Skip to main content

Posts

Showing posts from November, 2022

Suryakumar Yadav: ಬಂದ ಪುಟ್ಟ ಹೋದ ಪುಟ್ಟ; ಏಕದಿನ ಮಾದರಿಯಲ್ಲಿ ಸೂರ್ಯನಿಗೆ ಗ್ರಹಣ..!

ನ್ಯೂಜಿಲೆಂಡ್​ನಲ್ಲಿ ನಡೆಯುತ್ತಿರುವ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ (India Vs New Zealand) ಸರಣಿ ಸೋಲಿನ ಭೀತಿಯಲ್ಲಿದೆ. ಹಾರ್ದಿಕ್ ನಾಯಕತ್ವದಲ್ಲಿ ಟಿ20 ಸರಣಿ ಎತ್ತಿಹಿಡಿದಿದ್ದ ಟೀಂ ಇಂಡಿಯಾ ಇದೀಗ ಧವನ್ ನಾಯಕತ್ವದಲ್ಲಿ ಏಕದಿನ ಸರಣಿಯನ್ನು ಗೆಲ್ಲುವಲ್ಲಿ ವಿಫಲವಾಗಿದೆ. ಇದರೊಂದಿಗೆ ತಂಡದ ಇಬ್ಬರು ಆಟಗಾರರ ಪ್ರದರ್ಶನದ ಬಗ್ಗೆ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಸತತ ವೈಫಲ್ಯಗಳ ನಡುವೆಯೂ ರಿಷಬ್ ಪಂತ್​ಗೆ (Rishabh Pant) ಅವಕಾಶ ನೀಡುತ್ತಿರುವುದು ಅಭಿಮಾನಿಗಳು ಕೋಪಗೊಳ್ಳುವಂತೆ ಮಾಡಿದರೆ, ಇನ್ನೊಂದೆಡೆ ಟಿ20 ಕ್ರಿಕೆಟ್​ನಲ್ಲಿ ಅಬ್ಬರಿಸಿ ಬೊಬ್ಬೆರೆಯುವ ಸೂರ್ಯಕುಮಾರ್ ಯಾದವ್ (Suryakumar Yadav) ಏಕದಿನ ಕ್ರಿಕೆಟ್​ನಲ್ಲಿ ಫ್ಲಾಪ್ ಆಗುತ್ತಿರುವುದು ಬಿಸಿಸಿಐಗೆ ಹೊಸ ತಲೆನೋವು ತಂದ್ದೊಡ್ಡಿದೆ. ಪಂದ್ಯದಿಂದ ಪಂದ್ಯಕ್ಕೆ, ಸರಣಿಯಿಂದ ಸರಣಿಗೆ ಸೂರ್ಯ ಅವರ ಏಕದಿನ ಪ್ರದರ್ಶನ ಕುಸಿಯುತ್ತಿದೆ. ಪ್ರಸ್ತುತ ಕಿವೀಸ್ ವಿರುದ್ಧದ ಸರಣಿಯಲ್ಲೂ ಸೂರ್ಯ ಸೈಲೆಂಟ್ ಆಗಿದ್ದು, ಇಡೀ ಸರಣಿಯಲ್ಲಿ ಅವರು 50 ರನ್ ಕೂಡ ಗಳಿಸಲಿಲ್ಲ. ಸೂರ್ಯಕುಮಾರ್ ಯಾದವ್ ನ್ಯೂಜಿಲೆಂಡ್‌ನಲ್ಲಿ ಆಡಿದ 3 ಏಕದಿನ ಪಂದ್ಯಗಳ 3 ಇನ್ನಿಂಗ್ಸ್‌ಗಳಲ್ಲಿ ಕೇವಲ 48 ರನ್ ಗಳಿಸಿದರು. ಇದರಲ್ಲಿ ನೇಪಿಯರ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಅವರ ಬ್ಯಾಟ್‌ನಿಂದ 6 ರನ್‌ಗಳು ಹೊರಬಿದ್ದವು. ಮಳೆಯಲ್ಲಿ ಕೊಚ್ಚಿಹೋದ ಹ್ಯಾಮಿಲ್ಟನ್ ಏಕದಿನ ಪಂದ್ಯದಲ್ಲಿ ಅವರು...

