಾಟರ್ ಸ್ಯಾಮ್ಸನ್ ಟೀಮ್ ಇಂಡಿಯಾ ಪರ ಕೇವಲ ಬೆರಳೆಣಿಕೆಯ ಪಂದ್ಯಗಳಲ್ಲಿ ಮಾತ್ರವೇ ಆಡಿದ್ದಾರೆ. ಸುಮಾರು 7 ವರ್ಷಗಳ ವೃತ್ತಿ ಜೀವನದಲ್ಲಿ ಸಂಜು ಆಡಿರುವುದು ಕೇವಲ 27 ಪಂದ್ಯಗಳನ್ನು ಮಾತ್ರ. ಇವರಿಗೆ ಅವಕಾಶ ಯಾವಗೆಂದರೆ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿದ ಸಂದರ್ಭ. ಅದುಕೂಡ ಖಚಿತವಿಲ್ಲ. ತಂಡಕ್ಕೆ ಆಯ್ಕೆಯಾದರೂ ಆಡುವ ಬಳಗದಲ್ಲಿ ಸ್ಥಾನ ಸಿಗುವುದು ಅನುಮಾನ. ಇತ್ತೀಚಿನ ಬಾಂಗ್ಲಾದೇಶ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಗೂ ಇವರನ್ನು ಆಯ್ಕೆ ಮಾಡಿರಲಿಲ್ಲ. ಇದಕ್ಕೂ ಮೊದಲು ನ್ಯೂಜಿಲೆಂಡ್‌ ಪ್ರವಾಸಕ್ಕೆ ಆಯ್ಕೆ ಆಗಿದ್ದರಾದರೂ ಆಡಲು ಸಿಕ್ಕಿದ್ದು ಕೇವಲ ಒಂದು ಪಂದ್ಯ ಮಾತ್ರ. ಇದಕ್ಕೆ ಸಾಮ...

Super Over: ಭಾರತ-ಆಸ್ಟ್ರೇಲಿಯಾ 2ನೇ ಟಿ20 ಟೈ: ರೋಚಕ ಸೂಪರ್ ಓವರ್​ನಲ್ಲಿ ಗೆದ್ದ ಕೌರ್ ಪಡೆ

ಡಾ. ಡಿವೈ ಪಾಟಿಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ (India Women vs Australia Women) ಮಹಿಳಾ ತಂಡಗಳ ನಡುವಣ ಎರಡನೇ ಟಿ20 ಪಂದ್ಯ ರಣ ರೋಚಕವಾಗಿತ್ತು. ಮೊದಲ ಪಂದ್ಯದಲ್ಲಿ ಭಾರತೀಯ ಮಹಿಳೆಯರು ಸೋತ ಪರಿಣಾಮ ದ್ವಿತೀಯ ಪಂದ್ಯ ಮಹತ್ವದ್ದಾಗಿತ್ತು. ಅದರಂತೆ ಗೆಲ್ಲುವ ಗುರಿಯೊಂದಿಗೆ ಕಣಕ್ಕಿಳಿದ ಕೌರ್ ಪಡೆ ಹೋರಾಟ ನಡೆಸಿತು. ಕೊನೆಯಲ್ಲಿ ಪಂದ್ಯ ಟೈ ಆದ ಪರಿಣಾಮ ಸೂಪರ್ ಓವರ್ (Super Over) ನಡೆಸಲಾಯಿತು. ಇದರಲ್ಲಿ ಭಾರತ ಗೆಲುವು ಸಾಧಿಸಿ ಇದೀಗ ಐದು ಪಂದ್ಯಗಳ ಟಿ20 ಸರಣಿಯಲ್ಲಿ 1-1 ಅಂತರದ ಮುನ್ನಡೆ ಪಡೆದುಕೊಂಡಿದೆ. ಭಾರತದ ಗೆಲುವಿನಲ್ಲಿ ಸ್ಮೃತಿ ಮಂದಾನ (Smriti Mandhana) ಪ್ರಮುಖ ಪಾತ್ರವಹಿಸಿದರು. ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಬ್ಯಾಟಿಂಗ್​ಗೆ ಬಂದ ಆಸ್ಟ್ರೇಲಿಯಾ ಆರಂಭದಲ್ಲಿ ನಾಯಕಿ ಅಲೆಸ್ಸಾ ಹೇಲೆ (25) ವಿಕೆಟ್ ಕಳೆದುಕೊಂಡಿತು. ನಂತರ ಶುರುವಾಗಿದ್ದು ಇನ್​ಫಾರ್ಮ್ ಬ್ಯಾಟರ್​ಗಳಾದ ಬೆತ್ ಮೋನೆ ಮತ್ತು ತಹಿಲಾ ಮೆಕ್​ಘ್ರಾತ್ ಆಟ. ಭಾರತೀಯ ಬೌಲರ್​ಗಳನ್ನು ಕಾಡಿದ ಈ ಜೋಡಿ ಸಂಪೂರ್ಣ ಓವರ್ ಆಡಿತು. ಎಷ್ಟೇ ಹರಸಾಹಸ ಪಟ್ಟರೂ ಭಾರತೀಯ ಮಹಿಳೆಯರಿಗೆ ಇವರಿಬ್ಬರ ಜೊತೆಯಾಟ ಮುರಿಯಲು ಸಾಧ್ಯವಾಗಲಿಲ್ಲ. ಇಬ್ಬರೂ ಅರ್ಧಶತಕ ಸಿಡಿಸಿ ಮಿಂಚಿದರು. ಆಸ್ಟ್ರೇಲಿಯಾ 20 ಓವರ್​ಗಳಲ್ಲಿ 1 ವಿಕೆಟ್ ನಷ್ಟಕ್ಕೆ 187 ರನ್ ಕಲೆಹಾಕಿತು. ಮೋನೆ 54 ಎಸೆತಗಳಲ್ಲಿ 13 ಫೋರ್​ನೊಂದಿಗೆ ಅ...

