Tuesday 22 June 2021

ಚಿತ್ರದುರ್ಗ: ಹಿಂಬದಿಯಿಂದ ಲಾರಿ ಗುದ್ದಿ, ಶಿಕ್ಷಕ ಸಾವು


 ಚಿತ್ರದುರ್ಗ: ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 13 , ಪೊಲೀಸ್ ಗೆಸ್ಟ್ ಹೌಸ್ ಮುಂಭಾಗದಲ್ಲಿ. ಬೈಕ್ ಗೆ ಹಿಂಬದಿಯಿಂದ ವೇಗವಾಗಿ ಬಂದ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಂಗಳವಾರ ಮಧ್ಯಾನ್ಹ  ನಡೆದಿದೆ.

ಯಳಗೋಡು ಗ್ರಾಮದ ಶಿಕ್ಷಕ ಶಿವಾನಂದಪ್ಪ(58) ಮತ್ತು ನವೀನ್(32) ಬೈಕ್ ಹೆದ್ದಾರಿ ಮೂಲಕ ಚಿತ್ರದುರ್ಗಕ್ಕೆ ಬರುತ್ತಿರುವಾಗ ಹಿಂಬದಿಯಿಂದ ಲಾರಿಯೊಂದು ಬೈಕ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಸ್ಥಳದಲ್ಲಿಯೇ ಶಿವಾನಂದ ಸಾವನ್ನಪ್ಪಿದ್ದು ಮತ್ತೊಬ್ಬ ಶಿಕ್ಷಕ ನವೀನ ಗಾಯಗೊಂಡಿದ್ದು ಅವರನ್ನು ಕೂಡಲೇ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ.


No comments:

Post a Comment