ಚಿತ್ರದುರ್ಗ: ನಗರದ ವಿದ್ಯಾವಿಕಾಸ ವಿದ್ಯಾಸಂಸ್ಥೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ 1 ನೇ ತರಗತಿ, 4 ನೇ ತರಗತಿ ಹಾಗು 10 ನೇ ತರಗತಿ ಮಕ್ಕಳಿ ಗೆ ಲಸಿಕೆಯನ್ನು ನೀಡಲಾಯಿತು. ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ವತಿಯಿಂದ ಧನುರ್ವಾಯು , ನಂಜು , ನಾಯಿ ಕೆಮ್ಮು , ಗಂಟಲು , ಮಾರಿ , ರೋಗ ತಡೆಗಟ್ಟಲು ಚುಚ್ಚುಮದ್ದನ್ನು 1 ನೇ ತರಗತಿಗೆ , ಡಿಪಿಟಿ ಚುಚ್ಚುಮದ್ದು , 4 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಟಿ ಡಿ ಚುಚ್ಚುಮದ್ದು ನೀಡಲಾಯಿತು. ಕಾರ್ಯಕ್ರಮದಲ್ಲಿ ಆರೋಗ್ಯ ಕಾರ್ಯಕರ್ತೆರಾದ ಭಾಗ್ಯಲಕ್ಷ್ಮಿ H D, ಗೀತ B, ಹಾಗೂ ಆಶಾ ಕಾರ್ಯಕರ್ತೆ ಜಮೀಲಾ ಶಾಲೆಯ ಮುಖ್ಯೋಪಾಧ್ಯಾಯರಾದ ಸಂಪತ್ ಕುಮಾರ್ ಸಿ ಡಿ ಹಾಗೂ ಶಿಕ್ಷಕ , ಶಿಕ್ಷಕೇತರ ವರ್ಗದವರು ಉಪಸ್ಥಿತರಿದ್ದರು.