Skip to main content

Posts

Showing posts from January, 2022

ರಾಜ್ಯದಲ್ಲಿ ಕಟ್ಟೆಚ್ಚರ: ಜನ ಸಹಕಾರ ಕೊಟ್ಟರೆ ಲಾಕ್‌ಡೌನ್ ಇಲ್ಲ; ಸಿಎಂ

  ಬೆಳಗಾವಿ:   ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹೆಚ್ಚುತ್ತಿರುವುದರಿಂದ ರಾಜ್ಯದಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದ್ದು , ಸಾರ್ವಜನಿಕರು ಸಹಕಾರ ಕೊಟ್ಟರೆ ಲಾಕ್‌ಡೌನ್ ಅಗತ್ಯ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಹೇಳಿಕೆ ನೀಡಿದ್ದಾರೆ. ಬೆಳಗಾವಿ ವಿಮಾಣ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು , ಮುಂಬೈ ಮಾದರಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲು ನಾಳೆ ಅಥವಾ ನಾಡಿದ್ದು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಬೆಂಗಳೂರಿನಲ್ಲಿ ಸಭೆ ನಡೆಸಿ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು. ಈಗಿರುವ ನೈಟ್ ಕರ್ಪ್ಯೂ ಮುಂದುವರಿಸುವ ಬಗ್ಗೆಯೂ ಚರ್ಚಿಸಲಾಗುವುದು ಎಂದು ಮಾಹಿತಿ ನೀಡಿದರು. ಕಳೆದ ಒಂದು ವಾರದಲ್ಲಿ ಇಡೀ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ವಿಶೇಷವಾಗಿ ಮಹಾರಾಷ್ಟ್ರದ ಮುಂಬೈನಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ವ್ಯಾಪಿಸುತ್ತಿದೆ. ಕೋವಿಡ್ ಯಾವ ರೀತಿ ಹರಡುತ್ತಿದೆ ಎಂಬುದನ್ನು ಗಮನಿಸುತ್ತಿದ್ದೇವೆ. ಬೆಂಗಳೂರಿನಲ್ಲೂ ದೊಡ್ಡ ಪ್ರಮಾಣದಲ್ಲಿ ಸೋಂಕು ಹರಡುತ್ತಿದೆ. ಸಚಿವ ಆರ್. ಅಶೋಕ ಲಾಕ್‌ಡೌನ್ ಬಗ್ಗೆ ಮಾತನಾಡಿದ್ದಾರೆ. ನಮ್ಮ ನಿಲುವು ಬಹಳ ಸ್ಪಷ್ಟ ಇದೆ. ಹಿಂದೆಲ್ಲ ಲಾಕ್‌ಡೌನ್ ಆಗಿತ್ತು. ಅದು ಆಗಬಾರದು ಅಂತ ಈಗ ಕಟ್ಟುನಿಟ್ಟಿನ ತೀರ್ಮಾನ ಕೈಗೊಂಡಿದ್ದೇವೆ. ಆರ್. ಅಶೋಕ ಹೇಳಿದ ಅರ್ಥವೇ ಅದು. ಜನರು ಅದಕ್ಕೆ ಸಹಕಾರ ಕೊಟ್ಟರೆ ಲಾಕ್‌ಡೌನ್ ಆಗುವುದಿಲ್ಲ ಎಂದ...

