Skip to main content

India vs South Africa: ಭಾರತದ ಮುಂದಿನ ಪಂದ್ಯ ಯಾವಾಗ?, ಯಾರ ವಿರುದ್ಧ?: ಇಲ್ಲಿದೆ ನೋಡಿ ಮಾಹಿತಿ

Team India T20 World Cup

ಕಾಂಗರೂಗಳ ನಾಡಿನಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ 2022 ರಲ್ಲಿ (T20 World Cup 2022) ಭಾರತ ತಂಡ ಭರ್ಜರಿ ಶುಭಾರಂಭ ಮಾಡಿದೆ. ಆಡಿದ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಟೀಮ್ ಇಂಡಿಯಾ (Team India) ಪಾಯಿಂಟ್ ಟೇಬಲ್​ನಲ್ಲಿ ಅಗ್ರಸ್ಥಾನಕ್ಕೇರಿದೆ. ಪಾಕಿಸ್ತಾನ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ರೋಹಿತ್ ಪಡೆ 4 ವಿಕೆಟ್​ಗಳ ರೋಚಕ ಗೆಲುವು ಸಾಧಿಸಿತು. ಕೊನೆಯ ಎಸೆತದ ವರೆಗೂ ನಡೆದ ಈ ಕಾದಾಟದಲ್ಲಿ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ತಂಡಕ್ಕೆ ಗೆಲುವು ತಂದಿಟ್ಟರು. ಗುರುವಾರ ನಡೆದ ದ್ವಿತೀಯ ಪಂದ್ಯದಲ್ಲೂ ನೆದರ್​ಲೆಂಡ್ಸ್ (India vs Netherlands) ವಿರುದ್ಧ 56 ರನ್​ಗಳ ಸುಲಭ ಜಯ ಕಂಡಿತು. ಇದೀಗ ಭಾರತ ತಂಡ ಮುಂದಿನ ಸವಾಲಿಗೆ ಸಜ್ಜಾಗಬೇಕಿದೆ. ಹಾಗಾದರೆ ಟೀಮ್ ಇಂಡಿಯಾ ಮುಂದಿನ ಪಂದ್ಯ ಯಾವಾಗ?, ಯಾರ ವಿರುದ್ಧ ಎಂಬುದನ್ನು ನೋಡೋಣ.

ಗ್ರೂಪ್ 2 ರಲ್ಲಿರುವ ಭಾರತ ತಂಡ ತನ್ನ ಮುಂದಿನ ಪಂದ್ಯವನ್ನು ತೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ. ಈ ಪಂದ್ಯ ಅಕ್ಟೋಬರ್ 30 ಭಾನುವಾರದಂದು ಆಯೋಜಿಸಲಾಗಿದ್ದು ಪರ್ತ್ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಸಂಜೆ 4:30 ಕ್ಕೆ ಈ ಕದನ ಶುರುವಾಗಲಿದೆ. ಆಫ್ರಿಕಾ ಆಡಿದ ಎರಡು ಪಂದ್ಯಗಳಲ್ಲಿ ಒಂದು ಪಂದ್ಯ ಮಳೆಯಿಂದ ರದ್ದಾದರೆ, ಮತ್ತೊಂದರಲ್ಲಿ ಗೆಲುವು ಸಾಧಿಸಿತ್ತು. ಹೀಗಾಗಿ +5.200 ರನ್​ರೇಟ್​ನೊಂದಿಗೆ 3 ಅಂಕ ಪಡೆದು ಎರಡನೇ ಸ್ಥಾನಲ್ಲಿದೆ. ಭಾರತ ಆಡಿದ ಎರಡೂ ಪಂದ್ಯದಲ್ಲಿ ಜಯಿಸಿ +1.425 ರನ್​ರೇಟ್​ ಹೊಂದಿ 4 ಅಂಕದೊಂದಿಗೆ ಮೊದಲ ಸ್ಥಾನದಲ್ಲಿದೆ.

