Skip to main content

Posts

Showing posts from December, 2021

ಮಧ್ಯಪ್ರದೇಶದಲ್ಲಿ ಖಾಸಗಿ ಶಾಲೆಗೆ ನೋಟಿಸ್: ಪ್ರಶ್ನೆಪತ್ರಿಕೆಯಲ್ಲಿ `ಕರೀನಾ ಸೈಫ್ ಅಲಿಖಾನ್ ಇವರ ಮಗನ ಪೂರ್ಣ ಹೆಸರು ಏನು ?

ನಿಮಾರ (ಮಧ್ಯಪ್ರದೇಶ)  - ಖಾಂಡವಾ ನಗರದಲ್ಲಿನ ' ಅಕೆಡಮಿಕ್ ಹೈಟ್ಸ್ ಪಬ್ಲಿಕ್ ಸ್ಕೂಲ್ ' ನ ಪ್ರಶ್ನೆಪತ್ರಿಕೆಯಲ್ಲಿ ' ಕರೀನಾ ಕಪೂರ ಮತ್ತು ಸೈಫ್ ಅಲಿ ಖಾನ್ ಇವರ ಮಗನ ಹೆಸರೇನು ?' ಎಂದು ಪ್ರಶ್ನೆ ಕೇಳಲಾಗಿತ್ತು. ಈ ಬಗ್ಗೆ ಟೀಕೆ ವ್ಯಕ್ತವಾದಾಗ ಶಾಲೆಗೆ ಕಾರಣ ತೋರಿಸಿ ಎಂಬ ನೋಟಿಸ್ ಜಾರಿ ಮಾಡಲಾಗಿದೆ. ಜೊತೆಗೆ ಶಾಲೆಯ ಶಿಕ್ಷಣ ವಿಭಾಗವು ಕ್ರಮ ಕೈಗೊಂಡಿರುವುದಾಗಿ ಹೇಳಲಾಗಿದೆ. ಅಕೆಡಮಿಕ್ ಹೈಟ್ಸ್ ಪಬ್ಲಿಕ್ ಸ್ಕೂಲ್ ಆರನೇ ತರಗತಿಯ ಮಕ್ಕಳಿಗೆ ಪರೀಕ್ಷೆಯಲ್ಲಿ ಈ ಪ್ರಶ್ನೆ ವಿಚಾರಿಸಿತ್ತು. ಶಾಲೆಯ ಈ ಪ್ರಶ್ನೆಗೆ ಪಾಲಕ ಶಿಕ್ಷಕ ಸಂಘವು ತೀವ್ರ ಪ್ರತಿಕ್ರಿಯೆ ನೀಡಿದೆ , ' ಶಾಲೆಗೆ ಪ್ರಶ್ನೆ ಕೇಳುವುದಿದ್ದರೆ , ಮಹಾಪುರುಷರ ವಿಷಯವಾಗಿ ಕೇಳಬಹುದಾಗಿತ್ತು ', ಎಂದು ಹೇಳಿದೆ.

12 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ 'ಕೋವಿಡ್ ಲಸಿಕೆ' ತುರ್ತು ಬಳಕೆಗೆ ಡಿಜಿಸಿಐ ಅನುಮೋದನೆ.

12 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್- 19 ಲಸಿಕೆ ತುರ್ತು ಬಳಕೆಗೆ ಡಿಜಿಸಿಐ ಅನುಮೋದನೆ ನೀಡಿದೆ. ದೇಶದಲ್ಲಿ ಮಹಾಮಾರಿ ಕೊರೊನಾ ಸೋಂಕಿನ ಮೂರನೇ ಅಲೆ ಭೀತಿ ಶುರುವಾಗಿದ್ದು , ಮಹಾಮಾರಿ ಕೊರೊನಾ ಮಕ್ಕಳನ್ನೇ ಟಾರ್ಗೆಟ್ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ 12 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್- 19 ಲಸಿಕೆಯನ್ನು ತುರ್ತು ಬಳಕೆಗೆ ಡಿಜಿಸಿಐ ಶನಿವಾರ ಭಾರತ್ ಬಯೋಟೆಕ್ ಗೆ ಅನುಮೋದನೆ ನೀಡಿದೆ. ದೇಶದಲ್ಲಿ ಕೊರೊನಾ ಸೋಂಕಿನ ನಡುವೆ ಒಮಿಕ್ರಾನ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದು , ಮುನ್ನೆಚ್ಗರಿಕೆ ಕ್ರಮವಾಗಿ ಹಲವು ರಾಜ್ಯಗಳಲ್ಲಿ ಟಫ್ ರೂಲ್ಸ್ ಜಾರಿಗೆ ಬಂದಿದೆ. 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯ ವೇಗವಾಗಿ ಸಾಗುತ್ತಿದೆ. ತಹ ಸಂದರ್ಭದಲ್ಲಿ 12 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್- 19 ಲಸಿಕೆಯನ್ನು ತುರ್ತು ಬಳಕೆಗೆ ಡಿಜಿಸಿಐ ಶನಿವಾರ ಭಾರತ್ ಬಯೋಟೆಕ್ ಗೆ ಅನುಮೋದನೆ ನೀಡಿದೆ.  