ನಾಳೆಯಿಂದ ರಾಜ್ಯದಲ್ಲಿ 15 ರಿಂದ 18 ವರ್ಷದ ಮಕ್ಕಳಿಗೆ ಕೊರೋನಾ ಲಸಿಕೆ

  ಬೆಂಗಳೂರು:   ನಾಳೆಯಿಂದ ರಾಜ್ಯದಲ್ಲಿ 15 ರಿಂದ 18 ವರ್ಷದ ಮಕ್ಕಳಿಗೆ ಕೊರೋನಾ ಲಸಿಕೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಲಸಿಕೆ ಹಾಕಿಸಿಕೊಂಡ ಮಕ್ಕಳಿಗೆ ಮರುದಿನ ರಜೆ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಶಾಲೆಗಳಲ್ಲಿ ಮೊದಲ ದಿನ 50 ವಿದ್ಯಾರ್ಥಿಗಳಿಗೆ ಮಾತ್ರ ಕೋವಿಡ್ ಲಸಿಕೆ ನೀಡಲಾಗುತ್ತದೆ. ಮಕ್ಕಳಿಗೆ ಲಸಿಕೆ ನೀಡುವ ಸಂದರ್ಭದಲ್ಲಿ ಶಾಲೆಯ ಬಳಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಮಕ್ಕಳಿಗೆ ಲಸಿಕೆ ಹಾಕಿಸಲು ವಾಕ್ -ಇನ್ ನೋಂದಣಿ ಪಡೆಯಬಹುದು ಇಲ್ಲವೇ ಈಗಾಗಲೇ ಪ್ರಾರಂಭಿಸಲಾಗಿರುವ ಕೋ-ವಿನ್ ಆಪ್ ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಆಧಾರ್ ಮತ್ತು ಇತರ ರಾಷ್ಟ್ರೀಯ ಗುರುತಿನ ಚೀಟಿಗಳಿಲ್ಲದ ಮಕ್ಕಳು ತಮ್ಮ 10 ನೇ ತರಗತಿಯ ಗುರುತಿನ ಚೀಟಿಯನ್ನು ನೋಂದಣಿಗಾಗಿ ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿರುವ ದೇಶಿಯ ಕೋವಾಕ್ಸಿನ್ ಲಸಿಕೆಯನ್ನು 15 ರಿಂದ 18 ವರ್ಷ ವಯೋಮಾನದ ಮಕ್ಕಳಿಗೆ ನೀಡಲಾಗುವುದು , ಮೊದಲ ಡೋಸ್ ಲಸಿಕೆ ನೀಡಿದ 28 ದಿನಗಳ ಬಳಿಕ ಎರಡನೇ ಡೋಸ್ ಲಸಿಕೆ ನೀಡಲಾಗುವುದು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಫುಡ್ ಡೆಲಿವರಿ ಹುಡುಗಿಯಾಗಿ ಗ್ರಾಹಕರ ಮನೆಗಳಿಗೆ ಹೋದ ರಶ್ಮಿಕಾ..!!