18 ವರ್ಷಗಳ ಕಾನೂನು ಸಮರ : ಇಂದು ಬೆಳಗಾವಿ-ಮಹಾರಾಷ್ಟ್ರ ಗಡಿ ವಿವಾದದ ಅಂತಿಮ ವಿಚಾರಣೆ…!

  ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಇಂದು ನಿನ್ನೆಯದ್ದಲ್ಲ. ಜೊತೆಗೆ ಆಗಾಗ ಈ ಗಡಿ ವಿವಾದ ಕ್ಯಾತೆಯನ್ನು ತೆಗೆಯುತ್ತಲೆ ಇರುತ್ತಾರೆ. ಮೊನ್ನೆಯಷ್ಟೇ ಕರ್ನಾಟಕದ ಬಸ್ ಗಳ ಮೇಲೆ ಮಸಿಯಲ್ಲಿ ಬರೆದು ಕ್ಯಾತೆ ಸೃಷ್ಟಿ ಮಾಡಿದ್ದರು. ಬಳಿಕ ಒಂದು ದಿನದ ಮಟ್ಟಿಗೆ ಬಸ್ ಸಂಚಾರ ಕೂಡ ನಿಂತು ಹೋಗಿತ್ತು. ಈ ಗಡಿ ವಿವಾದದ ತೀರ್ಪು ಇಂದು ಹೊರಬೀಳಲಿದೆ. ಈ ಗಡಿ ವಿವಾದ ಕೋರ್ಟ್ ವ್ಯಾಪ್ತಿಗೆ ಬರುತ್ತದೆಯೋ..? ಇಲ್ಲವೋ ಎಂಬ ತೀರ್ಪು ಇಂದು ಹೊರಬೀಳಲಿದೆ. 2004ರಲ್ಲಿ ಮಹಾರಾಷ್ಟ್ರ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿತ್ತು. ಇಂದು ಆ ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ನಡೆಯುವ ಸಾಧ್ಯತೆ ಇದೆ. ಸುಮಾರು 18 ವರ್ಷಗಳಿಂದಾನು ಈ ವಿಚಾರದಲ್ಲಿ ಕಾನೂನು ಸಮರ ನಡೆಯುತ್ತಲೆ ಇದೆ. ಹೀಗಾಗಿ ಇಂದು ಎಲ್ಲರ ಚಿತ್ತ ಸುಪ್ರೀಂ ಕೋರ್ಟ್ನತ್ತ ನೆಟ್ಟಿದೆ. ಕೋರ್ಟ್ ನಿಂದ ಯಾವ ರೀತಿಯಾದ ತೀರ್ಪು ಬರುತ್ತೆ ಎಂಬುದು ಕರ್ನಾಟಕ ಹಾಗೂ ಮಹಾರಾಷ್ಟ್ರ ಎರಡು ಕಡೆ ಕಾಯುತ್ತಿದ್ದಾರೆ. The post 18 ವರ್ಷಗಳ ಕಾನೂನು ಸಮರ : ಇಂದು ಬೆಳಗಾವಿ-ಮಹಾರಾಷ್ಟ್ರ ಗಡಿ ವಿವಾದದ ಅಂತಿಮ ವಿಚಾರಣೆ…! first appeared on Kannada News | suddione . source https://suddione.com/18-years-of-legal-battle-belgaum-maharashtra-border-dispute-verdict-today/

Roger Binny: ವಿವಾದದಲ್ಲಿ ರೋಜರ್ ಬಿನ್ನಿ; ಸೊಸೆ ವೃತ್ತಿಯ ಕಾರಣಕ್ಕೆ ನೂತನ ಅಧ್ಯಕ್ಷರಿಗೆ ಬಿಸಿಸಿಐ ನೊಟೀಸ್

