ಲಖನೌ: ಭಾನುವಾರ ನವಜಾತ ಶಿಶುವನ್ನು ಕೌಶಂಬಿ ಜಿಲ್ಲಾ ಆಸ್ಪತ್ರೆಯ ಸಿಕ್ ನ್ಯೂ ಬಾರ್ನ್ ಕೇರ್ ಯೂನಿಟ್ (ಎಸ್ಎನ್ಸಿಯು) ನಲ್ಲಿ ಬೆಚ್ಚಗೆ ಇರಿಸಲಾಗಿದ್ದಾಗ ಸಜೀವವಾಗಿ ಸುಟ್ಟುಹೋಗಿದೆ. ಕುಟುಂಬವು, ಆಸ್ಪತ್ರೆಯು ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ ಶಿಶುವನ್ನು ಕೊಂದಿದ್ದಾರೆಂದು ಎಂದು ಆರೋಪಿಸಿದ್ದಾರೆ.
ಮೂಲಗಳ ಪ್ರಕಾರ, ಸಿಬ್ಬಂದಿ ತಮ್ಮ ಸೆಲ್ಫೋನ್ಗಳಲ್ಲಿ ಮಗ್ನರಾಗಿದ್ದರು ಮತ್ತು ಬೆಚ್ಚಗಾಗುವಿಕೆಯಿಂದ ಹೊಗೆ
ಹೊರಹೊಮ್ಮಲು ಪ್ರಾರಂಭಿಸಿದಾಗ ಮಗುವನ್ನು ಗಮನಿಸಿದ್ದಾರೆ. ಅಷ್ಟರಲ್ಲಿ ಶಿಶುವಿನ ಎದೆ, ಬೆನ್ನು ಮತ್ತು ಹೊಟ್ಟೆಯನ್ನು ಬೆಚ್ಚಗಾಗುವ ಶಾಖ ಶಿಶುವನ್ನು ಸುಟ್ಟಿದೆ.
ಆ ವೇಳೆಗೆ ಎಸ್ಎನ್ಸಿಯು
ವಾರ್ಡ್ಗೆ ಧಾವಿಸಿದ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ.ದೀಪಕ್ ಸೇಠ್ ಸೇರಿದಂತೆ ಸಿಬ್ಬಂದಿ
ವೈದ್ಯರನ್ನು ಎಚ್ಚರಿಸುವ ವೇಳೆಗೆ ಮಗು ಮೃತಪಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಕುಟುಂಬಕ್ಕೆ ಹತ್ತಿರವಿರುವ ಮೂಲಗಳ ಪ್ರಕಾರ, ಎನ್ಎಸ್ಸಿಯು
ವಾರ್ಡ್ನ ಸಿಬ್ಬಂದಿ ಮಗುವನ್ನು ಬೆಚ್ಚಗಾಗಿಸಿದ ನಂತರ ಅತ್ತ
ಗಮನ ಹರಿಸದೆ ಅವರ ಮೊಬೈಲ್ ಫೋನ್ಗಳಲ್ಲಿ ನಿರತರಾಗಿದ್ದಾರೆಂದು ದೂರಿದ್ದಾರೆ..
ನವಜಾತ ಶಿಶುವಿನ ಮರಣದ ನಂತರ, ಆಕ್ರೋಶಗೊಂಡ
ಕುಟುಂಬವು ಆಸ್ಪತ್ರೆಯಲ್ಲಿ ಗದ್ದಲವನ್ನು ಸೃಷ್ಟಿಸಿತು. ಕುಟುಂಬವನ್ನು
ಸಮಾಧಾನಪಡಿಸಲು ಮಂಜನಪುರ ಪೊಲೀಸ್ ಠಾಣೆಯಿಂದ ಪೊಲೀಸರನ್ನು ಕರೆಸಲಾಯಿತು. ಕುಟುಂಬವು ಜಿಲ್ಲಾ ಆಸ್ಪತ್ರೆಯ ಸಿಎಂಎಸ್
ವಿರುದ್ಧ ದೂರು ದಾಖಲಿಸಿದೆ.
ಶಿಶುವಿನ ತಂದೆ ಜುನೈದ್ ಆಸ್ಪತ್ರೆಯ ಸಿಬ್ಬಂದಿಯ ವಿರುದ್ಧ ದೂರು ನೀಡಿದ್ದು, ತನಿಖೆ
ಆರಂಭಿಸಲಾಗಿದೆ ಎಂದು ಇನ್ಸ್ಪೆಕ್ಟರ್ ಮಂಜನ್ಪುರ ಪೊಲೀಸ್ ಠಾಣೆ ಮನೀಶ್ ಪಾಂಡೆ ದೃಪಡಿಸಿದರು.