  ಫುಡ್ ಡೆಲಿವರಿ ಹುಡುಗಿಯಾಗಿ ಗ್ರಾಹಕರ ಮನೆಗಳಿಗೆ ಹೋದ ರಶ್ಮಿಕಾ..!! ಹೈದರಾಬಾದ್: ರಶ್ಮಿಕಾ ಮಂದಣ್ಣ ಸದ್ಯ ಕನ್ನಡದಿಂದ ಹೋಗಿ ಟಾಲಿವುಡ್ ನಲ್ಲಿ ನೆಲೆಯೂರಿದ್ದಾರೆ.. ಬಾಲಿವುಡ್ ನಲ್ಲಿ ನೆಲೆಯೂರಲ್ಲಿ ಟ್ರೈ ಮಾಡ್ತಿದ್ದಾರೆ.. ಅದೃಷ್ಟದಿಂದಲೇ ಯಶಸ್ಸಿನ ಶಿಖರವೇರಿರುವ ರಶ್ಮಿಕಾ , ಜಾಹಿರಾತುಗಳಲ್ಲೂ ಬ್ಯುಸಿಯಿದ್ದಾರೆ.. ಸೋಷಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ.. ಅಷ್ಟೇ ಅಲ್ದೇ ವಿಶ್ವ ಪ್ರಸಿದ್ಧ ಫುಡ್ ಫ್ರಾಂಚೈಸಿ ಮೆಕ್ ಡೊನಾಲ್ಡ್ ನ ಭಾರತೀಯ ರಾಯಭಾರಿಯೂ ಆಗಿರುವ ಕ್ರಶ್ಮಿಕಾ ಆಗಾಗ ಮೆಕ್ ಡೊನಾಲ್ಡ್ಸ್ ಮೀಲ್ ನ ಪ್ರಮೋಟ್ ಮಾಡೋ ವಿಡಿಯೋಗಳನ್ನ ಹಂಚಿಕೊಳ್ತಾ ಇರುತ್ತಾರೆ.. ಅದ್ರಲ್ಲೂ ಮೆಕ್ ಡೊನಾಲ್ಡ್ಸ್ ರಶ್ಮಿಕಾ ಹೆಸರಲ್ಲೇ ಮೀಲ್ ಕೂಡ ಪರಿಚಯ ಮಾಡಿಸಿರುವುದು ಗೊತ್ತಿಲ್ದೇ ಇರೋ ವಿಚಾರವೇನಲ್ಲಾ.. ಸದ್ಯ ರಶ್ಮಿಕಾ ನಟನೆಯ ಪುಷ್ಪ ಸಿನಿಮಾ ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಾಣ್ತಿದೆ.. ಇತ್ತೀಚೆಗೆ ರಶ್ಮಿಕಾ ಫುಡ್ ಡೆಲಿವರಿ ಹುಡುಗಿಯಂತೆ ಬಟ್ಟೆ ಧರಿಸಿ , ಅಂತೆಯೇ ತಯಾರಾಗಿ ಮಾಸ್ಕ್ ಧರಿಸಿ ಮೆಕ್ ಡೊನಾಲ್ಡ್ಸ್ ನಲ್ಲಿ ಫುಡ್ ಆರ್ಡರ್ ಮಾಡಿದ್ದ ಕೆಲ ಗ್ರಾಹಕರ ಮನೆಗಳಿಗೆ ತೆರಳಿ ಅವರಿಗೆ ಸರ್ಪ್ರೈಸ್ ನೀ ಈ ಸಂಬಂಧಿತ ವಿಡಿಯೋವನ್ನ ರಶ್ಮಿಕಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು , ಇದರಲ್ಲಿ ಅವರು ಮೆಕ್ ಡೊನಾಲ್ಡ್ ಕಂಪನಿಯದ್ದೇ ಬಟ್ಟೆ ಧರಿಸಿ ಅದೇ ಕಂಪನಿಯದ್ದೇ ಹೆಲ್ಮೆಟ್ ಧರಿಸಿ , ಕಂಪನಿಯ ದ್ವಿಚಕ್...

LPG ಸಬ್ಸಿಡಿ ಬಗ್ಗೆ ಸರ್ಕಾರ ಮಾಡಿದೆ ಅದ್ಭುತ ಯೋಜನೆ : ಈಗ ಯಾರು ಪಡೆಯಬಹುದು?