AUS vs WI: ಆಸೀಸ್​ಗೆ 419 ರನ್​ಗಳ ಭಾರಿ ಜಯ; ಕೆರಿಬಿಯನ್ ದೈತ್ಯರಿಗೆ ವೈಟ್ ​ವಾಶ್ ಮುಖಭಂಗ..!

ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಹೀನಾಯವಾಗಿ ಮಣಿಸಿದ್ದ ಆಸೀಸ್ ಪಡೆ (Australia beat West Indies), ಅಡಿಲೇಡ್​ನಲ್ಲಿ ನಡೆದ ಎರಡನೇ ಟೆಸ್ಟ್​ನಲ್ಲೂ ತನ್ನ ಗೆಲುವಿನ ಸರಣಿಯನ್ನು ಮುಂದುವರೆಸಿದೆ. ಮೊದಲ ಟೆಸ್ಟ್​ನಲ್ಲಿ 164 ರನ್​ಗಳಿಂದ ಸೋಲೊಪ್ಪಿಕೊಂಡಿದ್ದ ಕೆರಿಬಿಯನ್ ಪಡೆ, ಅಡಿಲೇಡ್‌ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್‌ನಲ್ಲಿ (Pink Ball Test) ಬರೋಬ್ಬರಿ 419 ರನ್‌ಗಳಿಂದ ಹೀನಾಯ ಸೋಲು ಅನುಭವಿಸಿದೆ. ಈ ಗೆಲುವಿನ ಮೂಲಕ ಆಸ್ಟ್ರೇಲಿಯಾ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಅಡಿಲೇಡ್ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ ಪರ 175 ರನ್ ಬಾರಿಸಿದ ಟ್ರಾವಿಸ್ ಹೆಡ್ (Travis Head) ಈ ಪಂದ್ಯದ ಗೆಲುವಿನ ಹೀರೋ ಎನಿಸಿಕೊಂಡರೆ, ಇಡೀ ಸರಣಿಯಲ್ಲಿ ಶತಕಗಳ ಸರಮಾಲೆ ಕಟ್ಟಿದ ಮಾರ್ನಸ್ ಲಬುಶೇನ್ (marnus labuschagne) ಸರಣಿಯ ಆಟಗಾರ ಪ್ರಶಸ್ತಿಗೆ ಭಾಜನರಾದರು. ಅಡಿಲೇಡ್‌ನಲ್ಲಿ ನಡೆದ ಡೇ-ನೈಟ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವೆಸ್ಟ್ ಇಂಡೀಸ್ ಎದುರು 497 ರನ್‌ಗಳ ಬೃಹತ್ ಗುರಿಯನ್ನು ನೀಡಿತ್ತು. ಆದರೆ, ಈ ರನ್‌ಗಳ ಪರ್ವತವನ್ನು ಏರುವ ಸಾಹಸ ಮಾಡಿದ ವೆಸ್ಟ್ ಇಂಡೀಸ್ ತಂಡ ಕೇವಲ 77 ರನ್ ಗಳಿಸುವಷ್ಟರಲ್ಲಿಯೇ ಸುಸ್ತಾಯಿತು. ಈ ರೀತಿಯಾಗಿ 5 ದಿನಗಳ ಟೆಸ್ಟ್ ಪಂದ್ಯ ನಾಲ್ಕನೇ ದಿನದಲ್ಲಿ ಮುಕ್ತಾಯಗೊಂಡಿತು. ಕೇವಲ 39 ರನ್​ಗಳಿಗೆ 6 ವಿಕೆಟ್ ಪತನ ಟೆಸ್ಟ್ ಪಂದ್ಯದ ನಾಲ್ಕನೇ ದಿನವ...