Saturday, 26 November 2022

ಕಣ್ಣು ಬಿಟ್ಟು ಕಣ್ಣು ಮುಚ್ಚಿದ ಶಿವಲಿಂಗ : ಮಾಗಡಿಯಲ್ಲಿ ಶಿವನನ್ನು ನೋಡಲು ಬಂದ ಜನ..!

 

 

ರಾಮನಗರ: ಬೇಡರ ಕಣ್ಣಪ್ಪ ಸಿನಿಮಾದಲ್ಲಿ ಅಣ್ಣಾವ್ರು ಶಿವನಿಗೆ ಕಣ್ಣು ಬರಿಸಿದ್ದನ್ನು ನೋಡಿದ್ದೇವೆ. ಆದ್ರೆ ಈ ಕಾಲದಲ್ಲೂ ಶಿವನಿಗೆ ಕಣ್ಣು ಬರುತ್ತೆ ಎಂದರೆ ನೀವೂ ನಂಬುತ್ತೀರಾ..? ನಂಬಲೇಬೇಕಾದಂತ ಘಟನೆಯೊಂದು ರಾಮನಗರದಲ್ಲಿ ನಡೆದಿದೆ.

ರಾಮನಗರ ಜಿಲ್ಲೆಯಲ್ಲಿರುವ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಒಂದು ಪುರಾತನ ಕಾಲದ ಶಿವನ ದೇವಸ್ಥಾನವಿದೆ. ಉಮಾಮಹೇಶ್ವರಿ ದೇವಾಲಯ. ಈ ದೇವಾಲಯದಲ್ಲಿ ದೇವರ ಪೂಜೆ ನಡೆದಿದೆ. ಪೂಜೆಯ ವೇಳೆ ಸಂಜೆ 6.30ರ ಸಮಯಕ್ಕೆ ಅಚ್ಚರಿ ಎಂಬಂತೆ ಶಿವ ಕಣ್ಣು ಬಿಟ್ಟಿದ್ದಾನೆ. ಇದನ್ನು ಕಂಡು ಎಲ್ಲರೂ ದಂಗಾಗಿದ್ದಾರೆ.

ಶಿವ ಕಣ್ಣು ಬಿಟ್ಟು ಕಣ್ಣು ಬಿಟ್ಟ ಅಂತ ಎಲ್ಲೆಡೆಯೂ ಸುದ್ದಿ ಹಬ್ಬಿದೆ. ತಕ್ಷಣ ಊರಿನ ಜನರೆಲ್ಲಾ ಶಿವನನ್ನು ನೋಡಲು ಓಡೋಡಿ ಬಂದಿದ್ದಾರೆ. ಮೊಬೈಲ್ ಗಳಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಭಕ್ತಿಯಿಂದ ಕೈ ಮುಗಿದಿದ್ದಾರೆ, ವಿಶೇಷ ಪೂಜೆಯನ್ನು ಮಾಡಿಸಿದ್ದಾರೆ. ಆದ್ರೆ ರಾತ್ರಿ 9ರ ಸುಮಾರಿಗೆ ಶಿವ ಕಣ್ಣು ಮುಚ್ಚಿದ್ದಾನೆ ಎಂದು ಹೇಳಲಾಗುತ್ತಿದೆ. ಆದ್ರೆ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

The post ಕಣ್ಣು ಬಿಟ್ಟು ಕಣ್ಣು ಮುಚ್ಚಿದ ಶಿವಲಿಂಗ : ಮಾಗಡಿಯಲ್ಲಿ ಶಿವನನ್ನು ನೋಡಲು ಬಂದ ಜನ..! first appeared on Kannada News | suddione.



source https://suddione.com/%e0%b2%95%e0%b2%a3%e0%b3%8d%e0%b2%a3%e0%b3%81-%e0%b2%ac%e0%b2%bf%e0%b2%9f%e0%b3%8d%e0%b2%9f%e0%b3%81-%e0%b2%95%e0%b2%a3%e0%b3%8d%e0%b2%a3%e0%b3%81-%e0%b2%ae%e0%b3%81%e0%b2%9a%e0%b3%8d%e0%b2%9a/

No comments:

Post a Comment

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...