  ನವದೆಹಲಿ :   ಎಲ್‌ಪಿಜಿ ಸಿಲಿಂಡರ್‌ನ ಸಬ್ಸಿಡಿಗೆ ಸಂಬಂಧಿಸಿದಂತೆ ಗ್ರಾಹಕರು ಬಿಗ್ ನ್ಯೂಸ್ ಸಿಕ್ಕಿದೆ. ಇದೀಗ ಹೊಸ ವರ್ಷದಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆ 100 ರೂಪಾಯಿ ಇಳಿಕೆಯಾಗಿದೆ. ಆದರೆ ಗೃಹಬಳಕೆಯ ಗ್ಯಾಸ್ ಬೆಲೆ ಇನ್ನೂ ಇಳಿದಿಲ್ಲ.  ಇದೇ ವೇಳೆ ಎಲ್ ಪಿಜಿ ಸಿಲಿಂಡರ್ ಬೆಲೆ 1000 ಕ್ಕೆ ತಲುಪಲಿದೆ ಎಂಬ ಚರ್ಚೆ ನಿರಂತರವಾಗಿ ನಡೆಯುತ್ತಿದೆ. ಎಲ್‌ಪಿಜಿ ಸಿಲಿಂಡರ್‌ಗಳ ಹಣದುಬ್ಬರ ಏರಿಕೆಗೆ ಸಂಬಂಧಿಸಿದಂತೆ ಸರ್ಕಾರದ ಅಭಿಪ್ರಾಯಗಳು ಇನ್ನೂ ಮುನ್ನೆಲೆಗೆ ಬಂದಿಲ್ಲ. ಆದರೆ ಸರ್ಕಾರದ ಆಂತರಿಕ ಮೌಲ್ಯಮಾಪನದಲ್ಲಿ , ಗ್ರಾಹಕರು ಸಿಲಿಂಡರ್‌ಗೆ 1000 ರೂ.ವರೆಗೆ ಪಾವತಿಸಲು ಸಿದ್ಧರಾಗಿದ್ದಾರೆ ಎಂದು ಸೂಚಿಸುತ್ತದೆ. ಮೂಲಗಳ ಪ್ರಕಾರ , ಎಲ್‌ಪಿಜಿ ಸಿಲಿಂಡರ್‌ಗಳ ಬಗ್ಗೆ ಸರ್ಕಾರ ಎರಡು ನಿಲುವುಗಳನ್ನು ತೆಗೆದುಕೊಳ್ಳಬಹುದು. ಒಂದೋ ಸರಕಾರ ಸಬ್ಸಿಡಿ ರಹಿತ ಸಿಲಿಂಡರ್‌ಗಳನ್ನು ಪೂರೈಸಬೇಕು. ಎರಡನೆಯದಾಗಿ , ಕೆಲವು ಆಯ್ದ ಗ್ರಾಹಕರಿಗೆ ಸಬ್ಸಿಡಿಯ ಲಾಭವನ್ನೂ ನೀಡಬೇಕು. ಸಬ್ಸಿಡಿಯಲ್ಲಿ ಸರ್ಕಾರದ ಯೋಜನೆ ಏನು ? ಸಬ್ಸಿಡಿ ನೀಡುವ ಬಗ್ಗೆ ಸರಕಾರದಿಂದ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಆದರೆ ಇಲ್ಲಿಯವರೆಗೆ ಬಂದಿರುವ ಮಾಹಿತಿ ಪ್ರಕಾರ ರೂ. 10 ಲಕ್ಷ ಆದಾಯ ಎಂಬ ನಿಯಮ ಜಾರಿಯಲ್ಲಿದ್ದು , ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಸಹಾಯಧನದ ಲಾಭ ದೊರೆಯಲಿದೆ. ಉಳಿದ ಜನರಿಗೆ ಸಬ್ಸಿಡಿ ಕೊನೆಗೊಳ್ಳಬಹುದು ಎಂದು ನಾವು ನಿಮಗೆ ಹೇಳೋಣ. ...