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ (BCCI) ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘನೆ ಆರೋಪ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ಮಂಡಳಿಯ ನೂತನ ಅಧ್ಯಕ್ಷ ರೋಜರ್ ಬಿನ್ನಿ (Roger Binny) ಇದೀಗ ಈ ಆರೋಪದ ಕೇಂದ್ರ ಬಿಂದುವಾಗಿದ್ದಾರೆ. ತನ್ನ ಸೊಸೆ ಮಯಾಂತಿ ಲ್ಯಾಂಗರ್ (Mayanti Langer) ಅವರ ವೃತ್ತಿಯೇ ಇದೀಗ ಬಿನ್ನಿಗೆ ಸಂಕಷ್ಟ ತಂದೊಡ್ಡಿದೆ. ಬಿನ್ನಿ ವಿರುದ್ಧ ಬಿಸಿಸಿಐನಿಂದಲೇ ಹಿತಾಸಕ್ತಿ ಸಂಘರ್ಷದ (conflict of interest) ನಿಯಮ ಉಲ್ಲಂಘನೆ ಆರೋಪ ಮಾಡಲಾಗಿದ್ದು, ಬಿಸಿಸಿಐ ಎಥಿಕ್ಸ್ ಆಫೀಸರ್ ವಿನೀತ್ (Vineet Saran) ಸರನ್ ಅವರು ಬಿನ್ನಿಗೆ ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘಿಸಿರುವುದಾಗಿ ನೋಟಿಸ್ ಕಳುಹಿಸಿದ್ದಾರೆ. ತನ್ನ ವಿರುದ್ಧದ ಹಿತಾಸಕ್ತಿ ಸಂಘರ್ಷದ ಆರೋಪಗಳಿಗೆ ಡಿಸೆಂಬರ್ 20 ರೊಳಗೆ ಲಿಖಿತ ಉತ್ತರವನ್ನು ನೀಡುವಂತೆ ವಿನೀತ್ ಸರನ್, ಬಿನ್ನಿಯನ್ನು ಕೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಭಾರತದ ತವರು ಸರಣಿಯನ್ನು ಪ್ರಸಾರ ಮಾಡುವ ಮಾಧ್ಯಮ ಹಕ್ಕುಗಳನ್ನು ಹೊಂದಿರುವ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ತನ್ನ ಸೊಸೆ ಕೆಲಸ ಮಾಡುತ್ತಿರುವುದರಿಂದ ಬಿನ್ನಿ ಹಿತಾಸಕ್ತಿ ಸಂಘರ್ಷವನ್ನು ಹೊಂದಿದ್ದಾರೆ ಎಂದು ಈ ಹಿಂದೆ ದೂರುದಾರ ಸಂಜೀವ್ ಗುಪ್ತಾ ಆರೋಪಿಸಿದ್ದರು. ದೂರಿನನ್ವಯ ಕ್ರಮಕ್ಕೆ ಮುಂದಾಗಿರುವ ಬಿಸಿಸಿಐ, ನೂತನ ಅಧ್ಯಕ್ಷ ರೋಜರ್ ಬಿನ್ನಿಗೆ ಈ ಬಗ್ಗೆ ನೋಟಿಸ್ ನೀಡಿದೆ. ನೋಟಿಸ್​ನಲ್ಲಿರುವುದೇನು? ಬಿಸ...