2022 ರಲ್ಲಿ ಜಗತ್ತಿನ ಭವಿಷ್ಯ ನುಡಿದ ಬಾಬಾ ವೆಂಗಾ : ಭಾರತದ ಬಗ್ಗೆಯೂ ಭವಿಷ್ಯ ಹೇಳಿದ ಬಾಬಾ ವೆಂಗಾ.

  ಭವಿಷ್ಯದಲ್ಲಿ ಏನು ಅಡಗಿದೆ ಎಂದು ಯಾರೂ ಹೇಳಲು ಸಾಧ್ಯವಿಲ್ಲ.ಆದರೆ ಕೆಲವರು ಭವಿಷ್ಯ ನುಡಿಯುತ್ತಾರೆ. ಬಾಬಾ ವೆಂಗಾ ಪ್ರಪಂಚದ ಪ್ರಸಿದ್ಧ ಪ್ರವಾದಿ. ಬಲ್ಗೇರಿಯನ್ ಅತೀಂದ್ರಿಯ ಬಾಬಾ ವೆಂಗಾ ಬಾಲ್ಯದಿಂದಲೂ ಕುರುಡರಾಗಿದ್ದರು. ಈಗ ಬಾಬಾ ವೆಂಗಾ ಅವರ ಐದು ದೊಡ್ಡ ಭವಿಷ್ಯವಾಣಿಗಳು 2022 ರ ಬಗ್ಗೆ ಹೊರಬಂದಿವೆ. ಮಾಧ್ಯಮ ವರದಿಗಳ ಪ್ರಕಾರ , ಬಾಬಾ ವೆಂಗಾ ಅವರ ಭವಿಷ್ಯವಾಣಿಯೊಂದರಲ್ಲಿ ಭಾರತವನ್ನೂ ಉಲ್ಲೇಖಿಸಿದ್ದಾರೆ. ಬಾಬಾ ವೆಂಗಾ ಅವರ ಪ್ರಕಾರ 2022 ವರ್ಷ ಹೇಗಿರುತ್ತದೆ ಎಂದು ತಿಳಿಯಿರಿ 2022 ರ ಬಗ್ಗೆ ಬಾಬಾ ವಂಗಾ ಅವರ ಭವಿಷ್ಯ ಭಾರತದಲ್ಲಿ ತೀವ್ರ ಬಿಸಿಯಾಗಲಿದೆ: ಇಲ್ಲಿನ ತಾಪಮಾನ 50 ಡಿಗ್ರಿ ಸೆಲ್ಸಿಯಸ್ ತಲುಪಲಿದ್ದು , ಬೆಳೆಗಳ ಮೇಲೆ ಮಿಡತೆಗಳ ದಾಳಿಯಾಗಲಿದೆ ಎಂದು ಬಾಬಾ ವೆಂಗಾ ಭಾರತದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಈ ಕಾರಣಗಳಿಂದ ಭಾರತದಲ್ಲಿ ಜನರು ಕ್ಷಾಮವನ್ನು ಎದುರಿಸಬೇಕಾಗಬಹುದು. ಅದೇ ರೀತಿ 2022 ರಲ್ಲಿ ಆಸ್ಟ್ರೇಲಿಯಾ ಸೇರಿದಂತೆ ಏಷ್ಯಾದ ಹಲವು ದೇಶಗಳು ಪ್ರವಾಹಕ್ಕೆ ಸಿಲುಕಲಿವೆ. ಇವರು 2004 ರ ಸುನಾಮಿಯ ಮುನ್ಸೂಚನೆಯನ್ನು ನೀಡಿದ್ದರು. ವೈರಸ್ ದಾಳಿ , ಭೂಕಂಪ , ಸುನಾಮಿ ಇರುತ್ತದೆ. ಕರೋನಾ ಸಾಂಕ್ರಾಮಿಕದ ಏಕಾಏಕಿ ಮುಂದುವರಿಯುತ್ತದೆ. ಅಷ್ಟೇ ಅಲ್ಲ ಹೊಸ ವೈರಸ್‌ನ ದಾಳಿಯೂ ಆಗಲಿದೆ. ಸೈಬೀರಿಯಾದಲ್ಲಿ ಹೊಸ ಮಾರಣಾಂತಿಕ ವೈರಸ್ ಹುಟ್ಟಲಿದೆ. ಅದು ಮನುಕುಲಕ್ಕೆ ಅಪಾಯವನ್ನುಂಟುಮಾಡುತ್ತದೆ. ಅಷ್ಟೇ ಅಲ್ಲ , ಈ ಸಮಯದಲ್...