ಅಮೆರಿಕದಲ್ಲಿ ಮೀನಿನ ಮಳೆ! ಜಗತ್ತಿನಲ್ಲೇ ಅತ್ಯಂತ ವಿರಳ ಘಟನೆ

  ಟೆಕ್ಸಾಸ್‌:   ಮಳೆಯೊಂದಿಗೆ ಆಲಿಕಲ್ಲು ಬೀಳುವುದನ್ನು ನೋಡಿರುತ್ತೀರಿ. ಆದರೆ ಅಮೆರಿಕದ ಟೆಕ್ಸಾಸ್‌ನಲ್ಲಿ ಬುಧವಾರ ಮಳೆಯೊಂದಿಗೆ ಮೀನುಗಳೂ ಬಿದ್ದಿವೆ! ಹೌದು. ಇಲ್ಲಿ ಮೀನಿನ ಮಳೆಯಾಗಿರುವುದಾಗಿ ಟೆಕ್ಸಾಸ್‌ ಸರ್ಕಾರವೇ ಅಧಿಕೃತವಾಗಿ ಮಾಹಿತಿ ನೀಡಿದೆ. ಭೂಪ್ರದೇಶದಲ್ಲಿ ಸಂಭವಿಸುವ ಸುಂಟರಗಾಳಿ ಅಥವಾ ಬಿರುಗಾಳಿಯು ನೀರಿರುವ ಪ್ರದೇಶದಲ್ಲಿ ಸಂಭವಿಸಿದಾಗ ಸಣ್ಣ ಪುಟ್ಟ ಮೀನು , ಕಪ್ಪೆ ಮತ್ತಿತರ ಜಲಚರಗಳು ಆಗಸ ಸೇರುವ ಸಾಧ್ಯತೆಯಿರುತ್ತದೆ. ಮತ್ತೆ ಮಳೆಯಾದಾಗ ಈ ರೀತಿ ಮೇಲೆ ಸೇರಿದ್ದ ಜಲಚರಗಳು ವಾಪಸು ಭೂಮಿಗೆ ಬೀಳುತ್ತವೆ ಎಂದು ತಿಳಿಸಲಾಗಿದೆ. ಇದು ಅತ್ಯಂತ ವಿರಳ ಘಟನೆ ಎಂದು ಟೆಕ್ಸಾಸ್‌ ವಿವರಿಸಿದೆ.

ಮತ್ತೆ ಲಾಕ್ಡೌನ್ ಮಾಡುವ ದಿನ ಸಮೀಪಿಸುತ್ತಿದೆ, ಅಂತಿಮ ನಿರ್ಧಾರ ಸಿಎಂ ಕೈಯಲ್ಲಿ

  ಮುಂಬೈ , ಜನವರಿ 1: ದೇಶದ ಒಂದೊಂದೇ ರಾಜ್ಯದಲ್ಲಿ ಮತ್ತೆ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದು , ಇದರ ಜೊತೆಗೆ ಓಮಿಕ್ರಾನ್ ರೂಪಾಂತರಿ ವೈರಸ್ ಭೀತಿಯೂ ಕಾಡುತ್ತಿದೆ. ಸದ್ಯ ಮಹಾರಾಷ್ಟ್ರ , ಕೇರಳ ಮತ್ತು ದೆಹಲಿಗಳಲ್ಲಿ ಕೊರೊನಾ ಸೋಂಕು ಪ್ರಮಾಣದಲ್ಲಿ ಗಣನೀಯ ಏರಿಕೆಯಾಗುತ್ತಿದ್ದು , ಮತ್ತೆ ಮೊದಲಿನಂತೆ ನಿರ್ಬಂಧ ವಿಧಿಸಲಾಗುತ್ತಿದೆ. ಈ ನಡುವೆ ಮಹಾರಾಷ್ಟ್ರ ಸಚಿವರೊಬ್ಬರು ಮತ್ತೊಮ್ಮೆ ಲಾಕ್​ಡೌನ್ ಮಾಡುವ ಸೂಚನೆ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಮಹಾರಾಷ್ಟ್ರ ಸಚಿವ ವಿಜಯ್ ವಡೆತ್ತಿವಾರ್ , ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಮಿತಿಮೀರುತ್ತಿದೆ. ಮತ್ತೆ ಲಾಕ್‌ಡೌನ್​ ಹೇರುವ ಕಾಲ ಸಮೀಪಿಸುತ್ತಿದೆ. ಆದರೆ ಈ ಬಗ್ಗೆ ಅಂತಿಮವಾಗಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರೇ ನಿರ್ಣಯ ಮಾಡಲಿದ್ದಾರೆ ಎಂದು ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಕಳೆದ 11 ದಿನಗಳಿಂದಲೂ ಕೊವಿಡ್-​ 19 ಸೋಂಕಿತರ ಸಂಖ್ಯೆ ಏರುತ್ತಿದೆ. ದಿನದಲ್ಲಿ ದಾಖಲಾಗುವ ಪ್ರಕರಣ​ಗಳು ಹೆಚ್ಚುತ್ತಿವೆ. ಕೆಲವೇ ದಿನಗಳ ಹಿಂದೆ ಸರ್ಕಾರ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಮುಂಬೈನಲ್ಲಿ ಜನವರಿ 7 ರವರೆಗೂ ಸೆಕ್ಷನ್​ 144 ಜಾರಿಯಲ್ಲಿದೆ. ಇನ್ನು ಮಹಾರಾಷ್ಟ್ರದಾದ್ಯಂತ ಯಾವುದೇ ಸಾಮಾಜಿಕ , ರಾಜಕೀಯ , ಧಾರ್ಮಿಕ ಸಮಾರಂಭ ನಡೆಸಿದರೂ 50 ಜನ ಮಾತ್ರ ಸೇರಬಹುದು. ಅಂತ್ಯಸಂಸ್ಕಾರದಲ್ಲಿ ಗರಿಷ್ಠ 20 ಜನ ಪಾಲ್ಗೊಳ್ಳಬಹುದು ಎಂದು ನಿರ್ಬಂಧ ವಿಧಿಸಲ...