Rishabh Pant: ನನಗಿನ್ನು 24 ವರ್ಷ ಇಷ್ಟು ಬೇಗ ಪ್ರಶ್ನೆ ಮಾಡಿದ್ರೆ ಹೇಗೆ..?; ಟೀಕಿಸುವವರಿಗೆ ಪಂತ್ ಖಡಕ್ ರಿಪ್ಲೈ

ಪ್ರಸ್ತುತ ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ (India Vs New Zealand) ತನ್ನ ಪ್ರದರ್ಶನಕ್ಕಿಂತಲೂ ಹೆಚ್ಚಾಗಿ ರಿಷಬ್ ಪಂತ್ (Rishabh Pant) ವಿಚಾರದಲ್ಲಿ ಸುದ್ದಿಯಾಗಿದೆ. ಏಷ್ಯಾಕಪ್​ನಿಂದಲೂ ಕಳಪೆ ಫಾರ್ಮ್​ನಿಂದ ನರಳುತ್ತಿರುವ ಪಂತ್​ಗೆ ತಂಡದಲ್ಲಿ ಪದೇ ಪದೇ ಅವಕಾಶ ನೀಡುತ್ತಿರುವುದು ಭಾರತ ಕ್ರಿಕೆಟ್​ನಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. ಅದರಲ್ಲೂ ಪ್ರತಿಭೆಗಳ ದಂಡನ್ನೇ ಹೊಂದಿರುವ ಭಾರತದಲ್ಲಿ ಸತತ ವೈಫಲ್ಯಗಳನ್ನು ಕಾಣುತ್ತಿರುವ ಆಟಗಾರನಿಗೆ ನಿರಂತರ ಅವಕಾಶ ನೀಡುತ್ತಿರುವುದು ಟೀಂ ಇಂಡಿಯಾ (Team India) ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಅದರಲ್ಲೂ ಪ್ರತಿ ಪ್ರವಾಸಕ್ಕೂ ಆಯ್ಕೆಯಾಗುವ ಸಂಜು ಸ್ಯಾಮ್ಸನ್​ಗೆ (Sanju Samson) ತಂಡದಲ್ಲಿ ಅವಕಾಶ ನೀಡದಿರುವುದು ಅಭಿಮಾನಿಗಳು ಮತ್ತಷ್ಟು ಕೆರಳುವಂತೆ ಮಾಡಿದೆ. ಇತ್ತ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಪದೇ ಪದೇ ವಿಫಲರಾಗುತ್ತಿರುವ ಪಂತ್ ಮೇಲೆಯೂ ಪ್ರಶ್ನೆಗಳು ಉದ್ಭವಿಸುತ್ತಿವೆ. ಈಗ ಇಂತಹ ಪ್ರಶ್ನೆಗಳಿಗೆ ಪಂತ್ ತಮ್ಮದೇ ರೀತಿಯಲ್ಲಿ ಉತ್ತರ ನೀಡಿದ್ದಾರೆ. ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯಕ್ಕೂ ಮೊದಲು ವಿಶ್ಲೇಷಕ ಹರ್ಷ ಭೋಗ್ಲೆ ತಮ್ಮ ಪ್ರದರ್ಶನದ ಕುರಿತು ಎದ್ದಿರುವ ಪ್ರಶ್ನೆಗಳ ಬಗ್ಗೆ ಪಂತ್ ಬಳಿ ಪ್ರತಿಕ್ರಿಯೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ರಿಷಬ್ ಪಂತ್ ನನ್ನ ಏಕದಿನ ಮತ್ತು ಟ...

IND vs NZ: ಸಂಜು ಸ್ಯಾಮ್ಸನ್‌ಗಿಲ್ಲ ಸ್ಥಾನ! ಕಿವೀಸ್ ತಂಡದಲ್ಲಿ ಒಂದು ಬದಲಾವಣೆ; ಹೀಗಿವೆ ಉಭಯ ತಂಡಗಳು