ಭಾರತ-ನೆದರ್​ಲೆಂಡ್ಸ್ ಪಂದ್ಯ ಹೇಗಿತ್ತು?:

ಗುರುವಾರ ನೆದರ್​ಲೆಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಆರಂಭಿಕ ಆಘಾತ ಅನುಭವಿಸಿತು. ಕೆಎಲ್ ರಾಹುಲ್ 9 ರನ್ ಗಳಿಸಿ ಔಟಾದರು. ಬಳಿಕ ವಿರಾಟ್ ಕೊಹ್ಲಿ ಜೊತೆಗೂಡಿದ ರೋಹಿತ್ ಶರ್ಮಾ ತಂಡವನ್ನು ಮೇಲೆತ್ತಿ 73 ರನ್​ಗಳ ಕಾಣಿಕೆ ನೀಡಿದರು. ರೋಹಿತ್ 39 ಎಸೆತಗಳಲ್ಲಿ 53 ರನ್ ಗಳಿಸಿ ಔಟಾದರು. ಈ ಸಂದರ್ಭ ಕೊಹ್ಲಿ ಜೊತೆಗೂಡಿದ ಸೂರ್ಯ ಕುಮಾರ್ ಯಾದವ್ ತಂಡಕ್ಕೆ ಆಧಾರವಾಗಿ ನಿಂತರು. ಎಚ್ಚರಿಕೆಯ ಆಟವಾಡಿದ ಈ ಜೋಡಿ ಕೊನೆಯ ವರೆಗೂ ಬ್ಯಾಟಿಂಗ್ ನಡೆಸಿತು.

ಕೊಹ್ಲಿ 44 ಎಸೆತಗಳಲ್ಲಿ 3 ಫೋರ್, 2 ಸಿಕ್ಸರ್ ಬಾರಿಸಿ ಅಜೇಯ 62 ರನ್ ಗಳಿಸಿದರೆ, ಸೂರ್ಯ ಕುಮಾರ್ ಯಾದವ್ ಕೇವಲ 25 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 7 ಬೌಂಡರಿಗಳ ಸಹಿತ 51 ರನ್ ಸಿಡಿಸಿದರು. ಅಂತಿಮವಾಗಿ ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು. ನೆದರ್ಲೆಂಡ್ಸ್ ಪರ ಕ್ಲಾಸನ್ ಮತ್ತು ಮೀಕೆರನ್ ತಲಾ ಒಂದು ವಿಕೆಟ್ ಪಡೆದರು.

ಟಾರ್ಗೆಟ್ ಬೆನ್ನಟ್ಟಿದ ನೆದರ್​ಲೆಂಡ್ಸ್ ಆರಂಭದಿಂದಲೇ ವಿಕೆಟ್​ ಕಳೆದುಕೊಳ್ಳುತ್ತಾ ಸಾಗಿತು. ಟಿಮ್​ ಪ್ರಿಂಗ್ಲೆ 20 ರನ್​ ಗಳಿಸಿದ್ದೇ ಅತ್ಯಧಿಕ ಮೊತ್ತವಾಗಿತ್ತು. ಮ್ಯಾಕ್ಸ್​ ಡೌಡ್​, ಬಸ್​ ಡೆ ಲಿಡೆ, ಶಾರೀಜ್ ಅಹ್ಮದ್​ ತಲಾ 16 ರನ್​ ಗಳಿಸಿದರೆ, ಕೊಲಿನ್​ ಅಕ್ಕರ್​ಮನ್​ 17 ರನ್​ ಮಾಡಿದರು. ಅಂತಿಮವಾಗಿ ನೆದರ್​ಲೆಂಡ್ಸ್ 20 ಓವರ್​ಗಳಲ್ಲಿ 9 ವಿಕೆಟ್​ಗೆ 123 ರನ್ ಗಳಿಸಿ ಸೋಲು ಕಂಡಿತು. ಭಾರತ ಪರ ಭುವನೇಶ್ವರ್​ ಕುಮಾರ್,​ ಅರ್ಷದೀಪ್​ ಸಿಂಗ್, ಅಕ್ಷರ್ ಪಟೇಲ್​, ರವಿಚಂದ್ರನ್​ ಅಶ್ವಿನ್​ ತಲಾ 2 ವಿಕೆಟ್​ ಹಾಗೂ ಮೊಹಮದ್​ ಶಮಿ 1 ವಿಕೆಟ್​ ಪಡೆದು ಮಿಂಚಿದರು.