ಮೊಬೈಲ್‌ ಬಳಕೆದಾರರೇ ಎಚ್ಚರ : ʼಜ.4ʼರಿಂದ ಈ ʼಸ್ಮಾರ್ಟ್ ಫೋನ್ʼಗಳು ವರ್ಕ್‌ ಆಗೋಲ್ಲ

  ಇಂದು ಐಫೋನ್ ಒಂದು ಸ್ಟೇಟಸ್ ʼ ನಂತೆ ಬಳಕೆಯಾಗ್ತಿದೆ. ಅದ್ರಂತೆ , 2000 ರ ದಶಕದ ಆರಂಭದಲ್ಲಿ , ಬ್ಲ್ಯಾಕ್ ಬೆರ್ರಿ ಸ್ಮಾರ್ಟ್ ಫೋನ್( BlackBerry smartphone) ಅತ್ಯುತ್ತಮ ಸ್ಮಾರ್ಟ್ ಫೋನ್ ಅಂತಾ ಪರಿಗಣಿಸಲಾಗಿತ್ತು. ಆದ್ರೆ , ಸಧ್ಯ ಬ್ಲ್ಯಾಕ್ ಬೆರಿ ಹಳೆಯ ಸ್ಮಾರ್ಟ್ ಫೋನ್ ʼ ಗಳನ್ನ ಬೆಂಬಲಿಸುವುದನ್ನ ಕಂಪನಿ ನಿಲ್ಲಿಸುತ್ತಿದೆ. ಈಗ ಕಂಪನಿಯು ತಮ್ಮ ಹಳೆಯ ಸಾಫ್ಟ್ ವೇರ್ ʼ ನಲ್ಲಿ ಚಾಲನೆಯಲ್ಲಿರುವ ಸ್ಮಾರ್ಟ್ ಫೋನ್ ʼ ಗಳನ್ನ ಬಳಸುವ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ಹಾಗಾದ್ರೆ , ಕಂಪನಿಯು ಯಾವ ಮಾದರಿಗಳನ್ನ ಬೆಂಬಲಿಸುವುದನ್ನ ನಿಲ್ಲಿಸಿದೆ ಅನ್ನೋದನ್ನ ನೋಡೋಣಾ ಬನ್ನಿ. ಈ ಮಾದರಿಗಳ ಮೇಲೆ ಬೆಂಬಲವಿಲ್ಲ : ಕಂಪನಿಯು ಈಗ ಬ್ಲ್ಯಾಕ್ ಬೆರ್ರಿ ಓಎಸ್( BlackBerry OS), 7.1 ಓಎಸ್( 7.1 OS), ಪ್ಲೇಬುಕ್ ಓಎಸ್ 2.1 ಸರಣಿ( Playbook OS 2.1 Series) ಮತ್ತು ಬ್ಲ್ಯಾಕ್ ಬೆರ್ರಿ 10(BlackBerry 10) ನಲ್ಲಿ ಚಲಿಸುವ ಸ್ಮಾರ್ಟ್ ಫೋನ್ ʼ ಗಳ ಮೇಲಿನ ಬೆಂಬಲವನ್ನ ಸ್ಥಗಿತಗೊಳಿಸಲಿದೆ ಎಂದು ಕಂಪನಿಯು ಗುರುವಾರ ಅಧಿಕೃತವಾಗಿ ಘೋಷಿಸಿದೆ. ಅದೇ ಸಮಯದಲ್ಲಿ , ಕಂಪನಿಯು ಈ ಸಾಫ್ಟ್ ವೇರ್ ʼ ಗಳನ್ನ ಬಳಸುವ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಅದು ಈಗ ಈ ಸಾಫ್ಟ್ ವೇರ್ ʼ ಗಳಿಗೆ ನವೀಕರಣಗಳನ್ನ ಒದಗಿಸುವುದನ್ನು ನಿಲ್ಲಿಸುತ್ತಿದೆ. ಇದರಿಂದ ಈ ಸಾಧನಗಳ ವೃತ್ತಿ ಅಥವಾ ವೈ-ಫೈ ಇನ್ನೂ ಕಾರ್ಯನಿರ್ವಹಿಸುತ್ತಿದೆ. ಇದು ಈ ಸ್ಮಾರ್ಟ್ ಫೋನ್ ...