ಇಂದು ಕ್ರೈಸ್ಟ್‌ಚರ್ಚ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯ ನಡೆಯುತ್ತಿದೆ. 3 ಏಕದಿನ ಸರಣಿಯಲ್ಲಿ ಆತಿಥೇಯ ನ್ಯೂಜಿಲೆಂಡ್ 1-0 ಮುನ್ನಡೆ ಸಾಧಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಸರಣಿಯನ್ನು ಸಮಬಲದೊಂದಿಗೆ ಅಂತ್ಯಗೊಳಿಸುವ ಇರಾದೆಯೊಂದಿಗೆ ಟೀಂ ಇಂಡಿಯಾ ಕಣಕ್ಕಿಳಿದಿದೆ. ಆದರೆ, ಈ ಪಂದ್ಯಕ್ಕೆ ಮಳೆ ಕಾಟ ನೀಡದಿದ್ದರೆ ಮಾತ್ರ ಈ ಪಂದ್ಯದ ಫಲಿತಾಂಶ ಹೊರಬೀಳಲಿದೆ. ನಿಗಧಿತ ಸಮಯಕ್ಕೂ ಕೊಂಚ ತಡವಾಗಿ ಟಾಸ್ ನಡೆದಿದ್ದು, ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದ ಕಿವೀಸ್ ನಾಯಕ ಎಂದಿನಂತೆ ಬೌಲಿಂಗ್ ಆಯ್ದುಕೊಂಡಿದ್ದಾರೆ. ಹೀಗಾಗಿ ಭಾರತ ಮೊದಲು ಬ್ಯಾಟಿಂಗ್ ಮಾಡಲಿದೆ. ಟೀಂ ಇಂಡಿಯಾ ನಾಯಕ ಧವನ್ ಈ ಸರಣಿಯ 3 ಪಂದ್ಯಗಳ ಟಾಸ್ ಸೋತಿರುವುದು ಇಲ್ಲಿ ವಿಶೇಷ. ಟಾಸ್ ಬಳಿಕ ಉಭಯ ತಂಡಗಳು ತಮ್ಮ ತಮ್ಮ ಪ್ಲೇಯಿಂಗ್ ಇಲೆವೆನ್ ಅನ್ನು ಪ್ರಕಟಿಸಿದ್ದು, ಟೀಂ ಇಂಡಿಯಾ ಯಾವುದೇ ಬದಲಾವಣೆ ಮಾಡದೆ ಎರಡನೇ ಏಕದಿನ ಪಂದ್ಯಕ್ಕೆ ಕಣಕ್ಕಿಳಿಸಿದ ತಂಡವನ್ನೇ ಇಂದು ಕೂಡ ಆಡಿಸುತ್ತಿದೆ. ಆದರೆ ಕಿವೀಸ್ ಪಡೆ ಮಾತ್ರ ಒಂದು ಬದಲಾವಣೆ ಮಾಡಿದೆ. ಆದಾಗ್ಯೂ, ಕ್ರೈಸ್ಟ್‌ಚರ್ಚ್‌ನಲ್ಲಿ ಭಾರತಕ್ಕೆ ಗೆಲುವು ಸುಲಭವಲ್ಲ ಏಕೆಂದರೆ ಈ ಮೈದಾನದಲ್ಲಿ ಭಾರತದ ಏಕದಿನ ಮಾದರಿಯ ದಾಖಲೆ ಉತ್ತಮವಾಗಿಲ್ಲ. ಇಲ್ಲಿ ಆಡಿದ 6 ಪಂದ್ಯಗಳಲ್ಲಿ ಭಾರತ ತಂಡ ಗೆದ್ದಿರುವುದು ಒಂದರಲ್ಲಿ ಮಾತ್ರ. ಇದಲ್ಲದೇ ಕಿವೀಸ್ ತಂಡ ಈ ಹಿಂದೆ ತವರಿನಲ್ಲಿ 13 ಏಕದಿನ ಪಂದ್ಯಗಳನ್ನು ಸೋತಿದೆ....