source https://tv9kannada.com/sports/cricket-news/icc-t20-world-cup-2022-india-vs-south-africa-will-take-place-on-sunday-30th-october-2022-kannada-sports-news-vb-au48-461677.html

Comments

Popular posts from this blog

ಪ್ರಶ್ನಿಸದೇ ಒಪ್ಪಬೇಡಿ!? ಎಂದ ವಿಚಾರವಾದಿ, ನರಸಿಂಹಯ್ಯನವರ ಜನ್ಮ ದಿನದ ವಿಶೇಷ.

ನವೀನ್ ಪಿ ಆಚಾರ್, ಸಹ ಶಿಕ್ಷಕರು ಮೆದೇಹಳ್ಳಿ.ಇವರಿಂದ,ನರಸಿಂಹಯ್ಯನವರ ಜನ್ಮ ದಿನದ, ಕುರಿತಾಗಿ ವಿಶೇಷ ಲೇಖನ.   ಈ ವಾಕ್ಯವನ್ನು ಎಲ್ಲೋ ಕೇಳಿದ್ದೇವೆ, ಅಂತ ಅನ್ನಿಸಿದರೆ ಅದರ ಕರ್ತೃ ಡಾ.ಎಚ್.ನರಸಿಂಹಯ್ಯ,  ಇವರು  ಯಾವಾಗಲೂ ವೈಜ್ಞಾನಿಕವಾಗಿ ಚಿಂತಿಸುವ ಮೂಲಕ ನಾಡಿಗೆ ಬೆಳಕಾಗಿದ್ದರು. ಅಮೇರಿಕಾದಲ್ಲಿ ಡಾಕ್ಟರೇಟ್‌ ಪಡೆದ ನಂತರವೂ ಹಲವು ವರ್ಷಗಳ ಕಾಲ ಬೆಂಗಳೂರಿನ ನ್ಯಾಷನಲ್‌ ಕಾಲೇಜಿನಲ್ಲಿ ಶಿಕ್ಷಕರಾಗಿದ್ದ ಅವರು , ಎಚ್.ಎನ್‌ ಮೇಷ್ಟ್ರು! ಎಂದೇ ಪ್ರಖ್ಯಾತಿ ಪಡೆದವರು. ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ ಜೈಲುವಾಸವನ್ನೂ ಅನುಭವಿಸಿದವರು. ಮಹಾತ್ಮ ಗಾಂಧಿಜಿಯವರು ಬೆಂಗಳೂರಿಗೆ ಬಂದಾಗ ಅವರ ಭಾಷಣವನ್ನು ಕನ್ನಡಕ್ಕೆ ತರ್ಜುಮೆ ಮಾಡಿದವರು. ನಾಡಿನ ತುಂಬೆಲ್ಲ ಮೂಢನಂಬಿಕೆಯನ್ನು ವಿರೋಧಿಸುತ್ತಾ ವೈಜ್ಞಾನಿಕ ಚಳುವಳಿಗೆ ನಾಂದಿ ಹಾಡಿದ ಮಹಾಪುರುಷನಿಗೆ ಇಂದು ಜನ್ಮ ದಿನದ ಸಂಭ್ರಮ. " ನಿಂಬೆಹಣ್ಣು ಬೇಡ ಕುಂಬಳಕಾಯಿ ಕೊಡಿ" ಹೀಗೆಂದು ಸಾಯಿ ಬಾಬಾರನ್ನು ಪ್ರಶ್ನಿಸಿದ್ದು ಎಚ್. ನರಸಿಂಹಯ್ಯ ಅವರು. ಇದರ ಹಿನ್ನೆಲೆ ಇಷ್ಟೇ. ಸಾಯಿ ಬಾಬಾ ತನ್ನ ಭಕ್ತರಿಗೆ ಆಶೀರ್ವದಿಸಲು ಚೂಂ ಮಂತ್ರ ಮಾಡಿ ನಿಂಬೆ ಹಣ್ಣು , ಉಂಗುರು , ಚೈನ್ , ಎಚ್.ಎಂ.ಟಿ ವಾಚ್ , ಬೂದಿ... ಹೀಗೆ ಏನೆಲ್ಲಾ ಕೊಡುತ್ತಿದ್ದರು ಎಂಬುದು ಬಾಬಾ ಇದ್ದ ಕಾಲದ ಪ್ರತೀತಿ , ನಂಬಿಕೆ ಮತ್ತು ಅದನ್ನು ಕಂಡವರಿಗೆ ಸತ್ಯ ?! ಹೇಳೀ ಕೇಳೀ ವೈಜ್ಞಾನಿಕ ಮನೋಭಾವದ ಎಚ್.ಎನ್. ಆಯ್ತಪ್ಪಾ ನಿಮ್...