ಫತೇಪುರ್ ಜಿಲ್ಲೆಯ ಹರಿಶ್ಚಂದ್ರಪುರದ ಜುನೈದ್ ಅಹ್ಮದ್ ತನ್ನ ಗರ್ಭಿಣಿ ಪತ್ನಿ
ಮಹೇಲಿಕಾಳನ್ನು ಶುಕ್ರವಾರ ಸಂಜೆ ಕುಶಾಂಬಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರು. ಮಾಹೇಲಿಕಾ ಶನಿವಾರ ಸಂಜೆ 6:15 ಕ್ಕೆ ಗಂಡು ಮಗುವಿಗೆ ಜನ್ಮ ನೀಡಿದಳು.
ಮಗುವನ್ನು ಪರೀಕ್ಷಿಸಿದ ನಂತರ ವೈದ್ಯರು ಮಗುವನ್ನು ಸಂಪೂರ್ಣವಾಗಿ ಆರೋಗ್ಯವಾಗಿಲ್ಲ ಎಂದು
ಹೇಳಿ ಶಿಶುವನ್ನು ಎಸ್ಎನ್ಸಿಯು
ವಾರ್ಡ್ಗೆ ಸ್ಥಳಾಂತರಿಸಿದರು. ಇಡೀ ರಾತ್ರಿ ಮಗುವನ್ನು ನೋಡಲು ಕುಟುಂಬಕ್ಕೆ
ಅವಕಾಶವಿರಲಿಲ್ಲ. ಭಾನುವಾರ ಬೆಳಿಗ್ಗೆ, ನವಜಾತ ಶಿಶುವಿನ ತಾಯಿಯ ಅಜ್ಜಿ ಶಬಾನಾ SNCU ಗೆ ಭೇಟಿ ನೀಡಿದರು. ಶಿಶು ನೀಲಿ ಬಣ್ಣಕ್ಕೆ ತಿರುಗಿ ದೇಹದಿಂದ ಹೊಗೆ ಹೊರಹೊಮ್ಮುತ್ತಿರುವುದನ್ನು ಅಜ್ಜಿ ಗಮನಿಸಿದಳು. ಕುಟುಂಬವು ವೈದ್ಯರನ್ನು ಪ್ರಶ್ನಿಸಿದಾಗ, ಸಿಬ್ಬಂದಿ ಕ್ಷಮೆಯಾಚಿಸಿ
ಅಲ್ಲಿಂದ ಕಾಲಿಗೆ ಬುದ್ದಿ ಹೇಳಿದ್ದಾರೆ.
ಕುಟುಂಬದ ಮೂಲಗಳ ಪ್ರಕಾರ, ಜನನದ ನಂತರ, ಮಗು ಹಾಲು ತೆಗೆದುಕೊಳ್ಳುತ್ತಿರಲಿಲ್ಲ
ಆದ್ದರಿಂದ SNCU ಗೆ ಸ್ಥಳಾಂತರಿಸಲಾಯಿತು.ಜುನೈದ್ ಅವರ ಹಿರಿಯ
ಸಹೋದರ ಜಾವೇದ್ ಹೇಳುವಂತೆ, ಅವರು ಭಾನುವಾರ ಮುಂಜಾನೆ ಮಗುವನ್ನು ಭೇಟಿ
ಮಾಡಲು ಪ್ರಯತ್ನಿಸಿದಾಗ, ಅವರು ಮೊಬೈಲ್ ಫೋನ್ನಲ್ಲಿ
ಕಾರ್ಯನಿರತರಾಗಿರುವುದನ್ನು ನೋಡಿದರು ಮತ್ತು ಯಾರೂ ಅವರಿಗೆ ಪ್ರತಿಕ್ರಿಯಿಸುತ್ತಿಲ್ಲ.
ದುರದೃಷ್ಟಕರ ಘಟನೆ ಕುರಿತು ತನಿಖೆ ನಡೆಸಲಾಗುವುದು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ
ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂಎಸ್ ಡಾ. ದೀಪಕ್ ಸೇಠ್ ಹೇಳಿದ್ದಾರೆ.
No comments:
Post a Comment