ವೀಡಿಯೋ ವೈರಲ್: ಗಾಳಿಪಟದ ಹಗ್ಗದೊಂದಿಗೆ ಹಾರಿ ಹೋದ ವ್ಯಕ್ತಿ:

  ಗಾಳಿ ಬಲವಾಗಿ ಬೀಸಿದ ಕಾರಣ ಗಾಳಿಪಟದಂತೆ ಹಗ್ಗ ಹಿಡಿದ ವ್ಯಕ್ತಿಯೂ ಹಾರಿಹೋದ ವಿಲಕ್ಷಣ ಘಟನೆ ನಡೆದಿದೆ. ಈ ಘಟನೆ ಶ್ರೀಲಂಕಾದಲ್ಲಿ ನಡೆದಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದ್ದು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕೆಲವು ದಿನಗಳ ಹಿಂದೆ ಪ್ಯಾರಾಚೂಟ್​ನಿಂದ ಇಬ್ಬರು ಮಹಿಳೆಯರು ಹಗ್ಗ ತುಂಡಾಗಿ ಸಮುದ್ರಕ್ಕೆ ಬಿದ್ದ ವೀಡಿಯೋ ವೈರಲ್​ ಆಗಿತ್ತು. ಇದೀಗ ವ್ಯಕ್ತಿಯೊಬ್ಬ ಗಾಳಿಪಟದ ದಾರದೊಂದಿಗೆ ಹಾರಿ ಹೋಗಿ ಕೆಲವು ಸೆಕೆಂಡುಗಳ ಗಾಳಿಯಲ್ಲಿ ಹಾರಾಡಿ ನಂತರ ನೆಲಕ್ಕೆ ಬಿದ್ದ ವೀಡಿಯೋ ವೈರಲ್​ ಅಗಿದೆ. ಹೌದು ನೀವು ಓದಿದ್ದು ನಿಜ ಇಲ್ಲೊಬ್ಬ ವ್ಯಕ್ತಿ ಗಾಳಿಪಟ ಹಾರಿಸುತ್ತಿದ್ದಾಗ ಸೆಣಬಿನ ದಾರ ಹಿಡಿದುಕೊಂಡಿದ್ದ. ಆದರೆ ಗಾಳಿ ಬಲವಾಗಿ ಬೀಸಿದ ಕಾರಣ ಗಾಳಿಪಟದಂತೆ ಹಗ್ಗ ಹಿಡಿದ ವ್ಯಕ್ತಿಯೂ ಹಾರಿಹೋದ ವಿಲಕ್ಷಣ ಘಟನೆ ನಡೆದಿದೆ. ಈ ಘಟನೆ ಶ್ರೀಲಂಕಾದಲ್ಲಿ ನಡೆದಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದ್ದು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ವೀಡಿಯೋದಲ್ಲಿ ಗಾಳಪಟದಂತೆ ವ್ಯಕ್ತಿ ತೂಗಾಡುತ್ತಿರುವುದು ಕಾಣಬಹುದು. ವರದಿಯ ಪ್ರಕಾರ , ಸೆಣಬಿನ ದಾರದಲ್ಲಿ ಗಾಳಿಪಟವನ್ನು ಕಟ್ಟಲು ವ್ಯಕ್ತಿ ದಾರವನ್ನು ಹಿಡಿದುಕೊಂಡಿದ್ದರು. ಆದರೆ ಅವನ ಹಿಂದೆ ನಿಂತಿದ್ದ ಕೆಲವು ಹುಡುಗರು ದಾರವನ್ನು ಕೈಬಿಟ್ಟಿದ್ದಾರೆ. ಈ ವೇಳೆ ಗಾಳಿ ಜೋರಾಗಿ ಬೀಸಿದೆ ಇದರಿಂದ ಹಗ್ಗದ ಜತೆಗೆ ವ್ಯಕ್ತಿಯೂ...