NMMS ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ, ಬೃಹನ್ಮಠ ಪ್ರೌಢಶಾಲೆಗೆ ಕೀರ್ತಿತಂದ ಸಂಜನಾ.

  ಚಿತ್ರದುರ್ಗ : ನಗರದ ಪಶ್ಚಿಮ ಕ್ಲಸ್ಟರ್ ನ ಬೃಹನ್ಮಠ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಸಂಜನಾ NMMS ಪರೀಕ್ಷೆಯಲ್ಲಿ ಚಿತ್ರದುರ್ಗ ನಗರ ವ್ಯಾಪ್ತಿಯಲ್ಲಿ ಆಯ್ಕೆ ಆದ ಏಕಮಾತ್ರ ವಿ ದ್ಯಾರ್ಥಿನಿ ಆಗಿರುತ್ತಾಳೆ . 2020ರ ಜೂನ್ ತಿಂಗಳಲ್ಲಿ ನಡೆದ NMMS ಪರೀಕ್ಷೆಯಲ್ಲಿ ಭಾಗವಹಿಸಿದ ಸಂಜನಾ . ಉತ್ತೀರ್ಣಳಾಗಿ, ವಿದ್ಯಾರ್ಥಿ ವೇತನಕ್ಕೆ ಅರ್ಹಳಾದ ಇವರನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶಾಲಾ   ವತಿಯಿಂದ ಅಭಿನಂದಿಸಲಾಯಿತು.   ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ ಸಿದ್ದಪ್ಪ ಅವರು ಅಭಿನಂದಿಸಿ , ಈ ವಿ ದ್ಯಾ ರ್ಥಿಯ ಮುಂದಿನ ವಿದ್ಯಾಭ್ಯಾಸ ಮುಂದುವರಿಸಲು 48000ರೂ ವಿ ದ್ಯಾ ರ್ಥಿ ವೇತನ ಪಡೆದಿರುತ್ತಾಳೆ ಎಂದ ರು. ಅಭಿನಂದನಾ ಕಾರ್ಯಕ್ರಮದಲ್ಲಿ ಪಶ್ಚಿಮ ಕ್ಲಸ್ಟರ್ CRP ಅಜಯ್ ಕುಮಾರ್ , IERT ರಾಜಣ್ಣ , BRP ದೇವರಾಜ್ , ಮುಖ್ಯ ಶಿಕ್ಷಕರಾದ ಆಶಾರಾಣಿ , ತರಳಬಾಳು ಪ್ರಾಥಮಿಕ ಶಾಲೆ ಸಹ ಶಿಕ್ಷಕರಾದ ಮನು ಹಾಗೂ ಶಾಲೆಯ ಸಹ ಶಿಕ್ಷಕರು ಅಭಿನಂದಿಸಿದರು. ಬಿ.ಆರ್.ಸಿ. ಈಶ್ವರಪ್ಪ ಸರ್ ಹಾಗೂ ಇ.ಸಿ.ಓ ಇನಾಯತ್ ಸರ್ ವಿದ್ಯಾರ್ಥಿನಿಯ ಸಾಧನೆಯನ್ನು ಶ್ಲಾಘಿಸಿದರು.

ಭಾರತೀಯ ಕ್ರಿಕೆಟ್ ಆಟಗಾರನಿಗೆ ಕೊರೋನಾ ಸೋಂಕು, ಕೊಹ್ಲಿ ಟೀಮ್ ಗೆ ಹೆಚ್ಚಿದ ಆತಂಕ.