IND vs NZ ODI Cricket Live Score: ಮತ್ತೆ ಟಾಸ್ ಸೋತ ಧವನ್; ಕಿವೀಸ್ ಮೊದಲು ಬೌಲಿಂಗ್

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯುತ್ತಿದೆ. ಈ ಸರಣಿಯಲ್ಲಿ ಆತಿಥೇಯ ಕಿವೀಸ್ ತಂಡ 1-0 ಮುನ್ನಡೆಯಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ ಮೂರನೇ ಪಂದ್ಯವನ್ನು ಗೆದ್ದು ಸರಣಿ ಸಮಬಲಗೊಳಿಸಲು ಪ್ರಯತ್ನಿಸಲಿದೆ. ಸರಣಿಯ ಮೊದಲ ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳಿಂದ ಸೋತಿತ್ತು. ಇದಾದ ಬಳಿಕ ಎರಡನೇ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಎರಡನೇ ಪಂದ್ಯ ವಾಶ್ ಔಟ್ ಆಗುವುದರೊಂದಿಗೆ ಭಾರತದ ಸರಣಿ ಗೆಲ್ಲುವ ಆಸೆಯೂ ಕೊನೆಗೊಂಡಿತು. source https://tv9kannada.com/sports/cricket-news/india-vs-new-zealand-3rd-odi-live-score-updates-ind-vs-nz-3rd-odi-cricket-match-2022-ball-by-ball-commentary-from-hagley-oval-in-christchurch-updates-in-kannada-psr-au14-478292.html

Team India: ಟೀಮ್ ಇಂಡಿಯಾದ ಭವಿಷ್ಯದ ನಾಯಕ ಯಾರು? ಅಚ್ಚರಿ ಹೆಸರು ಸೂಚಿಸಿದ ಗಂಭೀರ್..!

source https://tv9kannada.com/photo-gallery/cricket-photos/gautam-gambhir-picks-prithvi-shaw-as-indias-future-captain-kannada-news-zp-au50-478249.html

SA20 League: ಡರ್ಬನ್ ಸೂಪರ್ ಜೈಂಟ್ಸ್ ತಂಡದ ಹೊಸ ಜೆರ್ಸಿ ಅನಾವರಣ..!

source https://tv9kannada.com/photo-gallery/cricket-photos/sa20-league-durban-super-giants-launch-new-jersey-kannada-news-zp-au50-478240.html

Womens IPL; ಮಹಿಳಾ ಐಪಿಎಲ್ ಫ್ರಾಂಚೈಸಿ ಮೂಲಬೆಲೆ ಬರೋಬ್ಬರಿ 400 ಕೋಟಿ: ಹೊರಬಿತ್ತು ಶಾಕಿಂಗ್ ಸುದ್ದಿ

