Thursday 17 June 2021

POLITICS: ಹೆಚ್.ವಿಶ್ವನಾಥ್ ಗೆ ,ಟಾಂಗ್ ಕೊಟ್ಟ ಹೆಚ್.ಡಿ.ಕೆ: ಬಿಜೆಪಿ ಸೇರೋವಾಗ ಬಿಎಸ್ ವೈ ವಯಸ್ಸು ಗೊತ್ತಿರಲಿಲ್ವಾ!!

ರಾಜ್ಯ ಬಿಜೆಪಿಯಲ್ಲಿ ಭುಗಿಲೆದ್ದಿರುವ ಭಿನ್ನಮತ ಶಮನಕ್ಕಾಗಿ ರಾಜ್ಯಕ್ಕೆ ಆಗಮಿಸಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್​ ಸಿಂಗ್​ ವಿರುದ್ಧ ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.

ಬಿಜೆಪಿಯಲ್ಲಿ ಉಂಟಾಗಿರುವ ಆಂತರಿಕ ಬಿಕ್ಕಟ್ಟು ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ರಾಜ್ಯ ಬಿಜೆಪಿಯಲ್ಲಿ ಭುಗಿಲೆದ್ದಿರುವ ಭಿನ್ನಮತ ಶಮನಕ್ಕಾಗಿ ರಾಜ್ಯಕ್ಕೆ ಆಗಮಿಸಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್​ ಸಿಂಗ್​ ವಿರುದ್ಧ ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.

ಕೆ.ಆರ್.​ ಪೇಟೆಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷಗಳು ರಾಜ್ಯದ ಸಂಪತ್ತು ಲೂಟಿ ಮಾಡುತ್ತಿವೆ. ಬಿಜೆಪಿ ವರಿಷ್ಠರು ಉಸ್ತುವಾರಿಯನ್ನ ನೇಮಿಸಿರೋದು ಸಮಸ್ಯೆ ನಿವಾರಣೆಗೆ ಅಲ್ಲ. ಅರುಣ್​ ಸಿಂಗ್​ಗೂ ಈ ಸಮಸ್ಯೆ ಬಗೆಹರಿಯೋದು ಬೇಕಾಗಿಯೂ ಇಲ್ಲ. ಈ ಎಲ್ಲದರ ಬಗ್ಗೆ ರಾಜ್ಯದ ಜನತೆ ಆದಷ್ಟು ಬೇಗ ಎಚ್ಚೆತ್ತುಕೊಳ್ಳಬೇಕಿದೆ ಎಂದು ಎಚ್ಚರಿಕೆ ನೀಡಿದ್ರು.

ಇದೇ ವೇಳೆ ಬಿಎಸ್​ವೈ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿದ ಹೆಚ್​. ವಿಶ್ವನಾಥ್​ ವಿರುದ್ಧವೂ ಮಾತನಾಡಿದ ಹೆಚ್​ಡಿಕೆ, ಜೆಡಿಎಸ್​ ಪಕ್ಷಕ್ಕೆ ವಿಶ್ವನಾಥ್​ ಕುಟುಂಬ ರಾಜಕಾರಣ ಎಂದು ಕರೆದರು. ಜೆಡಿಎಸ್​ ಪಕ್ಷ ಸೇರುವ ಮುನ್ನ ಅವರಿಗೆ ಈ ವಿಚಾರ ಗೊತ್ತಿರಲಿಲ್ವಾ..? ವಿಶ್ವನಾಥ್​ ಪುತ್ರ ಕೂಡ ಜಿಲ್ಲಾ ಪಂಚಾಯತ್​ ಸದಸ್ಯ. ಅವರ ಕುಟುಂಬವೂ ರಾಜಕಾರಣದಲ್ಲಿ ಸಕ್ರಿಯವಾಗಿದೆ.

ಹಾಗಾದರೆ ಅವರದ್ದು ಕುಟುಂಬ ರಾಜಕಾರಣ ಅಲ್ಲವಾ..? ಬಿ.ಎಸ್.​ ಯಡಿಯೂರಪ್ಪಗೆ ವಯಸ್ಸಾಯ್ತು ಅಂತಾ ಹೇಳುತ್ತಾರೆ. ಬಿಜೆಪಿ ಸೇರುವ ಮುನ್ನ ಬಿಎಸ್​ವೈ ವಯಸ್ಸು ವಿಶ್ವನಾಥ್​ಗೆ ತಿಳಿದಿರಲಿಲ್ಲವಾ..? ಅಧಿಕಾರ ಸಿಗದೇ ಇದ್ದಾಗ ಬೈಕೊಂಡು ಓಡಾಡೋದು ವಿಶ್ವನಾಥ್​ರ ಬುದ್ಧಿ ಎಂದು ಕಿಡಿಕಾರಿದ್ರು.

No comments:

Post a Comment