ಈ ರಾಜ್ಯದಲ್ಲಿ ಭೀಕರವಾಗಿರಲಿದೆಯಂತೆ 'ಕೊರೊನಾ' ಮೂರನೇ ಅಲೆ : ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ಆರೋಗ್ಯ ತಜ್ಞರು

  ಫೆಬ್ರವರಿ   ಅಥವಾ   ಮಾರ್ಚ್   ತಿಂಗಳಲ್ಲಿ   ಕೊರೋನಾ   ಮೂರನೇ   ಅಲೆ ತಾರಕಕ್ಕೇರಲಿದೆ ಎಂದು   ಈಗಾಗಲೇ   ಆರೋಗ್ಯ   ತಜ್ಞರು   ಮಾಹಿತಿ   ನೀಡಿದ್ದಾರೆ  . ಇದೀಗ ಮೂರನೇ ಅಲೆಯ ವೇಳೆ ಮಹಾರಾಷ್ಟ್ರದಲ್ಲಿ ದಿನವೊಂದರಲ್ಲೇ 2 ಲಕ್ಷ ಕೊರೊನಾ ಪ್ರಕರಣಗಳು ಪತ್ತೆ ಆಗಲಿವೆ ಎಂದು ಮಹಾರಾಷ್ಟ್ರದ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ಜನವರಿ 3 ನೇ ವಾರದಲ್ಲಿ ಮಹಾರಾಷ್ಟ್ರದಲ್ಲಿ ಒಟ್ಟು 80 ಲಕ್ಷ ಕೇಸ್ ಪತ್ತೆಯಾಗುವ ಸಾಧ್ಯತೆ ಇದೆ. ಇದರಿಂದ ಮಹಾರಾಷ್ಟ್ರವೊಂದರಲ್ಲೇ 80 ಸಾವಿರ ಸಾವು ಸಂಭವಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತಗಳಿಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಕೊರೋನಾ ಮೊದಲ ಅಲೆ ಬಂದಾಗಿನಿಂದಲೂ ಇಡೀ ದೇಶದಲ್ಲೇ ಅತಿಹೆಚ್ಚು ಕೊರೋನಾ ಪ್ರಕರಣಗಳು ಕಂಡುಬಂದಿದ್ದು , ಮಹಾರಾಷ್ಟ್ರದಲ್ಲಿ. ಆದರೆ ಮೂರನೇ ಅಲೆ ವೇಳೆ ಅದು ಇನ್ನಷ್ಟು ಗಂಭೀರವಾಗಿರಲಿದೆ ಎಂದು ಆರೋಗ್ಯ ತಜ್ಞರು ಮಾಹಿತಿ ನೀಡಿದ್ದಾರೆ.