ಮುಂದಿನ ವರ್ಷ ಮಾರ್ಚ್ 2023 ರಿಂದ ಪ್ರಾರಂಭವಾಗಲಿರುವ ಮಹಿಳೆಯರ ಇಂಡಿಯನ್ ಪ್ರೀಮಿಯರ್ ಲೀಗ್ (Womens IPL) ಬಗ್ಗೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಚೊಚ್ಚಲ ಸೀಸನ್​ನಲ್ಲಿ ಬಿಸಿಸಿಐ (BCCI) ಒಟ್ಟು ಐದು ಫ್ರಾಂಚೈಸಿಗಳ ಖರೀದಿಗೆ ಬರೋಬ್ಬರಿ 400 ಕೋಟಿ ರೂಪಾಯಿ ಮೂಲಬೆಲೆ ನಿಗದಿ ಪಡಿಸಿದೆ ಎಂದು ಹೇಳಲಾಗಿದೆ. ಇದುವರೆಗೆ ಐಪಿಎಲ್ ​ನಲ್ಲಿ ಅತಿ ದೊಡ್ಡ ಮೊತ್ತಕ್ಕೆ ಸೇಲ್ ಆದ ಪ್ರಾಂಚೈಸಿ ಎಂದರೆ ಅದು ಮುಂಬೈ ಇಂಡಿಯನ್ಸ್ (Mumbai Indians). 2007-08ರಲ್ಲಿ ಎಂಐ USD 111.9m, ಅಂದರೆ ಸುಮಾರು 446 ಕೋಟಿ ರೂಪಾಯಿಗೆ ಸೇಲ್ ಆಗಿತ್ತು. ಟೆಂಡರ್ ಡಾಕ್ಯುಮೆಂಟ್ ಪ್ರಕ್ರಿಯ ಮುಗಿದ ನಂತರ ಈ ಬಗ್ಗೆ ಖಚಿತ ಮಾಹಿತಿ ಹೊರಬೀಳಲಿದೆ. ಪುರುಷರ ಐಪಿಎಲ್ ಯಶಸ್ಸಿನ ಹಿನ್ನೆಲೆಯಲ್ಲಿ ಮಹಿಳಾ ಐಪಿಎಲ್​ನಲ್ಲೂ ದೊಡ್ಡ ಮೊತ್ತದ ಮೇಲೆ ಬಿಸಿಸಿಐ ಕಣ್ಣಿಟ್ಟಿದೆ. 5 ಫ್ರಾಂಚೈಸಿಗಳ ಟೆಂಡರ್ ಆಹ್ವಾನಿಸಲು ಬಿಸಿಸಿಐ 400 ಕೋಟಿ ರೂ. ನಿಗದಿಪಡಿಸಿದ್ದು ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ದಾಖಲೆ ಎನ್ನಬಹುದು. ಈ ಬಗ್ಗೆ ಐಪಿಎಲ್ ಆಡಳಿತ ಮಂಡಳಿ ಕೂಡ ಅನುಮೋದನೆ ನೀಡಿದೆ ಎನ್ನಲಾಗಿದೆ. ಅಂತೆಯೆ ಫ್ರಾಂಚೈಸ್ ಅನ್ನು 1000 ಮತ್ತು 1500 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಆಗಬಹುದೆಂದು ಬಿಸಿಸಿಐ ಯೋಚಿಸಿದೆಯಂತೆ. ಒಟ್ಟಾರೆಯಾಗಿ ಬಿಸಿಸಿಐ ಈ ಐದು ಫ್ರಾಂಚೈಸಿಗಳ ಮಾರಾಟದಿಂದ 6,000 ದಿಂದ 8000 ಕೋಟಿ (ಒಂದು ಬಿಲಿಯನ್ ಡಾಲರ್ ವ್ಯಾಪ್ತಿಯಲ್ಲಿ) ಸಂಗ್ರಹಿಸಲು ನ...

FIFA World Cup 2022: ಫಿಫಾ ವಿಶ್ವಕಪ್​ನ ನಾಕೌಟ್ ಹಂತಕ್ಕೇರಿದ 3 ತಂಡಗಳು..!

source https://tv9kannada.com/photo-gallery/fifa-world-cup-2022-3-teams-enter-to-knock-out-round-kannada-news-zp-au50-478038.html

Team India: ಬಿಸಿಸಿಐ ಬಿಗ್ ಪ್ಲ್ಯಾನ್: ಟೀಮ್ ಇಂಡಿಯಾ ಟಿ20 ತಂಡದಿಂದ ಹಿರಿಯ ಆಟಗಾರರು ಔಟ್?

source https://tv9kannada.com/photo-gallery/cricket-photos/rohit-sharma-and-virat-kohli-among-senior-players-to-be-out-kannada-news-zp-au50-477959.html