ಹಳೇ ಪದ್ಧತಿಯಂತೆ ಮೇನಲ್ಲಿ ಎಸ್‌ಎಸ್‌ಎಲ್ ಸಿ ಪರೀಕ್ಷೆ ನಡೆಸಲು ಚಿಂತನೆ

  ಬೆಂಗಳೂರು , ಡಿ. 25: ಕರ್ನಾಟಕ ರಾಜ್ಯದಲ್ಲಿ 2021-22 ನೇ ಸಾಲಿನ ಎಸ್‌ಎಸ್‌ಎಲ್ ಸಿ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳ ನೋಂದಣಿ ಪ್ರಕ್ರಿಯೆ ದಿನಾಂಕ ವಿಸ್ತರಣೆ ಮಾಡಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಧಿಸೂಚನೆ ಹೊರಡಿಸಿದೆ. ಎಸ್‌ಎಸ್‌ಎಲ್ ಸಿ ಮುಖ್ಯ ಪರೀಕ್ಷೆಗೆ ನೋಂದಣಿ ಮಾಡಲು ಡಿ. 27 ಕ್ಕೆ ಕೊನೆ ದಿನಾಂಕ ನಿಗದಿ ಪಡಿಸಿತ್ತು. ಕ್ರಿಸ್ ಮಸ್ ರಜೆ ಹಾಗೂ ಹಲವು ಶಾಲಾ ವಿದ್ಯಾರ್ಥಿಗಳು ನೋಂದಣಿ ಮಾಡದ ಹಿನ್ನೆಲೆಯಲ್ಲಿ ಮುಖ್ಯ ಪರೀಕ್ಷೆಗೆ ನೋಂದಣಿ ಮಾಡುವ ಕಾಲಾವಕಾಶವನ್ನು ಜ. 10 ಕ್ಕೆ ವಿಸ್ತರಣೆ ಮಾಡಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಧಿಸೂಚನೆ ಹೊರಡಿಸಿದೆ . 2021-22 ನೇ ಸಾಲಿನ ಎಸ್‌ಎಸ್‌ಎಲ್ ಸಿ ವಿದ್ಯಾರ್ಥಿಗಳ ನೋಂದಣಿ , ಪರೀಕ್ಷಾ ಶುಲ್ಕ ಪಾವತಿ ಹಾಗೂ ಪ್ರಸ್ತಾವನೆ ಸಲ್ಲಿಕೆ ದಿನಾಂಕವನ್ನು ಹತ್ತು ದಿನಗಳ ಕಾಲ ವಿಸ್ತರಣೆ ಮಾಡಲಾಗಿದೆ. ಅದರಂತೆ ಮಂಡಳಿ ಜಾಲ ತಾಣದ ಮೂಲಕ ವಿದ್ಯಾರ್ಥಿಗಳ ಮಾಹಿತಿಯನ್ನು ಮಂಡಳಿ ವೆಬ್ ತಾಣದಲ್ಲಿ ನೋಂದಣಿ ಮಾಡಲು 2022 ಜ. 10 ಕೊನೆ ದಿನಾಂಕ ನಿಗದಿ ಮಾಡಲಾಗಿದೆ. ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಚಲನ್ ಮುದ್ರಿಸಿಕೊಳ್ಳಲು ಕೊನೆ ದಿನಾಂಕವನ್ನು 2022 ಜನವರಿ 17 ನಿಗದಿ ಪಡಿಸಲಾಗಿದೆ. ಜ. 19 ರೊಳಗೆ ಪರೀಕ್ಷಾ ಶುಲ್ಕ ಪಾವತಿಸಲು ಸೂಚಿಸಲಾಗಿದೆ. ಹಿಂದಿನ ವರ್ಷದ ಅನುತ್ತಿರ್ಣ ವಿದ್ಯಾರ್ಥಿಗಳು ಹಳೆಯ ಪದ್ದತಿಯಂತೆ ಜ. 19 ರೊಳಗೆ ಪರೀಕ್ಷಾ ಶುಲ್ಕವನ್ನು ಸ...