  ಲಂಡನ್: ಇಂಗ್ಲೆಂಡ್‌ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತೀಯ ತಂಡಕ್ಕೆ ದೊಡ್ಡ ಹಿನ್ನಡೆಯಾಗಲಿದೆ ಎನ್ನಲಾಗಿದೆ. ಕ್ರಿಕೆಟ್‌ ಬಜ್‌ ವರದಿಯ ಪ್ರಕಾರ , ಟೀಮ್‌ ಇಂಡಿಯಾದ ಕನಿಷ್ಠ ಒಬ್ಬ ಆಟಗಾರನಾದರೂ ಮಾರಕ ಕೊರೊನಾವೈರಸ್‌ಗೆ ತುತ್ತಾಗಿದ್ದಾನೆ. ಶೀಘ್ರದಲ್ಲೇ ಆಟಗಾರನ ಹೆಸರನ್ನು ಪ್ರಕಟಿಸುವ ನಿರೀಕ್ಷೆಯಿದೆ ಎನ್ನಲಾಗಿದೆ. ಇನ್ನೂ ಕ್ರಿಕೆಟ್‌ ಬಜ್‌ ವರದಿಯ ಪ್ರಕಾರ , ಕೋವಿಡ್ - 19 ಗೆ ಈಡಾಗಿರುವ ಆಟಗಾರನನ್ನು ಪ್ರತ್ಯೇಕಿಸಲಾಗಿದೆ ಮತ್ತು ಮುಂಬರುವ ಮೂರು ದಿನಗಳ ಅಭ್ಯಾಸ ಪಂದ್ಯಕ್ಕಾಗಿ ತಂಡದೊಂದಿಗೆ ಡರ್ಹಾಮ್‌ಗೆ ಪ್ರಯಾಣಿಸುವುದಿಲ್ಲ ಅಂತ ತಿಳಿಸಿದೆ. ಈಗಿನಂತೆ , ಈ ಅಂಕಿ ಅಂಶವು ಒಂದಾಗಿದೆ , ಆದರೆ ಹೆಚ್ಚಿನ ಆಟಗಾರರು ಸೋಂಕಿಗೆ ಒಳಗಾಗಬಹುದು ಎನ್ನಲಾಗಿದ್ದು ಇದರಿಂದ ತಂಡದಲ್ಲಿ ಆತಂಕದ ವಾತವಾರಣ ನಿರ್ಮಾಣವಾಗಿದೆ.   ಕರೋನ ಪರೀಕ್ಷೆಗಳನ್ನು ನಡೆಸುತ್ತಿರುವ ಸಂಸ್ಥೆಯಾದ ಇಂಗ್ಲೆಂಡ್‌ನ ರಾಷ್ಟ್ರೀಯ ಆರೋಗ್ಯ ಸೇವೆ ಶೀಘ್ರದಲ್ಲೇ ಆಟಗಾರನ ಹೆಸರನ್ನು ಬಹಿರಂಗಪಡಿಸುವ ನಿರೀಕ್ಷೆಯಿದೆ. ಅದೇ ರೀತಿ ಮಾಧ್ಯಮಗಳ ವರದಿಯ ಪ್ರಕಾರ , ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನ ನಂತರ ಮೂರು ವಾರಗಳ ವಿರಾಮದ ಸಮಯದಲ್ಲಿ ಸೊಂಕಿಗೆ ಈಡಾಗಿರುವ ಆಟಗಾರ ಹೆಚ್ಚು ಸಾರ್ವಜನಿಕ ಸಭೆಗಳಲ್ಲಿ ಇತ್ತೀಚೆಗೆ ಭಾಗವಹಿಸಿದ್ದರು ಎನ್ನಲಾಗಿದೆ. ಡರ್ಹಾಮ್ ತಲುಪಿದ ನಂತರ ಆಟಗಾರರನ್ನು ಮತ್ತೆ ಪರೀಕ್ಷಿಸಲಾಗುವುದು ಎಂದು ವರದಿಯಾಗಿದೆ. ಮೊದಲ ಸುತ್ತಿನ ಪರೀಕ್ಷೆ ...