ಬಿಗ್ ಬಾಸ್ ಮನೆಗೆ ಬಂದ್ರು ದಿವ್ಯಾ, ರಾಕಿ ಅಮ್ಮ

ಬಿಗ್ ಬಾಸ್ ಮನೆಯಲ್ಲಿ 65 ದಿನಗಳತ್ತ ಹೆಜ್ಜೆ ಹಾಕುತ್ತಿದ್ದಾರೆ ಸ್ಪರ್ಧಿಗಳು. ಮನೆಯವರನ್ನು ಬಿಟ್ಟು, ಸ್ನೇಹಿತರನ್ನು ಬಿಟ್ಟು ಬಿಗ್ ಬಾಸ್ ಮನೆಯೊಳಗಡೆಯೇ ಸಮಯ ಕಳೆಯುತ್ತಿದ್ದಾರೆ. ಎರಡೂವರೆ ತಿಂಗಳಾಗುತ್ತಾ ಬರುತ್ತಿದೆ ಮನೆಯವರನ್ನು ನೋಡಿ, ಹೀಗಾಗಿ ಇಂದಿನಿಂದ ಬಿಗ್ ಬಾಸ್ ಫ್ಯಾಮಿಲಿ ರೌಂಡ್ ಶುರು ಮಾಡಿದೆ. ಮನೆ ಮಂದಿಗೆ ಬಿಗ್ ಸಪ್ರೈಸ್ ನೀಡಿದೆ. ದಿವ್ಯಾ, ಇತ್ತೀಚೆಗೆ ಹೆಲ್ತ್ ಪ್ರಾಬ್ಲಮ್ ನಿಂದ ಸ್ವಲ್ಪ ಡಲ್ ಆಗಿದ್ದರು. ಫ್ಯಾಮಿಲಿಯನ್ನು ಮಿಸ್ ಮಾಡಿಕೊಳ್ಳುತ್ತಾ ಇದ್ದರು. ಮೊದಲ ದಿನವೇ ಅವರ ಅಮ್ಮನನ್ನು ಬಿಗ್ ಬಾಸ್ ಮನೆಗೆ ಕಳುಹಿಸಿದೆ. ಅಮ್ಮನನ್ನು ನೋಡಿದ ಖುಷಿಗೆ ಓಡೋಡಿ ಬಂದು ತಬ್ಬಿಕೊಂಡಿದ್ದಾರೆ. ದಿವ್ಯಾ ಅಮ್ಮ ಕೂಡ ಕಣ್ಣೀರು ಹಾಕಿ, ಮಗಳನ್ನು ತಬ್ಬಿ ಭಾವುಕರಾಗಿದ್ದಾರೆ. ಬಳಿಕ ಮನೆಯೊಳಗೆ ರಾಕೇಶ್ ಅಮ್ಮ ಬಂದಿದ್ದಾರೆ. ಬಂದೊಡನೆ ನಗು ನಗುತ್ತಾ ಮಗನನ್ನು ತಬ್ಬಿ, ಕ್ಯಾಪ್ಟನ್ ಆಗಿದ್ದು ತುಂಬಾ ಖುಷಿ ಆಯ್ತು. ಯಾವಾಗ ಆಗ್ತೀಯಾ ಅಂತ ಕಾಯ್ತಾ ಇದ್ದೆ. ನೋಡಿದಾಗೆಲ್ಲಾ ಈ ನನ್ ಮಗನದ್ದು ಇಷ್ಟೆ ಅಂತ ಅನ್ನಿಸ್ತಾ ಇತ್ತು ಎಂದಿದ್ದಾರೆ. ಇಬ್ಬರ ಅಮ್ಮಂದಿರನ್ನು ನೋಡಿದ ಮನೆ ಮಂದಿಗೆ ಫುಲ್ ಖುಷಿಯಾಗಿದೆ. ತಮ್ಮ ಮನೆಯಿಂದಾನು ಯಾರಾದ್ರೂ ಬರಬಹುದು ಎಂದು ಕಾಯುತ್ತಿದ್ದಾರೆ. The post ಬಿಗ್ ಬಾಸ್ ಮನೆಗೆ ಬಂದ್ರು ದಿವ್ಯಾ, ರಾಕಿ ಅಮ್ಮ first appeared on Kannada News | suddione . source https://suddione.com/divya-ro...

Ruturaj Gaikwad: ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸಹ ಆಟಗಾರನಿಗೆ ನೀಡಿ ಹೃದಯ ಗೆದ್ದ ರುತುರಾಜ್

source https://tv9kannada.com/photo-gallery/cricket-photos/ruturaj-gaikwad-shares-man-of-the-match-award-with-rajvardhan-hangargekar-kannada-news-zp-au50-477647.html